ಎರಡೂ ಕಿಡ್ನಿ ವೈಫಲ್ಯ: ನೆರವಿಗಾಗಿ ಯಾಚನೆ
Team Udayavani, Dec 2, 2019, 4:11 AM IST
ಕಾಸರಗೋಡು: ಎರಡೂ ಕಿಡ್ನಿಗಳ ವೈಫಲ್ಯ ದಿಂದ ಬಳಲುತ್ತಿರುವ ವ್ಯಕ್ತಿ ನೆರವಿಗಾಗಿ ಎದುರು ನೋಡುತ್ತಿದ್ದಾರೆ.
ಕಾರಡ್ಕ ಚೆನ್ನಂಗೋಡು ಶಾಂತಿನಗರ ನಿವಾಸಿ ಆನಂದ ಕುಮಾರ್ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಕೊಡುಗೈ ದಾನಿಗಳು ಮುಂದಾಗಬೇಕಾಗಿದೆ. ಹಲವು ವರ್ಷಗಳಿಂದ ಅನಿವಾಸಿಯಾಗಿ ಜೀವನ ಸಾಗಿಸಿದ ಆನಂದ ಕುಮಾರ್ ಅವರ ಈ ವರೆಗಿನ ಸಂಪಾದನೆ ಚಿಕಿತ್ಸೆಗಾಗಿ ವೆಚ್ಚ ಮಾಡಲಾಗಿದೆ.
ಇದೀಗ ಮುಂದಿನ ಚಿಕಿತ್ಸೆಗಾಗಿ ಅಗತ್ಯದ ಮೊತ್ತಕ್ಕಾಗಿ ದಾರಿಕಾಣದೆ ಕಂಗಾಲಾಗಿದ್ದಾರೆ. ಇದೀಗ ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಮಾಡಬೇಕಾಗಿದೆ. ಕಿಡ್ನಿ ಬದಲಾಯಿಸಿದರೆ ಮಾತ್ರವೇ ರಕ್ಷಿಸಲು ಸಾಧ್ಯವೆಂದು ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಭಾರೀ ಹಣದ ಆವಶ್ಯಕತೆಯಿದೆ. ಈ ಮೊತ್ತದ ಬಗ್ಗೆ ಕನಸು ಕಾಣಲೂ ಸಾಧ್ಯವಿಲ್ಲದ ಪರಿಸ್ಥಿತಿ ಯಲ್ಲಿದ್ದಾರೆ. ಈ ಅವಸ್ಥೆಯನ್ನು ಕಂಡ ಸ್ಥಳೀಯ ನಾಗರಿಕರು ಚಿಕಿತ್ಸಾ ಸಹಾಯ ನಿಧಿ ರೂಪೀಕರಿಸಿದ್ದು, ಸೌತ್ ಇಂಡಿಯನ್ ಬ್ಯಾಂಕ್ ಕಾಂಞಂಗಾಡ್ ಬ್ರ್ಯಾಂಚ್ನಲ್ಲಿ ಅಕೌಂಟ್ ತೆರೆಯಲಾಗಿದೆ. ಪತ್ನಿ, ಇಬ್ಬರು ಮಕ್ಕಳ ಕುಟುಂಬವನ್ನು ಸಲಹಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಆನಂದ ಕುಮಾರ್ ಅವರಿಗೆ ನೆರವು ನೀಡಬೇಕಾಗಿ ಕೇಳಿಕೊಳ್ಳಲಾಗಿದೆ. ಆನಂದ ಕುಮಾರ್ ಚಿಕಿತ್ಸಾ ಸಹಾಯ ನಿಧಿ, ಅಕೌಂಟ್ ನಂಬ್ರ 0632053000007037, ಐ.ಎಫ್.ಸಿ.ಕೋಡ್ SIBL 0000632, ಕಾಂಞಂಗಾಡ್ ಬ್ರ್ಯಾಂಚ್ಗೆ ನೆರವು ನೀಡುವಂತೆ ಕೇಳಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ