ಬಹುಭಾಷಾ ನಟಿಯ ಅಪಹರಣ ಪ್ರಕರಣ ದಿಲೀಪ್‌ ವಿರುದ್ಧ ಆರೋಪಪಟ್ಟಿ


Team Udayavani, Aug 6, 2017, 7:00 AM IST

dilip.jpg

ಕೊಚ್ಚಿ : ಬಹುಭಾಷಾ ನಟಿಯನ್ನು ಅಪಹರಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಸಂಚು ರೂಪಿಸಿದ ಆರೋಪದ ಮೇಲೆ ಬಂಧಿತನಾಗಿರುವ ನಟ ದಿಲೀಪ್‌ ವಿರುದ್ಧ ಪೊಲೀಸರು ಶೀಘ್ರದಲ್ಲಿಯೇ ಆರೋಪಪಟ್ಟಿಯನ್ನು ಸಲ್ಲಿಸುವ ಸಾಧ್ಯತೆ ಇದೆ. 

ಫೆ. 17ರಂದು  ನಡೆದ  ಈ  ಪ್ರಕರಣದಲ್ಲಿ  ಒಟ್ಟು  13 ಮಂದಿ  ಆರೋಪಿಗಳನ್ನು  ಹೆಸರಿಸಲಾಗಿದ್ದು  ನಟ ದಿಲೀಪ್‌ನನ್ನು ಎರಡನೇ ಆರೋಪಿ ಎಂದು  ಪೊಲೀಸರು  ಹೆಸರಿಸಿ ದ್ದಾರೆ.  ಪ್ರಕರಣದ  ಪ್ರಮುಖ ಆರೋಪಿಯಾಗಿರುವ  ಪಲ್ಸರ್‌ ಸುನಿ ವಿರುದ್ಧ  ಸಾಮೂಹಿಕ ಅತ್ಯಾಚಾರದ  ಸಹಿತ  ವಿವಿಧ ಪ್ರಕರಣಗಳನ್ನು  ದಾಖಲಿಸಲಾಗಿದ್ದರೆ  ನಟ ದಿಲೀಪ್‌ ವಿರುದ್ಧ ಲೈಂಗಿಕ ಹಲ್ಲೆಯ ಸಂಚು ರೂಪಿಸಿದ ಆರೋಪವನ್ನು  ಹೊರಿಸಲಾಗಿದೆ.  ಈ ಆರೋಪ ಸಾಬೀತಾದದ್ದೇ ಆದಲ್ಲಿ 20ವರ್ಷಗಳ  ಜೈಲು ಶಿಕ್ಷೆಯನ್ನು  ದಿಲೀಪ್‌ ಅನುಭವಿಸುವ ಸಾಧ್ಯತೆಗಳಿವೆ. 

ಪ್ರಕರಣಕ್ಕೆ  ಸಂಬಂಧಿಸಿದಂತೆ  ಪೊಲೀಸರು  ಸಲ್ಲಿಸಿರುವ  ಪ್ರಾಥಮಿಕ ಆರೋಪಪಟ್ಟಿಯಲ್ಲಿ  ಪಲ್ಸರ್‌ ಸುನಿ, ಕಾರು ಚಾಲಕ ಮಾರ್ಟಿನ್‌ ಆಂಟೋನಿ, ಮಣಿಕಂಠನ್‌, ವಿಜೇಶ್‌, ಪ್ರದೀಪ್‌  ಮತ್ತು ಚಾರ್ಲ್ಸ್‌ ಆಂಟೋನಿಯನ್ನು ಆರೋಪಿಗಳಾಗಿ  ಹೆಸರಿಸಲಾಗಿದ್ದರೆ  ಪೂರಕ ಆರೋಪ ಪಟ್ಟಿಯಲ್ಲಿ  ಮೇಸಿŒ ಸುನಿಲ್‌, ವಿಷ್ಣು, ವಿಪಿನ್‌ ಲಾಲ್‌ ಮತ್ತು ದಿಲೀಪ್‌ನನ್ನೂ  ಆರೋಪಿಗಳನ್ನಾಗಿ ಹೆಸರಿಸುವ ಸಾಧ್ಯತೆಗಳಿವೆ. ಸದ್ಯ  ಪೊಲೀಸರು  ತನಿಖೆಯ  ಅಂತಿಮ ಹಂತಕ್ಕೆ ಬಂದಿದ್ದು  ಆರೋಪಿಗಳನ್ನು  ಪ್ರಶ್ನಿಸುವ  ಮತ್ತು ಅವರಿಂದ  ಹೇಳಿಕೆಗಳನ್ನು  ದಾಖಲಿಸಿಕೊಳ್ಳುವ  ಕಾರ್ಯದಲ್ಲಿ ನಿರತರಾಗಿದ್ದು  ತಿಂಗಳ ಒಳಗಾಗಿ  ಆರೋಪಪಟ್ಟಿ  ಸಲ್ಲಿಸುವ ಸಾಧ್ಯತೆಗಳಿವೆ. 

ಇನ್ನೀರ್ವರು ಆರೋಪಿಗಳ  ಬಂಧನ ಸಾಧ್ಯತೆ
ಈ  ಪ್ರಕರಣಕ್ಕೆ  ಸಂಬಂಧಿಸಿದಂತೆ  ಪೊಲೀಸರು ಮುಂದಿನ ಕೆಲವೇ ದಿನಗಳಲ್ಲಿ  ಇನ್ನೀರ್ವರು  ಆರೋಪಿಗಳನ್ನು ಬಂಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆದರೆ ಈ ಈರ್ವರು ಆರೋಪಿಗಳ ಬಗೆಗೆ  ಹೆಚ್ಚಿನ ಮಾಹಿತಿಯನ್ನು ನೀಡಲು  ಪೊಲೀಸರು  ನಿರಾಕರಿಸಿದ್ದಾರೆ. 

ಆದರೆ ನಟಿಗೆ ಚಲಿಸುತ್ತಿರುವ ಕಾರಿನಲ್ಲಿ ಲೈಂಗಿಕ ಕಿರುಕುಳ ನೀಡಿದ ದೃಶ್ಯಾವಳಿಗಳನ್ನು ಚಿತ್ರೀಕರಿಸಲಾಗಿದ್ದ ಮೊಬೈಲ್‌ ಫೋನ್‌ನ್ನು ಪತ್ತೆ ಹಚ್ಚಲು ಪೊಲೀಸರಿಗೆ ಈ ವರೆಗೆ  ಸಾಧ್ಯವಾಗಿಲ್ಲ.  

ಏತನ್ಮಧ್ಯೆ  ನಟ ದಿಲೀಪ್‌ ಜಾಮೀನು  ಕೋರಿ  ಸೋಮವಾರದಂದು ಮತ್ತೆ ನ್ಯಾಯಾಲಯಕ್ಕೆ  ಅರ್ಜಿ ಸಲ್ಲಿಸುವ ಸಾಧ್ಯತೆ  ಇದೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.