ಕುಂಟಾರು ರವೀಶ ತಂತ್ರಿ ಮೇಲೆ ಮತ್ತೆ ಹಲ್ಲೆ ಯತ್ನ : ತಡೆಯಲು ಹೋದ ನಾಲ್ವರಿಗೆ ಗಾಯ
Team Udayavani, Apr 22, 2019, 6:30 AM IST
ಕಾಸರಗೋಡು: ಚುನಾವಣ ಪ್ರಚಾರದ ಅಂತಿಮ ದಿನವಾದ ರವಿವಾರ ಬೆಳಗ್ಗೆ ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರ ಮೇಲೆ ಕಾಂಞಂಗಾಡ್ ಸಮೀಪದ ಮಡಿಕೈಯಲ್ಲಿ ದುಷ್ಕರ್ಮಿಗಳ ತಂಡವೊಂದು ಹಲ್ಲೆಗೆ ಯತ್ನಿಸಿದೆ.
ಹಲ್ಲೆಯನ್ನು ತಡೆಯುವ ವೇಳೆ ನಾಲ್ವರು ಗಾಯಗೊಂಡಿದ್ದಾರೆ. ಈ ಪೈಕಿ ಗಂಭೀರ ಗಾಯಗೊಂಡಿರುವ ಛಾಯಾಚಿತ್ರಗ್ರಾಹಕ ಶ್ರಾವಣ್ (28) ಅವರನ್ನು ಕಾಂಞಂಗಾಡ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಡಿಕೈ ಕೋತೋಡಪಾರದಲ್ಲಿ ರವಿವಾರ ಬೆಳಗ್ಗೆ 9.30ಕ್ಕೆ ಎನ್ಡಿಎ ಚುನಾವಣಾ ಪ್ರಚಾರ ಕಾರ್ಯ ನಡೆಯುತ್ತಿರುವಾಗ ಅದೇ ಸ್ಥಳದಲ್ಲಿ ಎಡರಂಗ ಪ್ರಚಾರದ ವಾಹನಗಳೂ ಪ್ರಚಾರ ನಡೆಸುತ್ತಿದ್ದವು. ಈ ಮಧ್ಯೆ ಬೈಕ್ನಲ್ಲಿ ಬಂದ ವ್ಯಕ್ತಿಯೋರ್ವ ರವೀಶ ತಂತ್ರಿ ಅವರ ಸಮೀಪಕ್ಕೆ ಬಂದು ಅವರ ಕೈಯಲ್ಲಿದ್ದ ಮೈಕ್ ಹಿಡಿದೆಳೆದು ಆಕ್ರಮಣಕ್ಕೆ ಯತ್ನಿಸಿದ. ಈ ವೇಳೆ ಕಾರ್ಯಕ್ರಮದಲ್ಲಿದ್ದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್, ಮಂಡಲಾಧ್ಯಕ್ಷ ಎನ್. ಮಧು, ಕರ್ಷಕ ಮೋರ್ಚಾ ಮುಖಂಡ ಇ. ಕೃಷ್ಣನ್ ಅವರು ಆತನನ್ನು ತಡೆದರು. ಈ ದೃಶ್ಯವನ್ನು ಸೆರೆಹಿಡಿಯುತ್ತಿದ್ದ ಛಾಯಾಚಿತ್ರಗ್ರಾಹಕನ ಮೇಲೆಯೂ ವ್ಯಕ್ತಿ ಹಲ್ಲೆ ನಡೆಸಿ ಗಂಭೀರ ಹಲ್ಲೆಗೊಳಿಸಿದ್ದಾನೆ.
ಕೆಲವು ದಿನಗಳ ಹಿಂದೆ ಕಲ್ಯಾಶೆÏàರಿಯಲ್ಲಿ ರವೀಶ ತಂತ್ರಿ ಅವರ ಪ್ರಚಾರ ವಾಹನವನ್ನು ತಡೆದು ಹತ್ಯೆ ಬೆದರಿಕೆಯೊಡ್ಡಿದ ಘಟನೆ ಕೂಡ ನಡೆದಿತ್ತು. ಸಿಪಿಎಂ ಕಾರ್ಯಕರ್ತ ಹಲ್ಲೆ ಮಾಡಲು ಯತ್ನಿಸಿದ್ದಾಗಿ ಬಿಜೆಪಿ ಆರೋಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು