ಮೊಗ್ರಾಲ್: ಕಟ್ಟಿನಿಂತ ನೆರೆ ನೀರು ಸಾಂಕ್ರಾಮಿಕ ರೋಗ ಭೀತಿ
Team Udayavani, Jul 24, 2019, 5:48 AM IST
ಕುಂಬಳೆ: ಮೊಗ್ರಾಲ್ ಹೊಳೆಯಿಂದ ಉಕ್ಕಿ ಹರಿದ ನೆರೆನೀರು ಇನ್ನೂ ತಗ್ಗಿಲ್ಲ.ಮೊಗ್ರಾಲ್ ಗಾಂಧಿನಗರ,ನಾಂಗಿ ಕರಾವಳಿ ಪ್ರದೇಶದ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಕಾಲಕಳೆಯುವಂತಾಗಿದೆ.ಈ ಪ್ರದೇಶದ ಸುಮಾರು 25ರಷ್ಟು ಮನೆಯ ಸುತ್ತ ಕೆಸರು ನೀರು ತುಂಬಿದೆ. ಈ ಮನೆಯವರ ಶೌಚಾಲಯದ ಹೊಂಡ ದಲ್ಲಿ ನೆರೆನೀರು ತುಂಬಿದೆ. ಮತ್ತು ಕುಡಿಯುವ ನೀರಿನ ಬಾವಿಗಳಿಗೆ ನೆರೆ ನೀರು ತುಂಬಿ ಮಲಿನವಾಗಿದೆ. ಇದರಿಂದ ಮನೆಯವರು ರೋಗ ಭಯದಲ್ಲಿ ಕಾಲ ಕಳೆಯುವಂತಾಗಿದೆ.ಮಾತ್ರವಲ್ಲದೆ ಕೊಪ್ಪಳ ಅಂಗನವಾಡಿಯ ಸುತ್ತಲೂ ನೀರು ಆವರಿಸಿದೆ.
ಕೊಪ್ಪಳ ಆವ ಎಂಬಲ್ಲಿ ಕೆಲದಿನಗಳಿಂದ ಕಟ್ಟಿ ನಿಂತಿರುವ ನೆರೆ ನೀರನ್ನು ಸಮುದ್ರಕ್ಕೆ ಹರಿಯಲು ಕಾಲುವೆ ನಿರ್ಮಿಸಲು ಕಂದಾಯ ಮತ್ತು ಸ್ಥಳೀಯಾಡಳಿತ ಮುಂದಾಗಿಲ್ಲವೆಂಬಆರೋಪಸ್ಥಳೀಯರದು. ನೆರೆ ನೀರು ಕಟ್ಟಿ ನಿಂತಕಾರಣ ಮನೆಯವರಿಗೆ ಮನೆಯಿಂದ ಹೊರಗಿಳಿಯಲು ಕಷ್ಟವಾಗಿದೆ. ಮಕ್ಕಳು ಭಯದಿಂದ ಅಳುವಂತಾಗಿದೆ.ಇದೇ ರೀತಿ ಮುಂದುವರಿ ದಲ್ಲಿ ಇನ್ನಷ್ಟು ನೆರೆ ಭೀತಿ ಕಾಡಲಿದೆ.ಆದುದರಿಂದ ನೆರೆನೀರು ಹರಿಯಲು ತಡೆಯಾದ ಅಳಿವೆಯಲ್ಲಿ ಕಾಲುವೆ ನಿರ್ಮಿಸಿ ಸ್ಥಳೀಯರ ಜೀವರಕ್ಷಣೆಗೆ ಮುಂದಾಗಬೇಕಾಗಿದೆ.