ಕುಡಿಯುವ ನೀರಿಗೆ ಬರ: ಶಾಶ್ವತ ಪರಿಹಾರಕ್ಕೆ ಯೋಜನೆ ಸಿದ್ಧ
Team Udayavani, May 6, 2019, 6:15 AM IST
ಕುಂಬಳೆ: ಹರಿಯುವ ನದಿಯ ನೀರನ್ನು ನೈಸರ್ಗಿಕವಾಗಿ ಸಂಗ್ರಹಿಸಿ ಜಿಲ್ಲೆಯ ಕುಡಿಯುವ ನೀರಿನ ಬರಕ್ಕೆ ಶಾಶ್ವತ ಪರಿಹಾರ ಒದಗಿಸಲು ಶಾಸ್ತ್ರೀಯ ಯೋಜನೆ ಸಿದ್ಧಪಡಿಸಲಾಗಿದೆ. ಈ ನಿಟ್ಟಿನಲ್ಲಿ ಮಂಜೇಶ್ವರ ತಾಲೂಕಿನಲ್ಲಿ 418 ಹೊಸ ಸಣ್ಣ ಕೆರೆಗಳನ್ನು ನಿರ್ಮಿಸಲಾಗುವುದು.
ನದಿಗಳಲ್ಲಿ ಸಹಜವಾಗಿ ಹರಿದು ಹೋಗುವ ನೀರನ್ನು ಬಳಸಿ, ನದಿಗಳ ಬದಿಯಲ್ಲಿ ನಿರ್ಮಿಸಲಾಗುವ ಜಲಾಶ್ರಯಗಳಲ್ಲಿ ಸಂಗ್ರಹಿಸಿ ಬಳಸುವ ಮಹತ್ವದ ಯೋಜನೆ ಇದಾಗಿದೆ. ಹತ್ತರಿಂದ ಹದಿನೈದು ಡಿಗ್ರಿ ವರೆಗಿನ ವ್ಯತ್ಯಾಸದಲ್ಲಿ ನೂತನ ಕಾಲುವೆಗಳನ್ನು ನಿರ್ಮಿಸಿ ಜಲಾಶ್ರಯಗಳಿಗೆ ನದಿ ನೀರು ತಲಪುವಂತೆ ಮಡಲಾಗುವುದು. ಕನಿಷ್ಠ 7x9x3 ಮೀಟರ್ ಆಳದ ಕೆರೆಗಳನ್ನು ನಿರ್ಮಿಸಲಾಗುವುದು.
ಜಲ ಲಭ್ಯತೆಗೆ ಅನುಸರಿಸಿ ಆಳ-ಅಗಲದಲ್ಲಿ ವ್ಯತ್ಯಾಸಗಳಿರುವುದು. ಶಿರಿಯದಲ್ಲಿ 179, ಉಪ್ಪಳದಲ್ಲಿ 150, ಮೊಗ್ರಾಲ್ ನಲ್ಲಿ 74, ಮಂಜೇಶ್ವರದಲ್ಲಿ 4, ಕುಂಬಳೆಯಲ್ಲಿ 4 ಜಲಾಶ್ರಯಗಳ ನಿರ್ಮಾಣವಾಗಲಿವೆ. ಈ ಮೂಲಕ ಸಮೀಪ ಪ್ರದೇಶಗಳ ನೀರಿನ ಮಟ್ಟ ಹೆಚ್ಚಳಕ್ಕೆ ಪೂರಕ ವಾತಾವರಣ ಸƒಷ್ಟಿಯಾಗಲಿದೆ. ಅಧಿಕ ಜಲ ಲಭಿಸುವಲ್ಲಿ ಹೆಚ್ಚುವರಿ ಜಲಾಶಯಗಳ ನಿರ್ಮಾಣ ನಡೆಯಲಿದೆ.
ಲ್ಯಾಟ್ರೈಟ್ ಮಣ್ಣಿರುವ ಪ್ರದೇಶವಾಗಿರುವ ಮಂಜೇಶ್ವರ ತಾಲೂಕಿನಲ್ಲಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರ ವಿಶೇಷ ಆಸಕ್ತಿ ಪ್ರಕಾರ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಈ ಯೋಜನೆ ಜಾರಿಗೊಳ್ಳಲಿದೆ. ಮುಂದಿನ ವರ್ಷಗಳಲ್ಲಿ ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ಈ ನಿಟ್ಟಿನಲ್ಲಿ 5 ಸಾವಿರ ಕೆರೆಗಳನ್ನು ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಯೋಜನೆಗೆ ಅಗತ್ಯವಿರುವ ನಿಧಿಯನ್ನು ಕಾಸರಗೋಡು ಅಭಿವೃದ್ಧಿ ಪ್ಯಾಕೇಜಿನಿಂದ ಬಳಸಲಾಗುವುದು. ಈ ಕುರಿತು ಮಾತುಕತೆ ನಡೆಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಜರುಗಿತು.
ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು, ಮಂಜೇಶ್ವರಗಳ ಜಿಲ್ಲಾ ಮಣ್ಣು ಸಂರಕ್ಷಣೆ ಅಧಿಕಾರಿ ವಿ.ಎಂ. ಅಶೋಕ್ ಕುಮಾರ್, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಸ್ಪೆಷಲ್ ಆಫೀಸರ್ ಇ.ಪಿ. ರಾಜ್ ಮೋಹನ್, ಹರಿತ ಕೇರಳಂ ಜಿಲ್ಲಾ ಸಂಚಾಲಕ ಎಂ.ಪಿ. ಸುಬ್ರಹ್ಮಣ್ಯನ್, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಮೇ 15ರ ಮುನ್ನ ನಿರ್ಮಾಣ ಕಾಮಗಾರಿ ಆರಂಭ
ಜಿಲ್ಲಾಡಳಿತದ ನೇತƒತ್ವದಲ್ಲಿ ಜಾರಿಗೊಳಿಸುವ ನದಿತಟ ಅಭಿವೃದ್ಧಿ ಯೋಜನೆಯಂಗವಾಗಿ ಈ ಚಟುವಟಿಕೆ ತ್ವರಿತಗತಿಯಲ್ಲಿ ಸಾಗುತ್ತಿದೆ.ಇದರ ಮೊದಲ ಹಂತವಾಗಿ ಮಂಜೇಶ್ವರ ತಾಲೂಕಿನ 5 ನದಿ ತಟಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. ಮಂಜೇಶ್ವರ, ಉಪ್ಪಳ, ಶಿರಿಯ, ಕುಂಬಳೆ, ಮೊಗ್ರಾಲ್ ನದಿಗಳ ಬದಿಯ ವಿವಿಧ ಪ್ರದೇಶಗಳಲ್ಲಿ ಕಿರು ಕೆರೆಗಳ ಸಹಿತ ಜಲಾಶಯಗಳ ನಿರ್ಮಾಣ ನಡೆಸಲಾಗುವುದು. ಖಾಸಗಿ, ಸರಕಾರಿ ಸ್ಥಳಗಳ ಸಹಿತ ಒಟ್ಟು 418 ಪ್ರದೇಶಗಳನ್ನು ಈ ನಿಟ್ಟಿನಲ್ಲಿ ಗುರುತಿಸಲಾಗಿದೆ. ಮೇ 15ರ ಮುನ್ನ ಕೆರೆಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್