ಮಡಿಕೇರಿ: ಕಾಲು ಮುರಿದ ಕಾಡಾನೆಗೆ ಚಿಕಿತ್ಸೆ
Team Udayavani, Jul 30, 2018, 11:20 AM IST
ಮಡಿಕೇರಿ : ಬಲಗಾಲು ಮುರಿದು ಹೋದ ಸ್ಥಿತಿಯಲ್ಲಿ ಕುಶಾಲ ನಗರ ಸಮೀಪ ಕಾಡಾನೆಯೊಂದು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬಂದಿ ಆನೆಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಂಡಿದ್ದಾರೆ.
ಆನೆಕಾಡು ಮೀಸಲು ಅರಣ್ಯದಲ್ಲಿ ಸುಮಾರು 25 ವರ್ಷ ಪ್ರಾಯದ ಗಂಡಾನೆ ಗಾಯಗೊಂಡು ಕೆಲವು ದಿನ ಗಳಿಂದ ಯಾತನೆ ಪಡುತ್ತಿದ್ದುದ್ದನ್ನು ಗಮನಿಸಿದ ಕುಶಾಲ ನಗರ ಅರಣ್ಯ ವಲಯ ಅಧಿಕಾರಿ ಸಿ.ಆರ್. ಅರುಣ್ ಹಾಗೂ ಸಿಬಂದಿ ದುಬಾರೆ ಸಾಕಾನೆ ಶಿಬಿರದ ಸಾಕಾನೆಗಳ ಸಹಾಯದಿಂದ ಅದನ್ನು ಸೆರೆ ಹಿಡಿದು ಆನೆಕಾಡು ಅರಣ್ಯ ಸಿಬಂದಿ ವಸತಿಗೃಹದ ಬಳಿ ಆರೈಕೆ ಮಾಡುತ್ತಿದ್ದಾರೆ.
ಆನೆಯ ಬಲಗಾಲಿನ ಮೂಳೆ ಮುರಿದಿದೆ. ಭಾರೀ ಮಳೆಯ ನಡುವೆ ಆಹಾರ ಸಿಗದೆ ಆನೆ ನಿತ್ರಾಣವಾಗಿತ್ತು.ಇದೀಗ ಆನೆ ಚಿಕಿತ್ಸೆಗೆ ಸ್ಪಂದಿಸುತ್ತಿದೆ ಎಂದು ವನ್ಯಜೀವಿ ತಜ್ಞ ಡಾ| ಮುಜೀಬ್ ತಿಳಿಸಿದ್ದಾರೆ.
ಬೃಹತ್ ಗಾತ್ರದ ಮರದ ಬೇರಿ ನೆಡೆಗೆ ಸಿಲುಕಿ ಆನೆಯ ಕಾಲು ಮುರಿದಿರುವ ಸಾಧ್ಯತೆಯಿದೆ ಎಂದು ವಲಯ
ಅರಣ್ಯಾಧಿಕಾರಿ ಸಂಶಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
Kasaragod ವಿವಿಪ್ಯಾಟ್ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ