ಕರಿಂಬಿಲ: ಹೆದ್ದಾರಿ ಮಣ್ಣು ತೆರವು ಬಹುತೇಕ ಪೂರ್ಣ
Team Udayavani, Aug 20, 2019, 5:58 AM IST
ಬದಿಯಡ್ಕ: ಬದಿಯಡ್ಕ ಸಮೀಪದ ಕರಿಂಬಿಲದಲ್ಲಿ ಚೆರ್ಕಳ – ಕಲ್ಲಡ್ಕ ಅಂತಾರಾಜ್ಯ ಹೆದ್ದಾರಿಗೆ ಜರಿದು ಬಿದ್ದಿರುವ ಮಣ್ಣಿನ ರಾಶಿಯ ತೆರವು ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಹಲವು ದಿನಗಳಿಂದ ವಾಹನ ಸಂಚಾರ ಸ್ಥಗಿತವಾಗಿರುವ ಹೆದ್ದಾರಿಯಲ್ಲಿ ಮೂರು ದಿನಗಳೊಳಗೆ ಸಂಚಾರ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಎರಡು ಜೆಸಿಬಿಗಳು ಹಾಗೂ ಟಿಪ್ಪರ್ ಲಾರಿಗಳು ಬಳಸಲಾಗಿದ್ದು, ಮಣ್ಣನ್ನು ಬದಿಯಡ್ಕ ಬೋಳುಕಟ್ಟೆಯಲ್ಲಿರುವ ಲೋಕೋಪಯೋಗಿ ಇಲಾಖೆಯ ಸ್ಥಳದಲ್ಲಿ ರಾಶಿ ಹಾಕಲಾಗುತ್ತಿದೆ. ಅಲ್ಲಿ ಜಾಗ ಕಡಿಮೆಯಾದರೆ ಉಳಿದ ಮಣ್ಣನ್ನು ಉಕ್ಕಿನಡ್ಕ ಮೆಡಿಕಲ್ ಕಾಲೇಜು ಬಳಿ ಸಂಗ್ರಹಿಸಲಾಗುವುದೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.