ಕಾಸರಗೋಡು ವಿದ್ಯುತ್ ಜಾಗೃತಿ ಕಾರ್ಯಕ್ರಮ
Team Udayavani, May 5, 2019, 4:51 PM IST
ವಿದ್ಯುತ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿರುವ ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು
ಬದಿಯಡ್ಕ : ಕೇರಳ ಸರಕಾರಿ ವಿದ್ಯುನ್ಮಾನ ಇನ್ ಸ್ಪೆಕ್ಟರೇಟ್ ಇಲಾಖೆ ವತಿಯಿಂದ ರಾಜ್ಯ ವಿದ್ಯುತ್ ನಿಗಮ, ಎನರ್ಜಿ ಮೇನೆಜ್ಮೆಂಟ್ ಸೆಂಟರ್ ಅನಾರ್ಟ್, ರಾಜ್ಯ ಅಗ್ನಿ ಶಾಮಕ ಇಲಾಖೆಗಳ ಸಹಕಾರದೊಂದಿಗೆ ಮೇ 7 ರವರೆಗೆ ವಿದ್ಯುತ್ ಸುರಕ್ಷಾ ಸಪ್ತಾಹ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ವಿದ್ಯುತ್ ಜಾಗೃತಿ ಕಾರ್ಯಕ್ರಮ ಜರಗಿತು.
ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯುತ್ ವಿಭಾಗ ಇನ್ ಸ್ಪೆಕ್ಟರ್ ಒ.ಕೆ. ಆರ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕಾರಿ ಇಂಜಿನಿಯರ್ ಪಿ.ಜಯಕೃಷ್ಣನ್ ಪ್ರಧಾನ ಭಾಷಣ ಮಾಡಿದರು. ಸಹಾಯಕ ಕಾರ್ಯಕಾರಿ ಇಂಜಿನಿಯರ್ ನಾಗರಾಜ ಭಟ್, ಪ್ರಧಾನ ಸುರಕ್ಷೆ ಅಧಿಕಾರಿ ಕೆ.ಅಯೂಬ್, ಅನಾರ್ಟ್ ಜಿಲ್ಲಾ ಇಂಜಿನಿಯರ್ ಪಿ.ಎಂ.ರಿಯಾಸ್, ಅಗ್ನಿ ಶಾಮಕದಳ ಸಹಾಯಕ ಸ್ಟೇಷನ್ ಅಧಿಕಾರಿ ಕೆ.ಬಿ. ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಸಹಾಯಕ ವಿದ್ಯುತ್ ವಿಭಾಗ ಇನ್ಸ್ಪೆಕ್ಟರ್ ಕೆ.ಎಂ. ಶಾಹುಲ್ ಹಮೀದ್ ಸ್ವಾಗತಿಸಿದರು. ಟಿ.ಕೆ. ಆನಂದ್ ವಂದಿಸಿದರು.