ಕಿಡ್ನ್ಯಾಪ್ ಆಗಿದ್ದ ಮಂಜೇಶ್ವರದ ವಿದ್ಯಾರ್ಥಿ ಮಂಗಳೂರಿನಲ್ಲಿ ಪತ್ತೆ
Team Udayavani, Jul 25, 2019, 12:40 PM IST
ಮಂಜೇಶ್ವರ: ಸೋಮವಾರ ಅಪಹರಣವಾಗಿದ್ದ ಕಳಿಯೂರು ಪದವಿನ ಅಬ್ದುಲ್ ರೆಹಮಾನ್ ಹ್ಯಾರಿಸ್ ಎಂಬ ವಿದ್ಯಾರ್ಥಿ ಗುರುವಾರ ಮಂಗಳೂರು ಬಸ್ಸು ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ.
ಅಪಹರಣಕಾರರು ವಿದ್ಯಾರ್ಥಿ ಹ್ಯಾರಿಸ್ ನನ್ನು ಮಂಗಳೂರು ಬಸ್ಸು ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ವರದಿಯಾಗಿದೆ.
ಕಳಿಯೂರು ಪದವು ನಿವಾಸಿ ಹಸನ್ ಕುಂಙರವರ ಪುತ್ರ ಅಬ್ದುಲ್ ರೆಹಮಾನ್ ಹ್ಯಾರಿಸ್ (17) ಜುಲೈ 22ರಂದು ತನ್ನ ಸಹೋದರಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಅಪಹರಣ ಮಾಡಲಾಗಿತ್ತು. ಕೊಳಿಯೂರು ಪದವಿನಲ್ಲಿ ಅಡಿಟೋರಿಯಂ ಬಳಿ ಕಾರಿನಲ್ಲಿ ಬಂದಿದ್ದ ಅಪಹರಣಕಾರರು ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಹ್ಯಾರಿಸ್ ನನ್ನು ಅಪಹರಣ ಮಾಡಿದ್ದರು. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.