ಈಶ್ವರಮಂಗಲ: ಚರಂಡಿ ದುರಸ್ತಿಗೆ ಚಾಲನೆ
Team Udayavani, May 26, 2019, 6:10 AM IST
ಈಶ್ವರಮಂಗಲ: ನೆಟ್ಟಣಿಗೆ ಮುಟ್ನೂರು ಗ್ರಾ.ಪ,. ವ್ಯಾಪ್ತಿಯ ಈಶ್ವರ ಮಂಗಲ ಪೇಟೆಯಲ್ಲಿ ಲೋಕೋ ಪಯೋಗಿ ಇಲಾ ಖೆಯ ವತಿ ಯಿಂದ ಚರಂಡಿ ದುರಸ್ತಿ ಕಾರ್ಯವು ಗುರುವಾರ ಬೆಳಗ್ಗೆ ಪ್ರಾರಂಭ ವಾಗಿದೆ. ಚಿಕ್ಕ ಹಿಟಾಚಿನಿಂದ ಚರಂಡಿಯ ಸ್ಲಾéಬ್ ಸರಿಸಿ, ಚರಂಡಿಯಲ್ಲಿ ತುಂಬಿದ ಹೂಳು ಹಾಗೂ ಕಸ-ಕಡ್ಡಿಗಳನ್ನು ತೆರವು ಮಾಡುವ ಕಾರ್ಯ ನಡೆಯುತ್ತಿದೆ.ಮೇ 21ರ ಉದಯವಾಣಿ ಸುದಿನ ಸಂಚಿಕೆಯಲ್ಲಿ “ಮಳೆಗಾಲದ ಪೂರ್ವ ತಯಾರಿ: ಮುನ್ನೆ ಚ್ಚರಿಕೆ ವಹಿಸಿದ ಲೋಕೋ ಪಯೋಗಿ ಇಲಾಖೆ; ಮುಚ್ಚಿ ಹೋಗಿದೆ ಚರಂಡಿ: ಕೃತಕ ನೆರೆ ಸಂಭವ’ ಎಂಬ ಸಚಿತ್ರ ವರದಿ ಪ್ರಕಟಿಸಿತ್ತು. ಇಲಾಖೆಯ ಅಧಿಕಾರಿಗಳು ಶೀಘ್ರ ಸ್ಪಂದಿಸಿದ್ದು, ಮಳೆಗಾಲದ ಪೂರ್ವ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಲೋಕೋಪಯೋಗಿ ಇಲಾಖೆ ಕಿರಿಯ ಸಹಾಯಕ ಎಂಜಿನಿಯರ್ ಬಾಲಕೃಷ್ಣ ಭಟ್ ಮಾತನಾಡಿ, ಅನುದಾನ ಇಲ್ಲ. ಆದರೆ, ನಿರ್ವಹಣ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಪೇಟೆಯ ಚರಂಡಿ ವ್ಯವಸ್ಥೆಗೆ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದ್ದು, ಸರಕಾರದ ಮಟ್ಟದಲ್ಲಿ ಇದೆ. ಕಸ ವಿಲೇವಾರಿಗೆ ಗ್ರಾ.ಪಂ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.