ಓಣಂ ಬಂಪರ್ : ವಂತಿಗೆ ಕೂಡಿಸಿ ಟಿಕೆಟ್ ಕೊಂಡವರಿಗೆ ತಲಾ ಕೋಟಿ ರೂಪಾಯಿಗಳ ಲಾಟರಿ!
Team Udayavani, Sep 20, 2019, 5:50 AM IST
The winners of Kerala Thiruvonam Bumper Lottery
ಕಾಸರಗೋಡು: ಕೊಲ್ಲಂ ಜಿಲ್ಲೆಯ ಕರುನಾಗಪಳ್ಳಿಯ ಜುವೆಲ್ಲರಿಯೊಂದರ ಆ ಆರು ಮಂದಿ ಸಿಬಂದಿ ತಲಾ 50 ರೂ.ಗಳಂತೆ ವಂತಿಗೆ ಒಟ್ಟುಗೂಡಿಸಿ 300 ರೂ. ಬೆಲೆಯ ಕೇರಳ ರಾಜ್ಯ ಲಾಟರಿಯ ಓಣಂ ಅದೃಷ್ಟ ಚೀಟಿ ಖರೀದಿಸಿದ್ದರು. ಈಗ ಅವರು ಪರಸ್ಪರ ಹಂಚಿಕೊಳ್ಳಬೇಕಾದ್ದು ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಮೌಲ್ಯದ ಬಹುಮಾನವನ್ನು!
ಬೇಕೋ ಬೇಡವೋ ಎಂಬಂತೆ ವಂತಿಗೆ ಕೂಡಿಸಿ ಟಿಕೆಟ್ ಖರೀದಿಸಿದವರಿಗೆ ಈಗ ಬಂಪರ್ ಬಹುಮಾನವೇ ಒಲಿದಿದೆ. ಕರುನಾಗಪಳ್ಳಿಯ ಚುಂಗತ್ ಜುವೆಲರಿಯ ಸಿಬಂದಿಯಾಗಿರುವ ರೋಣಿ, ವಿವೇಕ್, ರತೀಶ್, ಸುಬಿನ್, ರೆಂಜಿನ್, ರಾಜೀವ್ ಲಭಿಸಿದ್ದು 12 ಕೋಟಿ ರೂ! ಈ ಬಂಪರ್ ಬಹುಮಾನ ಟಿ.ಎಂ. 160869 ಸಂಖ್ಯೆಯ ಟಿಕೆಟ್ಗೆ ಒಲಿದಿದೆ. ಕಾಯಂಕುಳಂ ಶ್ರೀ ಮುರುಗ ಲಾಟರಿ ಏಜೆನ್ಸಿಯ ಶಿವನ್ ಕುಟ್ಟಿ ಈ ಟಿಕೆಟ್ ಮಾರಾಟ ಮಾಡಿದ್ದರು.
ವಿಜೇತರಾದ ಆರು ಮಂದಿಗೆ ಒಟ್ಟು ತೆರಿಗೆ ಕಳೆದು 7.56 ಕೋಟಿ ರೂ. ಲಭಿಸಲಿದೆ. ಅಂದರೆ ಪ್ರತಿಯೊಬ್ಬರಿಗೆ ಸುಮಾರು ಒಂದೂಕಾಲು ಕೋ.ರೂ. ಟಿಕೆಟ್ ಮಾರಾಟ ಮಾಡಿದ ಶಿವನ್ ಕುಟ್ಟಿಗೆ 1.20 ಕೋಟಿ ರೂ. ಕಮಿಷನ್ ಲಭಿಸುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?