ಹಜ್ ತೀರ್ಥಾಟಕರಿಗೆ ನೆರವಾದ ಒಐಸಿಸಿ ಸ್ವಯಂಸೇವಕರು
Team Udayavani, Aug 14, 2019, 6:49 AM IST
ಕಾಸರಗೋಡು : ಸಮಸ್ಯೆ ಅನುಭವಿಸುತ್ತಿರುವ ಹಜ್ಜ್ ತೀರ್ಥಾ ಟಕರಿಗೆ ಒಐಸಿಸಿ ಹಜ್ ಸ್ವಯಂ ಸೇವಕರ ಕಾರ್ಯಾಚರಣೆ ಜೆದ್ದಾ ಮಿನಾಯಿಯಲ್ಲಿ ಪ್ರಗತಿ ಹಂತದಲ್ಲಿದೆ. ದಾರಿ ತಪ್ಪಿದ ಹಲವಾರು ಹಜ್ಜಿಗಳಿಗೆ ಮಾರ್ಗದರ್ಶನ ನೀಡಿ, ವೃದ್ಧಾಪ್ಯ ಕಾರಣ, ಶಾರೀರಿಕ ಅಸ್ವಸ್ಥತೆಗಳಿಂದ ಸಮಸ್ಯೆ ಅನುಭವಿಸುತ್ತಿರುವವರಿಗೆ ಗಾಲಿಕುರ್ಚಿಯಲ್ಲಿ ಸೇವೆ ನೀಡಿ, ವೈದ್ಯಕೀಯ ಸೇವೆ ಲಭ್ಯಗೊಳಿಸಿ, ತಂಪು ಪಾನೀಯಗಳನ್ನು ವಿತರಿಸಿ, ಸ್ವಯಂಸೇವಕರು ಇನ್ನಿರುವ ಎರಡು ದಿನಗಳಲ್ಲಿ ಮಿನಾಯಿಯಲ್ಲಿ ಇರಲಿದೆ ಎಂದು ಸೌದಿ ರೀಜನಲ್ ಸಮಿತಿ ಅಧ್ಯಕ್ಷ ಕೆಟಿಎ ಮುನೀರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇಂಡಿಯನ್ ಹಜ್ ಮಿಶನ್ನ ನಿರ್ದೇಶನಗಳ ಅನುಸಾರ ಸ್ವಯಂ ಸೇವಕರು ಕಾರ್ಯಾಚರಿಸುತ್ತಿದ್ದಾರೆ. ದಮ್ಮಾಂ, ರಿಯಾದ್, ಜಿಸಾನ್, ಅಬಹ ಮೊದಲಾದ ಸ್ಥಳಗಳಲ್ಲಿ ಸ್ವಯಂಸೇವಕರ ಸಹಿತ ಮುನ್ನೂರಕ್ಕಿಂತ ಹೆಚ್ಚು ಮಂದಿ ಒಐಸಿಸಿ ಕಾರ್ಯಕರ್ತರು ಸೆಲ್ನ ಅಧೀನದಲ್ಲಿ ಕಾರ್ಯಾಚರಿಸುತ್ತಿರುವಾಗ ನೂರಾರು ಮಂದಿ ವಿವಿಧ ಸಂಘಟನೆಗಳ ಒಕ್ಕೂಟವಾದ ಹಜ್ ವೆಲ್ಫೇರ್ ಫಾರಂನ ಅಧೀನದಲ್ಲಿ ಸೇವಾ ರಂಗದಲ್ಲಿರುವುದಾಗಿ ಒಐಸಿಸಿ ಹಜ್ಜ್ ಸೆಲ್ ಅಧ್ಯಕ್ಷ ಮುನೀರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್