ಕಾಸರಗೋಡಿಗೆ ಮುಂಗಾರು ಮಳೆ ಪ್ರವೇಶ
Team Udayavani, Jun 11, 2019, 5:01 AM IST
ಕಾಸರಗೋಡು: ಕೇರಳಕ್ಕೆ ಮುಂಗಾರು ಮಳೆ ಜೂ. 8ರಂದೇ ಪ್ರವೇಶಿಸಿದ್ದರೂ ಕಾಸರಗೋಡು ಸಹಿತ ಉತ್ತರ ಕೇರಳಕ್ಕೆ ಸೋಮವಾರ ಮುಂಜಾನೆ ಮುಂಗಾರು ಪ್ರವೇಶಿಸಿತು. ಕಾಸರಗೋಡು ಸಹಿತ ಉತ್ತರ ಕೇರಳದಲ್ಲಿ ಬೆಳಗ್ಗೆ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಇನ್ನಷ್ಟು ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ಎರಡು ದಿನಗಳಿಂದ ಸಾಮಾನ್ಯಕ್ಕಿಂತ ಹೆಚ್ಚು ವೇಗದಲ್ಲಿ ಗಾಳಿ ಬೀಸುತ್ತಿತ್ತು. ಗಾಳಿಯಿಂದ ತಳಂಗರೆ, ಚೌಕಿ ಮೊದಲಾದೆಡೆ ಮರಗಳು ಮುರಿದು ಬಿದ್ದಿವೆ. ಸೋಮವಾರ ಬೆಳಗ್ಗಿ ನಿಂದಲೇ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯಲಾರಂಭಿಸಿದೆ. ಕಳೆದ ವರ್ಷ ರಾಜ್ಯದಲ್ಲಿ ಅತೀ ಕಡಿಮೆ ಮಳೆಯಾದ ಜಿಲ್ಲೆಯಾಗಿತ್ತು. ರಾಜ್ಯದಲ್ಲಿ ಭಾರೀ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಾಗ್ರತೆ ವಹಿಸಬೇಕೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಟ್ರಾಲಿಂಗ್ ನಿಷೇಧ ಜಾರಿ
ಮತ್ಸÂ ಸಂಪತ್ತನ್ನು ಸಂರಕ್ಷಿಸುವ ಅಂಗವಾಗಿ ರಾಜ್ಯದಲ್ಲಿ ಟ್ರಾಲಿಂಗ್ ನಿಷೇಧ ಜೂ. 9ರಂದು ಮಧ್ಯರಾತ್ರಿಯಿಂದ ಜಾರಿಗೆ ಬಂದಿದ್ದು ಜುಲೈ 31ರ ವರೆಗೆ ಅಂದರೆ 52 ದಿನಗಳ ಕಾಲ ಟ್ರಾಲಿಂಗ್ ನಿಷೇಧ ಮುಂದುವರಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA