ಅಬ್ಬರದ ಪ್ರಚಾರ ಭರಾಟೆ ಅಂತ್ಯ: ಇಂದು ಮತದಾನ


Team Udayavani, Apr 23, 2019, 6:30 AM IST

prachara-antya

ಕುಂಬಳೆ: ಹದಿನೇಳನೆಯ ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರದ ಭರಾಟೆ ರವಿವಾರ ಸಂಜೆ ಅಂತ್ಯ ಗೊಂಡಿತು.

ಚುನಾವಣೆ ಘೋಷಣೆಯಾದ ಬಳಿಕ ಹಳ್ಳಿ, ಗಲ್ಲಿ ಕೇರಿಗಳಲ್ಲಿ ವಾಹನಗಳಿಗೆ ಮೈಕ್‌ ಕಟ್ಟಿ ಪಕ್ಷದ ಅಭ್ಯರ್ಥಿಗೆ ಮತಯಾಚಿಸುವ ಪ್ರಚಾರ ನಿರಂತರವಾಗಿ ನಡೆಯುತ್ತಿತ್ತು.ಬಹಿರಂಗ ಸಭೆ, ಕಾರ್ನರ್‌ ಮೀಟಿಂಗ್‌ಗಳು ಕ್ಷೇತ್ರದಾದ್ಯಂತ ನಡೆಯುತ್ತಿತ್ತು.

ಕುಂಬಳೆ, ಉಪ್ಪಳ ಮಂಜೇಶ್ವರ ಹೊಸಂಗಡಿಗಳಲ್ಲಿ ಎಡರಂಗ,ಐಕ್ಯರಂಗ, ಎನ್‌ಡಿ.ಎ ಪಕ್ಷಗಳ ಕಾರ್ಯಕರ್ತರು ಬಹಿರಂಗ ಪ್ರಚಾರದ ಕೊನೆಯ ದಿನದಂದು ಬ್ಯಾಂಡ್‌ ವಾದ್ಯಮೇಳದೊಂದಿಗೆ ಅಮಿತೋತ್ಸಾಹದಿಂದ ಪಾಲ್ಗೊಂಡರು. ಯುವಕರೇ ಹೆಚ್ಚಾಗಿ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಪಕ್ಷದ ಯೂನಿಫಾರಂ ಮತ್ತು ಟೊಪ್ಪಿ ಧರಿಸಿ, ಪಕ್ಷದ ಧ್ವಜವನ್ನು ಮುಂಡಾಸು ಕಟ್ಟಿ ಸಂಭ್ರಮಿಸಿದರು.ವಾಹನಗಳ ಮೇಲೇರಿ ಭಾರೀಗಾತ್ರದ ಧ್ವಜ ಹಿಡಿದು ಅದನ್ನು ಸಾರ್ವಜನಿಕರತ್ತ ಬೀಸಿ ಜೈಕಾರ ಮೊಳಗಿಸಿ ಹಾಡಿಗೆ ತಕ್ಕಂತೆ ಕುಣಿದು ಕುಪ್ಪಳಿಸಿದರು.

ಬಹಿರಂಗ ಪ್ರಚಾರದ ಬಳಿಕ ಚುನಾವಣೆ ನಡೆಯುವ ಎ. 23ರಂದು ಬೆಳಗ್ಗಿನ ತನಕ ಮತ ಯಾಚಿಸಲು ಕಾನೂನಿನ ಅಡ್ಡಿ ಇಲ್ಲ.ಈ ದಿನದಲ್ಲಿ ಕಾರ್ಯಕರ್ತರು ಹಗಲು ಹೊತ್ತಿನಲ್ಲಿ ಮತಕ್ಕಾಗಿ ಪ್ರಚಾರ ನಡೆಸಿದರೆ ಇನ್ನು ಕೆಲವರು ಕೆಲವೊಂದು ಕಡೆಗಳಿಗೆ ರಾತ್ರಿ ಕಾಲದಲ್ಲಿ ಕೆಲವು ಕಾಲನಿಗಳಲ್ಲಿ ಮತದಾರರನ್ನು ಗುಪ್ತವಾಗಿ ಭೇಟಿ ನೀಡಿದರು. ತಮ್ಮ ಪಕ್ಷಕ್ಕೆ ಖಂಡಿತಾ ಮತ ದೊರೆಯದೆಂಬವರನ್ನು ಅತ್ತಿ¤ತ್ತ ವಾಲುತ್ತಿರುವ ಕೆಲವರನ್ನು ಕಂಡು ಕೊಂಡು ಇವರಿಗೆ ಕೈಬಿಸಿ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತಗಳನ್ನು ಗಟ್ಟಿ ಮಾಡಿಸಿಕೊಂಡ ಗುಪ್ತ ಸಂಪರ್ಕವೂ ನಡೆದಿದೆ.

ಒಟ್ಟಿನಲ್ಲಿ ಬಿಸಿಲ ತಾಪಮಾನವನ್ನೂ ಲೆಕ್ಕಿಸದೆ ಕೊನೆಯ ದಿನಗಳಲ್ಲಿ ಬಿರುಸಿನ ಪ್ರಚಾರ ನಡೆದಿದೆ. ಕಾಸರಗೋಡು ಲೋಕಸಭಾ ಕೇÒತ್ರದ 683 ಕೇಂದ್ರಗಳಲ್ಲಿ ಒಟ್ಟು 1,317 ಮತಕಟ್ಟೆಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಮತದಾನ ನಡೆಯಲಿದೆ.

ಪ್ರಚಾರ ತಂದ ಕಿರಿಕಿರಿ
ಆದರೆ ಇವರ ಸಂಭ್ರಮಾ ಚರಣೆ ಸಾರ್ವಜನಿಕರಿಗೆ ಕಿರಿಕಿರಿಯಾಯಿತು. ರಾಜ್ಯದ ಕೆಲಕಡೆಗಳಲ್ಲಿ ಪರಸ್ಪರ ಹಲ್ಲೆ ನಡೆದಿದೆ. ವಾಹನಗಳ ಸಂಚಾರಕ್ಕೆ ರಸ್ತೆ ತಡೆ ಉಂಟಾ ಯಿತು. ಪೊಲೀಸರು ಗುಂಪನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಜನರ ಸ್ವಾತಂತ್ರÂಕ್ಕೆ ತಡೆ ಉಂಟು ಮಾಡುವ ಈ ಪ್ರಚಾರ ಕಾರ್ಯಕ್ರಮವನ್ನು ನಿಬ‌ìಂಧಿಸಬೇಕೆಂಬ ಅಭಿಪ್ರಾಯ ಹೆಚ್ಚಿನವರಿಂದ ಕೇಳಿ ಬಂತು.

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.