“ಐಎಡಿಯ ಶಾಖೆಗಳು ಎಲ್ಲ ರಾಜ್ಯಗಳಿಗೂ ವ್ಯಾಪಿಸಲಿ’ 


Team Udayavani, Jan 17, 2019, 12:30 AM IST

16ksde1.jpg

ಮಧೂರು: ಲಿಂಪೋಡೆಮಾ ಮತ್ತು ಪೈಲೇರಿಯಾ ರೋಗಗಳ ಮಧ್ಯೆ ಭಿನ್ನತೆಗಳಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕು. ಲಿಂಪೋಡೆಮಾ-ಪೈಲೇರಿಯ ನಿಯಂತ್ರಣ- ಚಿಕಿತ್ಸೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಐಎಡಿಯ ಸಾಧನೆ ಮಹತ್ವದ್ದಾಗಿದ್ದು, ಐಎಡಿಯ ಶಾಖೆಗಳು ರಾಷ್ಟ್ರದ ಎಲ್ಲ ರಾಜ್ಯಗಳಿಗೂ ವ್ಯಾಪಿಸಬೇಕು ಎಂಬ ಅಭಿಪ್ರಾಯಗಳು ಉಳಿಯತ್ತಡ್ಕದ ಇನ್‌ಸ್ಟಿಟ್ಯೂಟ್‌ ಆಫ್‌ ಅಪ್ಲೈಡ್‌ ಡರ್ಮಟೋಲಜಿ (ಐಎಡಿ)ಯಲ್ಲಿ ನಡೆಯುತ್ತಿರುವ ತ್ರಿದಿನಗಳ ವಿಚಾರ ಸಂಕಿರಣದ ವಿಶೇಷ ಚರ್ಚೆಯಲ್ಲಿ ವ್ಯಕ್ತಗೊಂಡವು. 

ವಿಚಾರಗೋಷ್ಠಿಯಲ್ಲಿ ಇಂಗ್ಲೆಂಡ್‌ನ‌ ಆಕ್ಸ್‌ ಫರ್ಡ್‌ ವಿವಿಯ ಚರ್ಮರೋಗ ವಿಭಾಗದ ಉಪನ್ಯಾಸಕ ಪ್ರೊ| ಟೆರೆನ್ಸ್‌ ಜೆ. ರೆಯಾನ್‌ ಹಾಗೂ ಮಂಗಳೂರು ನಿಟ್ಟೆ  ವೈದ್ಯಕೀಯ ವಿವಿಯ ಯುನೆಸ್ಕೋ ಸಂಪನ್ಮೂಲ ಕೇಂದ್ರದ ನಿರ್ದೇಶಕಿ ಪ್ರೊ| ಇಂದ್ರಾಣಿ  ಕರುಣಾಸಾಗರ್‌ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು. ಗುಜರಾತ್‌ ರಾಜ್ಯದಲ್ಲಿ  ಪೈಲೇರಿಯಾ ಮತ್ತು ಲಿಂಪೋಡೆಮಾ ನಿಯಂತ್ರಣ ಸಾಧನೆಗಳ ಬಗ್ಗೆ ಸೂರತ್‌ ಸರಕಾರಿ ವೈದ್ಯಕೀಯ ಕಾಲೇಜಿನ ಡಾ| ಅಂಜಲಿ ಮೋದಿ ಹಾಗೂ ಲಿಂಪೋಡೆಮಾ ರೋಗ ಹರಡುವಿಕೆ, ಜೀನ್‌ ಹಾಗೂ ಆಪ್ತ ಸಮಾಲೋಚನೆಯ ಬಗ್ಗೆ ಲಂಡನ್‌ ಸೈಂಟ್‌ ಜಾರ್ಜ್‌ ವಿವಿಯ ಪ್ರೊ| ಸಹರ್‌ ಮನ್ಸೂರ್‌ ವಿಚಾರ ಮಂಡನೆ ನಡೆಸಿದರು.

ಇದೇ ಸಂದರ್ಭದಲ್ಲಿ ಐಎಡಿ ಚಿಕಿತ್ಸಾ ಕೇಂದ್ರದಲ್ಲಿ ಲಿಂಪೋಡೆಮಾ ವೈದ್ಯಕೀಯ ಶಿಬಿರ ಮತ್ತು ಅತ್ಯಪೂರ್ವ ಚರ್ಮರೋಗಗಳ ವೈದ್ಯಕೀಯ ಶಿಬಿರ ನಡೆಸಲಾಯಿತು. ರಾಷ್ಟ್ರ ಮಟ್ಟದ ಖ್ಯಾತ ವೈದ್ಯರ ತಂಡ ಸಹಕರಿಸಿತು. ಎರಡನೇ ವಿಚಾರ ಸಂಕಿರಣದಲ್ಲಿ ಲಿಂಪೋಡೆಮಾ ಜಾಗೃತಿ ತರಗತಿ ನಡೆಯಿತು. ಜಪಾನಿನ ಟೋಕಿಯೋ ನ್ಯಾಶನಲ್‌ ಸೆಂಟರ್‌ ಫಾರ್‌ ಗ್ಲೋಬಲ್‌ ಹೆಲ್ತ್‌ ಆ್ಯಂಡ್‌ ಮೆಡಿಸಿನ್‌ ವಿಭಾಗದ ಡಾ| ರಿಯಾ ರೋಸೆಲಿನ್‌ ಯೋಟ್ಸು, ಭಾರತ ಸರಕಾರದ ನಿಕಟಪೂರ್ವ ನೀತಿ ನಿರೂಪಣಾ ಸಮಿತಿ ಉಪಾಧ್ಯಕ್ಷೆ ಡಾ| ನಂದಿನಿ ಕುಮಾರ್‌ ವಿಚಾರ ಮಂಡನೆ ನಡೆಸಿದರು. ಐಎಡಿಯ ಅನೀಶಾ ಎ.ಆರ್‌. ಸಂಯೋಜಕರಾಗಿ ಸಹಕರಿಸಿದರು. ಬಳಿಕ ಲಿಂಪೋಡೆಮಾ ರೋಗಿಗಳೊಂದಿಗೆ ಯೋಗ ಮತ್ತು ಲಿಂಪೋಡೆಮಾ ಚಿಕಿತ್ಸೆಗಳ ಕುರಿತಾದ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನಡೆಯಿತು. 

ಅಪರಾಹ್ನ ಲಿಂಪೋಡೆಮಾ ಕುರಿತಾದ ಅರಿವು ವಿಚಾರ ಗೋಷ್ಠಿ ನಡೆಯಿತು. ಪ್ರೊ| ಟೆರೆನ್ಸ್‌ ರಿಯಾನ್‌, ಡಾ| ಅಂಜಲಿ ಮೋದಿ ಉಪನ್ಯಾಸ ನೀಡಿದರು. ಐಎಡಿಯ  ರೇಷ್ಮಾ ಡಿ’ಸೋಜಾ ಸಂಯೋಜಕರಾಗಿ ಸಹಕರಿಸಿದರು. ಬಳಿಕ ನಡೆದ ವಿಶೇಷ ಚರ್ಚಾಗೋಷ್ಠಿಯಲ್ಲಿ ಪ್ರೊ| ಟೆರೆನ್ಸ್‌ ರೆಯಾನ್‌ ಅವರು ಚಿಕಿತ್ಸೆ ಮತ್ತು ಮಾನವೀಯತೆಯ ಬಗ್ಗೆ ಮಾತನಾಡಿದರು. 

ಭಾರತ ಸರಕಾರದ ನಿಕಟಪೂರ್ವ ನೀತಿ ಆಯೋಗದ ಉಪಾಧ್ಯಕ್ಷೆ ಡಾ| ನಂದಿನಿ ಕುಮಾರ್‌ ಅವರು ಆಯುಷ್‌ ಚಿಕಿತ್ಸಾ ವಿಭಾಗದಲ್ಲಿ ಜೆನೆಟಿಕ್‌ ಅಧ್ಯಯನ ಮತ್ತು ನಡೆದು ಬರುತ್ತಿರುವ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. 

ಪ್ರೊ| ಇಂದಿರಾ ಕರುಣಾಸಾಗರ್‌ ಮತ್ತು ಜೈಪುರ ಜಾಮ್‌ನಗರದ ಆಯುರ್ವೇದ ಅಧ್ಯಯನ ಕೇಂದ್ರದ ಮಾಜಿ ನಿರ್ದೇಶಕ ಪ್ರೊ| ಎಂ.ಎಸ್‌. ಬಗೇಲ್‌ ಸಂಯೋಜಕರಾಗಿ ಸಹಕರಿಸಿದರು. ಸಂಜೆ ಆಯುರ್ವೇದದಲ್ಲಿ ರೋಗ ಲಕ್ಷಣದ ಹಿನ್ನೆಲೆಯ ಚಿಕಿತ್ಸೆಯ ಬಗ್ಗೆ ಹಾಸನದ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಕಾಯ ಚಿಕಿತ್ಸಾ ವಿಭಾಗದ ಉಪನ್ಯಾಸಕ ಪ್ರೊ| ಗಿರೀಶ್‌ ಕೆ.ಜೆ. ಅವರು ಉಪನ್ಯಾಸ ನೀಡಿದರು. ಡಾ| ಗುರುಪ್ರಸಾದ್‌ ಅಗ್ಗಿತ್ತಾಯ ಸಂಯೋಜಕರಾಗಿ ಭಾಗವಹಿಸಿದರು. 

ಇಂಗ್ಲೆಂಡ್‌ನ‌ ರೋಯಲ್‌ ಡಬೇì ಆಸ್ಪತ್ರೆಯ ಕಟೇ ರಿಚಸ್‌ ಅವರು ಮೊಲೆ ಕ್ಯಾನ್ಸರ್‌ ಲಿಂಪೋಡೆಮಾದಲ್ಲಿ ಅಧ್ಯಯನ, ಚಿಕಿತ್ಸೆಗಳ ಬಗ್ಗೆ ಉಪನ್ಯಾಸ ನೀಡಿದರು. ಮಂಗಳೂರಿನ ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಆಂಕಾಲಜಿಯ ಡಾ| ಸುರೇಶ್‌ ರಾವ್‌ ಸಂಯೋಜಕರಾಗಿ ಭಾಗವಹಿಸಿದರು. ಈ ಸಂದರ್ಭ ನ್ಯೂಯಾರ್ಕ್‌ ಕ್ಯಾನ್ಸರ್‌ ಸೆಂಟರ್‌ಸಹಾಯಕ ಪ್ರಾಧ್ಯಾಪಕ ಡಾ| ಶಾಮ್‌ ಮಾಯಿಲಂಕೋಡಿ ಅವರೊಂದಿಗೆ ಸಂವಾದ ನಡೆಯಿತು. 

ಸೂರತ್‌ ಮುನ್ಸಿಪಲ್‌ ಕಾರ್ಪೋರೇಶನ್‌ಅಧಿಕಾರಿ ಡಾ| ಕೇಶವ್‌ ಜಿ.ವಿಷ್ಣುವ್‌ ಅವರು ಲಿಂಪೋಡೆಮಾ ನಿರ್ವಹಣೆ ಮತ್ತು ಅನುಭವಗಳ ಬಗ್ಗೆ ಮಾತನಾಡಿದರು. ಡಾ| ರಿಯಾ ರೊಸೆಲಿನ್‌ ಯೋಟ್ಸು ಸಂಯೋಜಕರಾಗಿ ಸಹಕರಿಸಿದರು. ಡಾ| ನಾರಾಯಣ ಪ್ರದೀಪ್‌, ಐಎಡಿ ನಿರ್ದೇಶಕ ಡಾ| ಎಸ್‌. ಆರ್‌. ನರಹರಿ, ಡಾ| ಪ್ರಸನ್ನಾ ಕೆ.ಎಸ್‌., ಡಾ| ಗುರುಪ್ರಸಾದ್‌ ಅಗ್ಗಿತ್ತಾಯ, ಶ್ರುತಿ ಮೋಳ್‌ ಮೊದಲಾದವರು ಭಾಗವಹಿಸಿ ಚರ್ಚೆ ನಿರ್ವಹಿಸಿದ್ದರು. 

ಐಎಡಿಯ ವಿಚಾರ ಸಂಕಿರಣ ನಡೆಯಿತು.

ಟಾಪ್ ನ್ಯೂಸ್

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.