ಆಫ್ರಿಕನ್‌ ಬಸವನ ಹುಳು ಪತ್ತೆ

ಮೀಂಜ, ಪೈವಳಿಕೆ ಗ್ರಾಮ ಪಂಚಾಯತ್‌ ವ್ಯಾಪ್ತಿ

Team Udayavani, Aug 17, 2019, 5:35 AM IST

16KSDE1

ಕಾಸರಗೋಡು: ಮಂಜೇಶ್ವರ ತಾಲೂಕಿನ ಮೀಂಜ, ಪೈವಳಿಕೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೃಹತ್‌ ಗಾತ್ರದ ಆಫ್ರಿಕನ್‌ ಬಸವನ ಹುಳುಗಳು (ಅಚಟಿನಾ ಫುಲಿಕಾ) ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮೀಂಜ ಗ್ರಾಮ ಪಂಚಾಯತ್‌ನಲ್ಲಿ ನಡೆದ ತಿಳಿವಳಿಕೆ ಶಿಬಿರದಲ್ಲಿ ಬಸವನ ಹುಳುಗಳ ಉಪಟಳವನ್ನು ತಪ್ಪಿಸುವ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಮೇರಾ ಗಾಂವ್‌, ಮೇರಾ ಗೌರವ್‌ (ನನ್ನ ಊರು, ನನ್ನ ಹೆಮ್ಮೆ) ಯೋಜನೆಯಡಿ ಐಸಿಎಆರ್‌- ಸಿಪಿಸಿಆರ್‌ಐ ವಿಜ್ಞಾನಿಗಳ ತಂಡವು ಸ್ಥಳೀಯ ಕೃಷಿಕರು ಸಹಿತ ಜನಸಾಮಾನ್ಯರಿಗೆ ಕೃಷಿಗೆ ರೋಗ ಬಾಧೆಯನ್ನು ತಡೆಯುವ ನಿಟ್ಟಿನ ಮಾಹಿತಿಯನ್ನು ನೀಡಿತು.

ಕೃಷಿ ಇಲಾಖೆ ಅಧೀನದಲ್ಲಿ ನಡೆದ ಸಭೆಯಲ್ಲಿ ಸಿಪಿಸಿಆರ್‌ಐ ಮುಖ್ಯ ವಿಜ್ಞಾನಿ ಡಾ| ಸಿ ತಂಬಾನ್‌ ಬೃಹತ್‌ ಆಫ್ರಿಕನ್‌ ಬಸವನ ಹುಳು ಉಪಟಳವನ್ನು ತಡೆಯುವ ಬಗ್ಗೆ ಮಾಹಿತಿ ನೀಡಿದರು. ಡಾ| ಕೆ.ಬಿ ಹೆಬ್ಟಾರ್‌, ಡಾ| ವಿನಾಯಕ ಹೆಗ್ಡೆ, ಡಾ| ಎಂ.ಕೆ ರಾಜೇಶ್‌, ಡಾ| ಪಿ.ಎಸ್‌ ಪ್ರತಿಭಾ, ಡಾ| ಎಸ್‌. ನೀನು, ಆತ್ಮಾ ಯೋಜನಾ ನಿರ್ದೇಶಕಿ ಸುಷ್ಮಾ, ಆತ್ಮಾ ಉಪ ನಿರ್ದೇಶಕ ಕೆ.ಸಜೀವ ಕುಮಾರ್‌, ಮೀಂಜ ಗ್ರಾ.ಪಂ. ಸದಸ್ಯೆ ಶಾಲಿನಿ ಶೆಟ್ಟಿ, ಮೀಂಜ ಕೃಷಿ ಭವನದ ಕೃಷಿ ಅಧಿಕಾರಿ ಸಜು, ಪೈವಳಿಕೆ ಕೃಷಿ ಭವನದ ಕೃಷಿ ಅಧಿಕಾರಿ ಅಂಜನಾ ಇದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ತಂಡಗಳನ್ನು ರಚಿಸಿ ಕ್ಷೇತ್ರ ವೀಕ್ಷಣೆ ಮಾಡಲಾಯಿತು. ಕೃಷಿ ಅಧಿಕಾರಿ ಸಜು ಸ್ವಾಗತಿಸಿದರು. ಸಿಪಿಸಿಆರ್‌ಐ ನ ಮುಖ್ಯಸ್ಥ ಡಾ|ಕೆ.ಬಿ ಹೆಬ್ಟಾರ್‌ ವಂದಿಸಿದರು.

ಅಪಾಯಕಾರಿ ಹುಳು
ಆಫ್ರಿಕನ್‌ ಬಸವನ ಹುಳುಗಳು ಕೃಷಿ ಸಹಿತ ಮಾನವನ ಆರೋಗ್ಯದ ಮೇಲೂ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತವೆ. ಇದರ ದೇಹ ರಚನೆಯು ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂತಾನೋತ್ಪತ್ತಿ ಮಾಡುವ ಸಾಮರ್ಥ್ಯವನ್ನು ನೀಡುತ್ತದೆ. ಬೆಳೆದ ಬಸವನ ಹುಳು 5 ರಿಂದ 20 ಸಿ.ಎಂ. ತನಕ ಉದ್ದವಿರುತ್ತವೆ. ಮಳೆಗಾಲ ಸಂದರ್ಭ ಒಂದು ಹುಳು ಸುಮಾರು 500 ರಷ್ಟು ಮೊಟ್ಟೆಯಿಡುತ್ತವೆ. 6 ರಿಂದ 12 ತಿಂಗಳ ಕಾಲ ಕಾಣಿಸಿಕೊಳ್ಳುವ ಆಫ್ರಿಕನ್‌ ಬಸವನ ಹುಳುಗಳು ಐದರಿಂದ ಹತ್ತು ವರ್ಷಗಳ ಕಾಲ ಬದುಕುತ್ತವೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ವಸಂತ ಸುಪ್ತಿ ಮತ್ತು ಶಿಶಿರ ಸುಪ್ತಿ – ನಿದ್ರೆಗೆ ಜಾರುವ ಬಸವನ ಹುಳುಗಳು ಹಲವು ಸಮಯದವರೆಗೆ ಕಾಣಿಸಿಕೊಳ್ಳುವುದಿಲ್ಲ. ಮಳೆಗಾಲದಲ್ಲಿ ತೇವದ ಪ್ರದೇಶ, ಕೊಳೆ ತಿನಿಗಳು, ಕಾಂಪೌಂಡ್‌ ಗೋಡೆ, ರಬ್ಬರ್‌, ತೆಂಗು ತೋಟ, ತೆಂಗಿನ ಬುಡ, ರಾಶಿ ಹಾಕಲ್ಪಟ್ಟ ಮರದ ಹೊಟ್ಟಿನಲ್ಲಿರುತ್ತವೆ. 500 ಕ್ಕೂ ಹೆಚ್ಚಿನ ಕೃಷಿಯನ್ನು ನಾಶಪಡಿಸುವ ಬೃಹತ್‌ ಬಸವನ ಹುಳುಗಳು ತೆಂಗು, ಕಂಗು, ಭತ್ತದ ಸಹಿತ ಹಲವು ಕೃಷಿ ಸಸ್ಯಗಳ ಎಸಳುಗಳನ್ನು ಅಪರಿಮಿತವಾಗಿ ತಿನ್ನುತ್ತವೆ. ನೆಮಟೋಡ್‌ ಎಂಬ ಪ್ಯಾರಸೈಟ್‌ ಹೊತ್ತೂಯ್ಯುವ ಆಫ್ರಿನ್‌ ಬಸವನ ಹುಳುಗಳು ಮನುಷ್ಯರಲ್ಲಿ ತುರಿಕೆ,ಚರ್ಮ ರೋಗವನ್ನು ಹರಡುತ್ತವೆ.

ಬಸವನ ಹುಳು ಬಾಧೆ ತಡೆ ವಿಧಾನ
ಆಫ್ರಿಕನ್‌ ಬಸವನ ಹುಳುಗಳ ಸಂಖ್ಯೆ ಹೆಚ್ಚಿದ್ದಲ್ಲಿ ಗೋಣಿ ಚೀಲದಲ್ಲಿ ಪಪ್ಪಾಯಿ ಎಲೆಗಳು ಅಥವಾ ಹೂಕೋಸು ಎಲೆಗಳನ್ನು ಇರಿಸಿ ಸಂಜೆ ವೇಳೆ ಹುಳುಗಳನ್ನು ಆಕರ್ಷಿಸಿ ಅನಂತರ ಉಪ್ಪಿನ ದ್ರಾವಣವನ್ನು ಸಿಂಪಡಿಸುವುದರ ಮೂಲಕ ನಾಶಪಡಿಸಬಹುದು. ಬೃಹತ್‌ ಆಫ್ರಿಕನ್‌ ಬಸವನ ಹುಳು ಕೃಷಿಗೆ ನೀಡುವ ಉಪಟಳವನ್ನು ಮಟ್ಟ ಹಾಕಲು ಸಾಮೂಹಿಕ ಕ್ರಿಯಾತ್ಮಕತೆಯ ಆವಶ್ಯಕತೆ ಇದೆ. ಕೃಷಿಕರು ಸಾಮಾಜಿಕ ಸಂಘಟನೆಗಳು, ಕೃಷಿ ಇಲಾಖೆ ಸಹಿತ ಸ್ಥಳೀಯಾಡಳಿತ, ಮಹಿಳಾ ಸ್ವಯಂ ಸೇವಾ ಸಂಘಟನೆಗಳು, ಕೃಷಿಕರ ಸಂಘಟನೆಗಳ ಪರಸ್ಪರ ನೆರವಿನೊಂದಿಗೆ ಹೆಚ್ಚಿದ ಆಫ್ರಿಕನ್‌ ಬಸವನಹುಳುಗಳ ಉಪಟಳವನ್ನು ತಪ್ಪಿಸಿಕೊಳ್ಳಬಹುದು.

ಇತರೆ ವಿಧಾನ
·  ಬಸವನ ಹುಳು ಹೆಚ್ಚಾಗಿ ಕಂಡು ಬರುವ ಆವಾಸ ಸ್ಥಳಗಳನ್ನು ನಾಶಪಡಿಸುವುದು. ಚಳಿ, ಬೇಸಿಗೆ ಕಾಲದಲ್ಲಿ ಸುಪ್ತ ನಿದ್ರೆಗೆ ಜಾರುವ ಬಸವನ ಹುಳುಗಳಿರುವ ಕೊಳೆ ತಿನಿಸು, ಮರದ ದಿಮ್ಮಿ, ಮರದ ಹೊಟ್ಟಿರುವ ಪ್ರದೇಶಗಳನ್ನು ಗೊತ್ತುಪಡಿಸುವುದು.
·  ಸಂಜೆ ಸಮಯದಲ್ಲಿ ಆಫ್ರಿಕನ್‌ ಬಸವನ ಹುಳುಗಳಿರುವ ಸ್ಥಳಗಳಲ್ಲಿ ಉಪ್ಪನ್ನು ಸಿಂಪಡಿಸುವುದು ಮತ್ತು ಬಸವನ ಹುಳುಗಳ ಮೇಲ್ಭಾಗದಲ್ಲಿ ಉಪ್ಪನ್ನು ಹಾಕಿ ನಿರ್ಮೂಲನೆ ಮಾಡುವುದು.
·  ಒಂದು ಲೀಟರ್‌ ನೀರಿಗೆ ಮೈಲು ತುತ್ತು (60 ಗ್ರಾಂ) ಮತ್ತು ತಂಬಾಕು ಮಿಶ್ರಣ(25 ಗ್ರಾಂ) ಕದಡಿಸಿ ಸಿಂಪಡಿಸುವುದು.
·  ವಸತಿ ಪ್ರದೇಶಗಳ ಸಮೀಪ ಬಸವನ ಹುಳುಗಳು ಬಾರದಂತೆ ಬೋರಾಕ್ಸ್‌ ಪೌಡರ್‌, ಸಾಮಾನ್ಯ ಉಪ್ಪು, ತಂಬಾಕು ಮಿಶ್ರಣ ಸಿಂಪಡನೆ.
·  ಕೃಷಿ ಸಸ್ಯ ಎಸಳುಗಳ ಮೇಲೆ ಬೇವಿನ ಎಣ್ಣೆ ಮತ್ತು ಬೆಳ್ಳುಳ್ಳಿ ಮಿಶ್ರಿತ ಎಣ್ಣೆ ಸಿಂಪಡನೆ ಮಾಡುವುದರಿಂದ ಆಫ್ರಿಕನ್‌ ಬಸವನ ಹುಳು ಸಮೀಪ ಸುಳಿಯುದಿಲ್ಲ.
·  ತರಕಾರಿ ಮತ್ತು ಭತ್ತ ಗದ್ದೆಗಳಿಗೆ ಬೋರೆxಕ್ಸ್‌ ಮಿಶ್ರಣದ ಸಿಂಪಡಣೆಯಿಂದ ಬಸವನ ಹುಳುಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಟಾಪ್ ನ್ಯೂಸ್

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.