ಮೀನಾಕ್ಷಿಗೆ ಸಿಗಬೇಕಿದೆ ಉದ್ಯೋಗದ ಮನ್ನಣೆ

ಈಕೆ ಕೊರಗ ಸಮುದಾಯದ ಮೊದಲ ಎಂ.ಫಿಲ್‌. ಪದವೀಧರೆ; ಬೀಡಿ ಕಟ್ಟುವ ಕಾಯಕ

Team Udayavani, Jul 17, 2019, 5:45 AM IST

meenakshi

ಕಾಸರಗೋಡು: ಈಕೆ ಮೀನಾಕ್ಷಿ ಬೊಡ್ಡೋಡಿ; ಕಾಸರಗೋಡು ಜಿಲ್ಲೆಯ ಕೊರಗ ಸಮುದಾಯದ ಮೊದಲ ಎಂಫಿಲ್‌ ಪದವೀಧರೆ. ಮೀನಾಕ್ಷಿ ಅವರ ಪದವಿ ಕೇವಲ ಹೆಸರಿಗಷ್ಟೇ ಸೀಮಿತವಾದಾಗ ಬದುಕಿನ ಬಂಡಿ ಸಾಗಿಸಲು ಅನಿವಾರ್ಯವಾಗಿ ನೆಚ್ಚಿಕೊಂಡಿರುವುದು ಬೀಡಿ ಕಟ್ಟುವ ಕಾಯಕ!

ವಿದ್ಯಾಭ್ಯಾಸದಿಂದ ದೂರವಾಗಿಯೇ ಉಳಿದಿರುವ ಕೊರಗ ಸಮುದಾಯದಲ್ಲಿ ಒಂದಿಬ್ಬರೂ ತಮ್ಮದೇ ಸಾಧನೆಯಿಂದ ಮೇಲೆ ಬಂದಾಗಲೂ ಅದನ್ನು ಗುರುತಿಸದಿದ್ದರೆ ಅಳಿಸಿ ಹೋಗುವುದು ಕೇವಲ ಆಕೆಯೊಬ್ಬಳ ಕನಸಲ್ಲ. ಒಂದಿಡೀ ಸಮುದಾಯದ ನಿರೀಕ್ಷೆ.

ವರ್ಕಾಡಿ ಪಂಚಾಯತ್‌ ಬೊಡ್ಡೋಡಿ ಮೀನಾಕ್ಷಿ ಅವರ ಹುಟ್ಟೂರು. ಪತಿಯ ಸಹಕಾರದಿಂದ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು ಪ್ರಸ್ತುತ ಮೀಯಪದವಿನ ಕುಳೂರಿನಲ್ಲಿದ್ದಾರೆ. ಸ್ನಾತಕೋತ್ತರ ಪದವಿ ಮುಗಿಸಿದ್ದು ಕಾಸರಗೋಡು ಸರಕಾರಿ ಕಾಲೇಜಿನಲ್ಲಾದರೆ ಎಂ.ಫಿಲ್‌. ಪೂರೈಸಿದ್ದು ಕಣ್ಣೂರು ವಿಶ್ವವಿದ್ಯಾನಿಲಯದ ಭಾಷಾ ಅಧ್ಯಯನಾಂಗ ಸಂಸ್ಥೆಯಲ್ಲಿ.

“ಇಷ್ಟು ಕಲಿತ ನಿನಗೇ ಕೆಲಸ ಇಲ್ಲದೆ ಬೀಡಿ ಕಟ್ಟುತ್ತಿರುವೆ; ಹಾಗಿರುವಾಗ ನಾವು ಕಲಿತು ಮಾಡುವುದೇನು? ನೇರವಾಗಿ ಕೂಲಿ ಕೆಲಸಕ್ಕೆ ಹೋಗಬಾರದೇ? ಎಂದು ಸಮುದಾಯದ ಯುವಜನರು ಪ್ರಶ್ನಿಸುತ್ತಾರೆ ಎಂದು
ದುಃಖೀಸುತ್ತಾರೆ ಮೀನಾಕ್ಷಿ.

ಸಮ್ಮಾನಿಸಿದವರು ಮರೆತರು!
ಕೆಲವು ವರುಷಗಳ ಮೊದಲು ಮೀನಾಕ್ಷಿ ಎಂಎ ಪೂರೈಸಿದಾಗ ಸಂಘ-ಸಂಸ್ಥೆಗಳು ಗುರುತಿಸಿ ಶಾಸಕರ ಮೂಲಕ ಅಭಿನಂದಿಸಿದ್ದವು. ಮಾಧ್ಯಮಗಳ ಮೂಲಕ ಆಕೆಯ ಸಾಧನೆ ಪ್ರಚುರವಾದಾಗ ಆದಿವಾಸಿ ಇಲಾಖೆಯವರು ಆರು ತಿಂಗಳ ತಾತ್ಕಾಲಿಕ ಉದ್ಯೋಗವನ್ನೂ ನೀಡಿದರು.

ಮೀನಾಕ್ಷಿಗೆ “ಆದಿವಾಸಿ ಅತಿಥಿ’ಯಾಗಿ ದಿಲ್ಲಿಯ ರಾಷ್ಟ್ರಪತಿ ಭವನಕ್ಕೆ ಹೋಗುವ ಅವಕಾಶ ಲಭಿಸಿತ್ತು. ಬಳಿಕ ಎಲ್ಲರೂ ಆಕೆಯನ್ನು ಮರೆತುಬಿಟ್ಟಿದ್ದಾರೆ.

ಮೀನಾಕ್ಷಿಯ ಎಂಫಿಲ್‌ ಪದವಿ ಹಿಂದೆ ಅದೆಷ್ಟೋ ನಿರೀಕ್ಷೆಗಳಿವೆ. ಅದು ಅವರ ವೈಯಕ್ತಿಕ ಹಿತಾಸಕ್ತಿಗಿಂತಲೂ ಸಮಾಜದ ಅಭ್ಯುದಯಕ್ಕೆ ಸಂಬಂಧಿಸಿದ್ದು ಎಂಬುದನ್ನು ಸಮಾಜ ಅರ್ಥಮಾಡಿಕೊಳ್ಳಬೇಕು. ಸರಕಾರ ಆಕೆಗೆ ಉದ್ಯೋಗ ನೀಡುವ ಮೂಲಕ ತಳಮಟ್ಟದಲ್ಲಿರುವ ಜನಸಮೂಹವನ್ನು ಮೇಲೆತ್ತುವ ಪ್ರಯತ್ನ ಮಾಡಬೇಕು.
– ಡಾ| ರತ್ನಾಕರ ಮಲ್ಲಮೂಲೆ, ಪ್ರಾಧ್ಯಾಪಕ, ಸರಕಾರಿ ಕಾಲೇಜು ಕಾಸರಗೋಡು

ಮೀನಾಕ್ಷಿಗೆ ಸರಕಾರಿ ಉದ್ಯೋಗ ದೊರಕಿಸಿಕೊಡುವುದು ಇಂದಿನ ಅಗತ್ಯ. ಇದು ಅವರ ಸಮುದಾಯದ ಇತರರೂ ಉನ್ನತ ವಿದ್ಯಾಭ್ಯಾಸ ಪಡೆಯಲು ಪ್ರೇರಣೆಯಾಗಲಿದೆ.
– ಡಾ| ರಾಜೇಶ್‌ ಬೆಜ್ಜಂಗಳೆ, ನಿರ್ದೇಶಕರು, ಕನ್ನಡ ವಿಭಾಗ ಭಾರತೀಯ ಭಾಷಾ ಅಧ್ಯಯನಾಂಗ ಸಂಸ್ಥೆ ಕಣ್ಣೂರು ವಿ.ವಿ

ಟಾಪ್ ನ್ಯೂಸ್

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.