ಬರಗಾಲ ಪ್ರತಿರೋಧ ಚಟುವಟಿಕೆಗಳು ಚುರುಕು
Team Udayavani, Apr 8, 2019, 6:30 AM IST
ಕಾಸರಗೋಡು: ಬೇಸಿಗೆ ಬಿರುಸುಗೊಂಡಿರುವ ಹಿನ್ನೆಲೆ ಯಲ್ಲಿ ಬರಗಾಲ ಪ್ರತಿರೋಧ ಚಟುವಟಿಕೆಗಳು ಜಿಲ್ಲೆಯಲ್ಲಿ ಸಕ್ರಿಯವಾಗಿವೆ.
ಕುಡಿಯುವ ನೀರಿನ ಬರ ಅನುಭವಿಸುತ್ತಿರುವ ವಿವಿಧ ಪ್ರದೇಶಗಳಿಗೆ ಕುಡಿ ಯುವ ನೀರು ಪೂರೈಕೆ ನಡೆದಿದೆ. ಈ ಸಂಬಂಧ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯ ದರ್ಶಿಗಳ ಸಭೆ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ನಡೆಯಿತು. ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು ಅಧ್ಯಕ್ಷತೆ ವಹಿಸಿದ್ದರು.
ಬರಗಾಲ ತೀವ್ರವಾಗಿರುವ ಪ್ರದೇಶಗಳಿಗೆ ನೀರು ಪೂರೈಕೆ ವೇಳೆ ಆದ್ಯತೆ ನೀಡಬೇಕು. ಚುನಾವಣೆ ನೀತಿ ಸಂಹಿತೆ ಪೂರ್ಣ ರೂಪದಲ್ಲಿ ಪಾಲಿಸುವ ಮೂಲಕ ಸಿಬ್ಬಂದಿ ಕರ್ತವ್ಯ ನಡೆಸಬೇಕು ಎಂದು ಹೆಚ್ಚುವರಿ ದಂಡನಾಧಿಕಾರಿ ಈ ವೇಳೆ ತಿಳಿಸಿದರು.
ಜಿಲ್ಲೆಯ 7 ಗ್ರಾಮ ಪಂಚಾ ಯತ್ಗಳಲ್ಲಿ ಮತ್ತು ಒಂದು ನಗರಸಭೆ ವ್ಯಾಪ್ತಿ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಕ್ರಮ ನಡೆಸಲಾಗುತ್ತಿದೆ.
ಒಂದು ವಾರದ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಕೊಟೇಷನ್ ಮೂಲಕ ಗೊತ್ತುಮಾಡಿರುವ ವಾಹ ನಗಳಲ್ಲಿ ಬಾಡಿಗೆ ರೂಪ ದಲ್ಲಿ ನೀರಿನ ಸರಬರಾಜು ನಡೆಸ ಲಾಗುವುದು.
ಈ ವೇಳೆ ಎಲ್ಲ ರೀತಿಯ ಮಾನದಂಡಗಳನ್ನೂ ಪಾಲಿ ಸಲಾಗು ವುದು. ಸ್ಥಳೀಯಾಡಳಿತ ಸಂಸ್ಥೆಗಳು ಇದರ ಖರ್ಚುವೆಚ್ಚವನ್ನು ಸ್ವಂತ ನೆಲೆಯಲ್ಲಿ ಕಂಡುಕೊಳ್ಳಬೇಕು. ಹೆಚ್ಚುವರಿ ಅಗತ್ಯವಿದ್ದರೆ ಸರಕಾರ ದಿಂದ ಒದಗಿಸುವ ಕ್ರಮ ಕೈಗೊಳ್ಳ ಲಾಗುವುದು ಎಂದು ಸಂಬಂಧ ಪಟ್ಟವರು ಸಭೆಯಲ್ಲಿ ತಿಳಿಸಿದರು.
ಜಲ ವಿತರಣೆ ವೇಳೆ ಗುಣಮಟ್ಟದ ಖಚಿತತೆಯೂ ಇರಬೇಕು ಎಂದು ಹೆಚ್ಚುವರಿ ದಂಡನಾಧಿಕಾರಿ ತಿಳಿಸಿ ದರು. ಈಗ 328 ಕಿಯಾಸ್ಕ್ಗಳು ಜಿಲ್ಲೆಯಲ್ಲಿವೆ.
ಹೆಚ್ಚುವರಿ ಕಿಯಾಸ್ಕ್ಗಳು ಅಗತ್ಯವಿದೆ ಎಂಬ ಕುರಿತು ಸ್ಥಳೀಯಾಡಳಿತ ಸಂಸ್ಥೆಗಳು ಸರ ಕಾರಕ್ಕೆ ಮನವಿ ಸಲ್ಲಿಸಿವೆ. ಈ ಸಂಬಂಧ ಸರಕಾರಕ್ಕೆ ಅರ್ಜಿ ಸಲ್ಲಿಸ ಲಾಗಿದೆ ಎಂದವರು ಹೇಳಿದರು.
ತಾಪಮಾನ ಗರಿಷ್ಠ ಮಟ್ಟಕ್ಕೆ ತಲಪಿರುವ ಹಿನ್ನೆಲೆಯಲ್ಲಿ ಕಾರ್ಮಿ ಕರ ದುಡಿಮೆಯ ಸಮಯ ಪುನರ್ ರಚಿಸಲಾಗಿದ್ದು, ಇದನ್ನು ಕಡ್ಡಾಯವಾಗಿ ಪಾಲಿಸುವ ಕುರಿತು ನಗರಸಭೆ-ಪಂಚಾಯತ್ ಅಧಿಕಾ ರಿಗಳು ಖಚಿತ ಪಡಿಸಿಕೊಳ್ಳಬೇಕು ಎಂದು ತಿಳಿಸಲಾಯಿತು. ಸಭೆ ಯಲ್ಲಿ ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಟಿ.ಜೆ.ಅರುಣ್, ಹಿರಿಯ ವರಿಷ್ಠಾಧಿಕಾರಿ ಕೆ.ವಿನೋದ್ ಕುಮಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ