ಕಾಸರಗೋಡು: ಭಾಗದ ಅಪರಾಧ ಸುದ್ದಿಗಳು


Team Udayavani, May 12, 2019, 6:00 AM IST

Crime-545

ನೇಣು ಬಿಗಿದು ಆತ್ಮಹತ್ಯೆ
ಬಂದಡ್ಕ: ಮಾಣಿಮೂಲೆ ಉಂದತ್ತಡ್ಕ ನಿವಾಸಿ ದಿ|ಜಾನು ನಾಯ್ಕ ಅವರ ಪುತ್ರ ಬಿ.ಸತೀಶ್‌(35) ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಉಣ್ಣಿತ್ತಾನ್‌ರ ಚುನಾವಣಾ ಪ್ರಚಾರ
ನಿಧಿಯಿಂದ 5 ಲಕ್ಷ ರೂ. ನಾಪತ್ತೆ
ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಯುಡಿಎಫ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ ಅವರ ಚುನಾವಣಾ ಪ್ರಚಾರಕ್ಕಾಗಿ ಲಭಿಸಿದ ದೇಣಿಗೆಯಲ್ಲಿ ಐದು ಲಕ್ಷ ರೂ. ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

ಯುಡಿಎಫ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ ಅವರೇ ಜಿಲ್ಲಾ ವರಿಷ್ಠ ಪೊಲೀಸ್‌ ಅಧಿಕಾರಿಗೆ ದೂರು ನೀಡಿದ್ದಾರೆ. ಕಾಸರಗೋಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಬಳಿಕ ಉಣ್ಣಿತ್ತಾನ್‌ ಮೇಲ್ಪರಂಬದ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲಿಂದ ಈ ಹಣ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಲಕಿಗೆ ಕಿರುಕುಳಕ್ಕೆ ಯತ್ನ :ಪೋಕೊÕà ಕೇಸು ದಾಖಲು
ಬದಿಯಡ್ಕ: ಹದಿನಾರರ ಹರೆಯದ ಬಾಲಕಿಯನ್ನು ವಿವಿಧೆಡೆಗೆ ಕರೆದೊಯ್ದು ಕಿರುಕುಳ ನೀಡಲೆತ್ನಿಸಿದ ಆರೋಪದಂತೆ ಬದಿಯಡ್ಕ ಪೊಲೀಸರು ಗೋಳಿಯಡ್ಕ ನಿವಾಸಿ ಪ್ರವೀಣ್‌(19) ವಿರುದ್ಧಪೋಕೊÕà ಕೇಸು ದಾಖಲಿಸಿಕೊಂಡು ವಶಕ್ಕೆ ತೆಗೆದುಕೊಂಡಿದ್ದಾರೆ.

ಘರ್ಷಣೆ : ಮೂವರಿಗೆ ಗಾಯ
ಪೆರ್ಲ: ಇಡಿಯಡ್ಕದಲ್ಲಿ ಯುವಕರ ಮಧ್ಯೆ ನಡೆದ ಘರ್ಷಣೆಯಲ್ಲಿ ಮೂವರು ಗಾಯಗೊಂಡಿದ್ದಾರೆ.ಗಾಯಗೊಂಡ ಕನ್ನಟಿಕಾನ ನಿವಾಸಿ ಮೊದು(38)ನನ್ನು ಬದಿಯಡ್ಕದ ಸಿಎಚ್‌ಸಿಯಲ್ಲೂ, ಪೆರ್ಲ ನಿವಾಸಿಗಳಾದ ಸಿದ್ದಿಕ್‌(29) ಮತ್ತು ಅಸೀಸ್‌(31) ಅವರನ್ನು ಚೆಂಗಳದ ಸಹಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಕ್ರಿಕೆಟ್‌ ಪಂದ್ಯಕ್ಕೆ ಸಂಬಂಧಿಸಿ ವಿವಾದ ಘರ್ಷಣೆಗೆ ಕಾರಣವೆನ್ನಲಾಗಿದೆ.

ಐ.ಎಸ್‌.ಗೆ ಸೇರ್ಪಡೆ : ಸೌದಿಯಲ್ಲಿ ಬಂಧಿಸಿ ಎನ್‌.ಐ.ಎ.ಗೆ ಹಸ್ತಾಂತರ
ಕಾಸರಗೋಡು: ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್‌ ಸ್ಟೇಟ್‌ (ಐ.ಎಸ್‌)ಗೆ ಕಾಸರಗೋಡು ಜಿಲ್ಲೆಯಿಂದ ಯುವಕರನ್ನು ಸೇರ್ಪಡೆಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿರುವುದಾಗಿ ಶಂಕಿಸಿರುವ ಇಬ್ಬರನ್ನು ಸೌದಿ ಅರೇಬಿಯ ಪೊಲೀಸರು ಬಂಧಿಸಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ಹಸ್ತಾಂತರಿಸಿದೆ.

ಶ್ರೀಲಂಕಾ ಸರಣಿ ಬಾಂಬು ಸ್ಫೋಟ ಪ್ರಕರಣದ ಪ್ರಧಾನ ಸೂತ್ರಧಾರ ಝೆಹ್ರಾನ್‌ ಹಾಶಿಂನ ಸಂಬಂಧಿಕನಾಗಿರುವ ಮೌಲಾನಾ ರಿಶಾ ಮತ್ತು ಆತನ ಸ್ನೇಹಿತ ಶಹನಾಜ ನಾವಿ ಜೆ. ಯನ್ನು ಬಂಧಿಸಲಾಗಿದೆ.

ಇವರು ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದರು. ಅವರ ಬಗ್ಗೆ ಭಾರತೀಯ ಗುಪ್ತಚರ ವಿಭಾಗ ಸೌದಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಅದರಂತೆ ಸೌದಿ ಪೊಲೀಸರು ಅವರನ್ನು ಬಂಧಿಸಿ ಎನ್‌.ಐ.ಎ.ಗೆ ಹಸ್ತಾಂತರಿಸಿದ್ದಾರೆ. ಹಲವು ಕೇರಳಿಯರು ಕೊಲ್ಲಿಗೆ ಉದ್ಯೋಗದ ಹೆಸರಿನಲ್ಲಿ ಹೋಗಿ ಅಲ್ಲಿ ಐ.ಎಸ್‌.ನೊಂದಿಗೆ ನಂಟು ಬೆಳೆಸಿ ಕಾರ್ಯವೆಸಗುತ್ತಿರುವ ಬಗ್ಗೆಯೂ ಎನ್‌.ಐ.ಗೆ. ಮಾಹಿತಿ ಲಭಿಸಿದೆ. ಕೊಲ್ಲಿಯಲ್ಲಿ ಇದ್ದರೆ ಭಾರತ ಸರಕಾರದ ಮನವಿಯಂತೆ ಕೊಲ್ಲಿ ಪೊಲೀಸರು ತಮ್ಮನ್ನು ಬಂಧಿಸಬಹುದೆಂಬ ಭಯದಿಂದ ಅವರಲ್ಲಿ ಕೆಲವರು ಅಲ್ಲಿಂದ ಪಾಕಿಸ್ತಾನದಲ್ಲಿ ನೆಲೆಯೂರಿದ್ದಾರೆಂಬ ಮಾಹಿತಿಯೂ ಎನ್‌ಐಎಗೆ ಲಭಿಸಿದೆ.

ವಿದೇಶಿ ಮದ್ಯ ಸಹಿತ ಬಂಧನ
ಪೆರ್ಲ: ಕಾರಿನಲ್ಲಿ ಸಾಗಿಸುತ್ತಿದ್ದ 144 ಪ್ಯಾಕೆಟ್‌ ಮದ್ಯವನ್ನು ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು ಈ ಸಂಬಂಧ ಬೇಳ ನಿವಾಸಿ ಮುರಳೀಕೃಷ್ಣ (30)ನನ್ನು ಬಂಧಿಸಿದ್ದಾರೆ. ಅಡ್ಕಸ್ಥಳದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಮದ್ಯ ಪತ್ತೆಯಾಯಿತು.

ಕೆಂಪು ಕಲ್ಲು ಸಾಗಾಟ :
4 ಲಾರಿಗಳು ವಶಕ್ಕೆ
ನೀರ್ಚಾಲು: ಭೂಗರ್ಭಶಾಸ್ತ್ರ ವಿಭಾಗ ಅಧಿಕಾರಿಗಳ ಅನುಮತಿ ಪತ್ರಗಳಿಲ್ಲದೆ ಕೆಂಪುಕಲ್ಲು ಸಾಗಿಸುತ್ತಿದ್ದ 4 ಲಾರಿಗಳನ್ನು ಬೇಳ ಪೆರಿಯಡ್ಕದಿಂದ ಕಂದಾಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಹೋಂ ನರ್ಸ್‌ ಕೊಲೆ ಪ್ರಕರಣ:
ಮೇ 13 ರಿಂದ ವಿಚಾರಣೆ
ಕಾಸರಗೋಡು: ಹೊಸದುರ್ಗ ತಾಲೂಕಿನ ತೆಕ್ಕೇ ತೃಕ್ಕರಿಪುರದ ಕಾವಿಲಂಗಾಡ್‌ ಕಾಲನಿಯ ಉಳಿಯಂ ಒಳವರ ವೈರನ್‌ವೀಡಿನ ಕಣ್ಣನ್‌ ಪಿ. ಅವರ ಪುತ್ರಿ, ಚೆರ್ವತ್ತೂರು ಮದರ್‌ ತೆರೆಸಾ ಚಾರಿಟೇಬಲ್‌ ಸೊಸೈಟಿ ಎಂಬ ಹೆಸರಿನ ಸಂಸ್ಥೆಯಲ್ಲಿ ಹೋಂ ನರ್ಸ್‌ ಆಗಿದ್ದ ಸಿ.ರಜನಿ(34) ಅವರನ್ನು ಕೊಲೆಮಾಡಿ ತೆಂಗಿನ ತೋಟದಲ್ಲಿ ಹೂತಿಟ್ಟ ಪ್ರಕರಣದ ವಿಚಾರಣೆ ಮೇ 13 ರಂದು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ(ಪ್ರಥಮ) ದಲ್ಲಿ ಆರಂಭಗೊಳ್ಳಲಿದೆ.

2014 ಸೆ.12 ರಂದು ಕೊಲೆ ಮಾಡಲಾಗಿತ್ತು. ಈ ಬಗ್ಗೆ ಚಂದೇರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ನೀಲೇಶ್ವರ ಕೊಟ್ರಚಾಲಿನ ಚೊಕ್ಕನ್‌ ಅವರ ಪುತ್ರ ಸತೀಶ್‌ ಪಿ(36) ಮತ್ತು ಕಲ್ಲಿಕೋಟೆ ವಡಗರೆ ಚೋಲಾಂವಯಲ್‌ ಗ್ರೇಸ್‌ ಭವನದ ಜೋನ್‌ ಅವರ ಪುತ್ರ ಬೆನಿಡಿಕ್ಟ್ ಜೋನ್‌ ಆಲಿಯಾಸ್‌ ಬೆನ್ನಿ(44) ಆರೋಪಿಗಳಾಗಿದ್ದಾರೆ.

ಟಾಪ್ ನ್ಯೂಸ್

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.