“ಗಾಂಧೀಜಿಯವರ ಸ್ವತ್ಛತೆ ಕಾಳಜಿ ಇಂದಿಗೂ ಪ್ರಸ್ತುತ’
Team Udayavani, Oct 13, 2019, 5:58 AM IST
ಪೆರ್ಲ: ಗಾಂಧೀಜಿಯವರಿಗೆ ಸ್ವತ್ಛತೆಯ ಬಗ್ಗೆ ಇರುವ ಕಾಳಜಿಯು ಇಂದಿಗೂ ಪ್ರಸ್ತುತ.ಗಾಂಧಿ ತತ್ವಗಳು ಸಾರ್ವಕಾಲಿಕವಾದದ್ದು .ಅವು ಎಲ್ಲಾ ಕಾಲಕ್ಕೂ ಸಲ್ಲುವ ಆದರ್ಶವಾಗಿದೆ ಎಂದು ಕಾಟುಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕಂಡರಿ ಶಾಲೆಯ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್ ಹೇಳಿದರು.
ಅವರು ಕಾಟುಕುಕ್ಕೆ ಎಸ್ಎಸ್ಎಚ್ ಹೈಯರ್ ಸೆಕೆಂಡರಿ ಶಾಲೆಯ ನ್ಯಾಷನಲ್ ಕೆಡೆಟ್ ಕೋರ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಕಾಟುಕುಕ್ಕೆ ಪರಿಸರದಲ್ಲಿ ನಡೆದ ಸ್ವತ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿರುವುದು ಕಳವಳಕಾರಿಯಾದ ವಿಷಯ.ಪುನರ್ಬಳಕೆ ಅಥವಾ ಪರಿಸರ ಪ್ರೇಮಿ ಚೀಲಗಳ ಉಪಯೋಗದ ಮೂಲಕ ಸ್ವಲ್ಪ ಮಟ್ಟಿಗೆ ಸಮಸ್ಯೆ ಕಡಿಮೆ ಮಾಡಬಹುದು.ಈ ನಿಟ್ಟಿನಲ್ಲಿ ಎನ್ಸಿಸಿ ಹಾಗೂ ಎನ್ನೆಸ್ಸೆಸ್ ಕಾರ್ಯನಿರ್ವಹಿಸ ಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಜೀವ ರೈ,ಇಂದಿನ ಯುವಜನತೆ ಮಾದಕ ವಸ್ತುಗಳ ಚಟಗಳಿಗೆ ಬಲಿಬೀಳುವುದು ಕಂಡು ಬರುತ್ತಿದೆ.ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಸದಾ ಕ್ರೀಯಾ ಶೀಲರಾದರೆ ಕೆಟ್ಟ ವ್ಯಸನಗಳಿಂದ ದೂರವಿರಬಹುದು ಎಂದರು.ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ,ಉದ್ಯಮಿ ತುಕರಾಮ್,ರತ್ನಾಕರ,ಕನ್ನಡ ಭಾಷಾ ಶಿಕ್ಷಕಿ ಸರಸ್ವತಿ ಪ್ರಸನ್ನ,ಸಮಾಜಶಾಸ್ತ್ರ ಶಿಕ್ಷಕ ರಾಜೇಶ್ ಮಾತನಾಡಿದರು.ಎನ್ಸಿಸಿ ನಿರ್ವಾಹಣಾಧಿಕಾರಿ, ಶಿಕ್ಷಕ ಲೆಫ್ಟಿನೆಂಟ್ ಈಶ್ವರ ನಾಯಕ್ ಸ್ವಾಗತಿಸಿ,ಎನ್ಎಸ್ಎಸ್ ಯೋಜನಾಧಿಕಾರಿ ಮಹೇಶ್ ಏತಡ್ಕ ವಂದಿಸಿದರು.ಎರಡು ಘಟಕದ ವಿದ್ಯಾರ್ಥಿಗಳು ಕಾಟುಕುಕ್ಕೆ ಅಡ್ಕಸ್ಥಳ ರಸ್ತೆ ಬದಿಗಳನ್ನು ಶುಚೀಕರಿಸಿದರು.ಇದೇ ಸಂದರ್ಭದಲ್ಲಿ ಮಾದಕ ದ್ರವ್ಯ ಉಪಯೋಗದ ವಿರುದ್ಧ ಪ್ರತಿಜ್ಞೆ ಸ್ವೀಕರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ