ಮಂಜೇಶ್ವರ: ಶಾಂತಿಯುತ ಮತದಾನ
Team Udayavani, Oct 22, 2019, 5:55 AM IST
ಕುಂಬಳೆ: ಶಾಸಕರ ನಿಧನದಿಂದ ತೆರವಾಗಿದ್ದ ಮಂಜೇಶ್ವರ ವಿಧಾನಸಭಾ ಉಪ ಚುನಾವಣೆಯು ಅ.21 ರಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡು ಸಂಜೆ 6 ಗಂಟೆಯ ತನಕ ನಡೆಯಿತು.
ಮಂಡಲದ 198 ಬೂತ್ಗಳ ಎಲ್ಲಾ ಮತದಾನ ಕೇಂದ್ರಗಳಲ್ಲೂ ಮತದಾರರು ಮತದಾನ ಮಾಡಿದ ವೀಡಿಯೋ ಚಿತ್ರೀಕರಣ ನಡೆಸಲಾಯಿತು. ನಕಲಿ ಮತದಾನ ತಡೆಯಲು ಕೆಲವೊಂದು ಬಿಗಿ ಕ್ರಮ ಕೈಗೊಳ್ಳಲಾಯಿತು. 20 ಕಡೆಗಳಲ್ಲಿ ವೆಬ್ ಕ್ಯಾಮರಾ ಸ್ಥಾಪಿಸಲಾಗಿತ್ತು. ಪರದೆ ಧರಿಸಿದ ಮಹಿಳೆಯರ ಪರದೆಯನ್ನು ಎತ್ತಲು ಎಲ್ಲ ಮತದಾನ ಕೇಂದ್ರಗಳಲ್ಲಿ ಓರ್ವ ಮಹಿಳಾ ಉದ್ಯೋಗಿಯನ್ನು ನೇಮಿಸಲಾಗಿತ್ತು. ಓರ್ವ ಮಹಿಳಾ ಪೊಲೀಸ್ ಪೇದೆ ಸಹಿತ ಎಲ್ಲ ಮತದಾನ ಕೇಂದ್ರಗಳಲ್ಲಿ ತಲಾ ಮೂವರು ಪೊಲೀಸರನ್ನು ಕರ್ತವ್ಯಕ್ಕೆ ನೇಮಿಸಲಾಗಿತ್ತು.ಕೆಲವು ಸೂಕ್ಷ ಮತದಾನ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಹಿರಿಯ ನಾಗರಿಕರು ಮತ್ತು ವಿಕಲಾಂಗರು ಸರತಿಯಲ್ಲಿ ನಿಲ್ಲದೆ ನೇರ ತೆರಳಿ ಮತ ಚಲಾಯಿಸಿದರು. ಪ್ರಾಯಸ್ತರನ್ನು, ಅಶಕ್ತರನ್ನು ಮತ್ತು ವಿಕಲಾಂಗರನ್ನು ಆಯಾ ಪಕ್ಷಗಳ ಕಾರ್ಯಕರ್ತರು ಎತ್ತಿ ತಂದು, ಕುರ್ಚಿಯಲ್ಲಿ ಕುಳ್ಳಿರಿಸಿ ಮತದಾನಕ್ಕೆ ಕರೆ ತಂದರು.
ಎಡರಂಗ ಅಭ್ಯರ್ಥಿ ಶಂಕರ ರೈ ಮಾತ್ರ ಸ್ವಕ್ಷೇತ್ರದ ಅಭ್ಯರ್ಥಿಯಾಗಿದ್ದು ಇವರು ಅಂಗಡಿಮೊಗರು ಶಾಲೆಯಲ್ಲಿ ಮತದಾನಮಾಡಿದರು. ಉಳಿದ ಇಬ್ಬರು ಪ್ರಧಾನ ಸ್ಪರ್ಧಿಗಳಾದ ಐಕ್ಯರಂಗ ಮತ್ತು ಎನ್ಡಿಎ ಅಭ್ಯರ್ಥಿಗಳು ಅನ್ಯಕೇÒತ್ರದ ಅಭ್ಯರ್ಥಿಗಳಾಗಿದ್ದು ಇವರಿಗೆ ಸ್ವ ಮತದಾನದಿಂದ ವಂಚಿತರಾಗಬೇಕಾಯಿತು.
ಪೆರ್ಲ: ಮಂಜೇಶ್ವರ ವಿಧಾನ ಸಭಾ ಚುನಾವಣೆ ಪ್ರಯುಕ್ತ ಮತದಾನ ಮಧ್ಯಾಹ್ನ 2 ಗಂಟೆಗೆ ಬಂದ ವರದಿ ಪ್ರಕಾರ ಪುರೋಗತಿಯಲ್ಲಿ ನಡೆದಿದ್ದು, ಸುಮಾರು 60% ಮತದಾನ ನಡೆಯಿತು. ಎಣ್ಮಕಜೆ ಪಂಚಾಯತಿನ ಹಲವೆಡೆಗಳಲ್ಲಿ ಬೆಳಗ್ಗಿನಿಂದಲೇ ಮತದಾರರು ಮತದಾನಕ್ಕಾಗಿ ಆಗಮಿಸಿ ಸರದಿ ಸಾಲಿನಲ್ಲಿ ನಿಂತಿದ್ದರು. ಬೆಳಗ್ಗೆ ಮಳೆ ಹನಿಯುತ್ತಿದ್ದರೂ, ಅದನ್ನು ಲೆಕ್ಕಿಸದೇ ಮತದಾರರು ಮತದಾನಗೈಯ್ಯಲು ಆಗಮಿಸಿದ್ದರು. ಎಣ್ಮಕಜೆ ಗ್ರಾ.ಪಂ.ನ 178ನೇ ಸಾಯ ಬೂತಿನಲ್ಲಿ ಮೊದಲನೆಯ ಮತದಾನವನ್ನು ವಾರ್ಡ್ ಸದಸ್ಯೆ ಜಯಶ್ರೀ ಎ. ಕುಲಾಲ್ ನಡೆಸಿದರು.
ಅ. 24ರಂದು ಮತ ಎಣಿಕೆ
ಒಟ್ಟು 7 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧೆಯಲ್ಲಿದ್ದು ಐಕ್ಯರಂಗದ ಎಂ.ಸಿ. ಕಮರುದ್ದೀನ್,ಎನ್ಡಿಎ ಪಕ್ಷದ ಕುಂಟಾರು ರವೀಶ ತಂತ್ರಿ, ಎಡರಂಗದ ಎಂ ಶಂಕರ ರೈ ಮಾಸ್ಟರ್ ಪ್ರಧಾನ ತ್ರಿಕೋನ ಸ್ಪರ್ಧಿಗಳಾಗಿರುವರು. ಚುನಾವಣೆಯ ಮತ ಎಣಿಕೆ ಅ. 24ರಂದು ಪೈವಳಿಕೆ ನಗರ ಸರಕಾರಿ ಹೈಯರ್ ಸೆಕೆಂಡರಿ ವಿದ್ಯಾಲಯದಲ್ಲಿ ನಡೆದು ಫಲಿತಾಂಶ ಪ್ರಕಟಗೊಳ್ಳಲಿರುವುದು.
7 ಗಂಟೆಗೆ ಆರಂಭ
ಮತಯಂತ್ರದ ಧೃಢೀಕರಣಕ್ಕಾಗಿ ಬೆಳಗ್ಗೆ ಎಲ್ಲ ಮತದಾನ ಕೇಂದ್ರಗಳಲ್ಲಿ ಬೆಳಗ್ಗೆ 5.30 ಕ್ಕೆ ಅಣಕು ಮತದಾನ ನಡೆಸಿದ ಬಳಿಕ 7 ಗಂಟೆಗೆ ಮತದಾನ ಆರಂಭಗೊಂಡಿತು. ಆದರೆ ಕೆಲವು ಕಡೆಗಳಲ್ಲಿ ಮತದಾನ ಯಂತ್ರ ಕೆಟ್ಟು ಗಂಟೆಗಟ್ಟಲೆಗಳ ಕಾಲ ಮತದಾನಕ್ಕೆ ತಡೆಯುಂಟಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ