ಡಿಜಿಟಲ್ ಪೇಮೆಂಟ್ ಪರಿಣಾಮಕಾರಿಯಾಗಲು ಇಪಿಒಎಸ್‌ ಮೆಷಿನ್‌ ಪೂರಕ


Team Udayavani, Jul 19, 2019, 5:08 AM IST

17KSDE16

ಕಾಸರಗೋಡು: ಗ್ರಾಮ ಕಚೇರಿಗಳಲ್ಲಿ ಶುಲ್ಕ ಪಾವತಿಸಬೇಕಿದ್ದರೆ ಇನ್ನು ಮುಂದೆ ಸಾಲಾಗಿ ಕಾದು ನಿಲ್ಲ ಬೇಕಿಲ್ಲ. ಇದಕ್ಕಾಗಿಯೇ ಸಿದ್ಧಗೊಂಡು ಜಾರಿಗೆ ಬಂದಿದೆ ಇ.ಪಿ.ಒ.ಎಸ್‌.ಮೆಷಿನ್‌.

ಎ.ಟಿ.ಎಂ. ಕಾರ್ಡ್‌ ಬಳಸಿಯೋ ಕ್ರೆಡಿಟ್ ಕಾರ್ಡ್‌ ಬಳಸಿಯೋ ಶುಲ್ಕ ಪಾವತಿ ನಡೆಸಬಹುದು. ಇದರಿಂದ ಸಾರ್ವಜನಿಕರಿಗೂ, ಇಲಾಖೆ ಸಿಬಂದಿಗೂ ಸಮಯದ ಲಾಭ ದೊರೆಯಲಿದೆ. ಜತೆಗೆ ಕಳ್ಳನೋಟು ವ್ಯವಹಾರ ತಡೆಗೂ ಇ.ಪಿ.ಒ.ಎಸ್‌. ಮಿಷನ್‌ ಸಿದ್ಧಗೊಂಡಿದೆ.

ಡಿಜಿಟಲ್ ಪೇಮೆಂಟ್ ಎಂಬ ನೂತನ ಸಂಕಲ್ಪಕ್ಕೆ ಈ ಯಂತ್ರಗಳು ತುಂಬ ಸಹಕಾರಿಯಾಗಿವೆ. ಜತೆಗೆ ಡಿಜಿಟಲೈಸೇಷನ್‌ ಕುರಿತು ಜನತೆಗೆ ಹೆಚ್ಚುವರಿ ತಿಳಿದುಕೊಳ್ಳಲೂ ಈ ಯಂತ್ರಗಳು ವೇದಿಕೆಯಾಗಲಿವೆ.

ಗ್ರಾಮ ಕಚೇರಿಗಳ ತೆರಿಗೆ ಹಣ ವ್ಯವಹಾರಗಳನ್ನು ಡಿಜಿಟಲೈಸೇಷನ್‌ ನಡೆಸುವ ಅಂಗವಾಗಿ ರಾಜ್ಯ ಸರಕಾರ ಆರಂಭಿಸಿರುವ ಇ.ಪಿ.ಒ.ಎಸ್‌.ಮೆಷಿನ್‌ ಬಳಕೆ ಸಂಬಂಧ ತರಬೇತಿ ಕಾರ್ಯಕ್ರಮ ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ಜರಗಿತು.

ಹೆಚ್ಚುವರಿ ದಂಡನಾಧಿಕಾರಿ ಎನ್‌. ದೇವಿದಾಸ್‌ ಉದ್ಘಾಟಿಸಿದರು.

ಎನ್‌.ಎ.ಸಿ. ಜಿಲ್ಲಾ ಅಧಿಕಾರಿ ಕೆ. ರಾಜನ್‌ ತರಗತಿ ನಡೆಸಿದರು. ಕಿರಿಯ ವರಿಷ್ಠಾಧಿಕಾರಿ ಆಂಟೋ ಷಿಜೋ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಇ.ಪಿ.ಒ.ಎಸ್‌.ಮೆಷಿನ್‌ ಗ್ರಾಮ ಕಚೇರಿಗಳಿಗೆ ವಿತರಣೆ ನಡೆಸಲಾಯಿತು.

ಈ ಯಂತ್ರಗಳ ರಾಜ್ಯ ಮಟ್ಟದ ಉದ್ಘಾಟನೆ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ನಡೆಸಿದ್ದರು.

ಅತ್ಯಧಿಕ ಜನನಿಬಿಡ ಇರುವ ಕಚೇರಿಗಳಲ್ಲಿ ಇಂತಹ ಯಂತ್ರಗಳು ಡಿಜಿಟಲ್ ಪೇಮೆಂಟ್ ಮೂಲಕ ಪರಿಣಾಮಕಾರಿಯಾಗಲಿವೆ ಎಂದು ಅಧಿಕಾರಿಗಳೂ ನಿರೀಕ್ಷಿಸಿದ್ದಾರೆ.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.