ತುಂಬಿ ತುಳುಕಿದ ಮಧುವಾಹಿನಿ; ಮಧೂರು ಜಲಾವೃತ
Team Udayavani, Jul 22, 2019, 5:37 AM IST
ವಿದ್ಯಾನಗರ: ಕಳೆದ ಮೂರು ದಿನಗಳಿಂದ ಸತತವಾಗಿ ಸುರಿವ ಭಾರೀ ಮಳೆಗೆ ಇತಿಹಾಸ ಪ್ರಸಿದ್ಧ ಮಧೂರು ಶ್ರೀಮದನಂತೇಶ್ವರ ಕ್ಷೇತ್ರ ಜಲಾವೃತವಾಗಿದೆ. ದೇವಸ್ಥಾನದ ಎದುರಿನಿಂದ ಹರಿಯುವ ಮಧುವಾಹಿನಿಯು ತುಂಬಿ ತುಳುಕಿರುವುದೇ ಇದಕ್ಕೆ ಕಾರಣ. ಪ್ರತಿವರ್ಷ ಮಧೂರು ಕ್ಷೇತ್ರವು ನೀರಿನಿಂದ ತುಂಬುತ್ತಿದ್ದು ಈ ವರ್ಷ ತಡವಾಗಿ ಪ್ರಾರಂಭವಾದ ಮಳೆಯು ಇದೀಗ ಬಿರುಸಿನಿಂದ ಸುರಿಯಲಾರಂಭಿಸಿದ್ದು ದೇವಸ್ಥಾನದ ಸುತ್ತುಮುತ್ತಲ ಪ್ರದೇಶ ಜಲಾವೃತವಾಗಿ ದ್ವೀಪದಂತೆ ಗೋಚರಿಸುತ್ತಿದೆ.
ದೇವಸ್ಥಾನದ ಒಳಭಾಗದಲ್ಲಿ ನಾಲ್ಕೈದು ಅಡಿ ಯಷ್ಟು ನೀರು ತುಂಬಿದ್ದು ನಿತ್ಯದ ಕೆಲಸಕಾರ್ಯಗಳಿಗೆ ತೊಂದರೆಯುಂಟಾಗಿದೆ.
ಮಧೂರು ಕ್ಷೇತ್ರದ ಜೀರ್ಣೋ ದ್ಧಾರದ ಕೆಲಸಗಳು ಭರದಿಂದ ಸಾಗುತ್ತಿದ್ದು ದೇವಾ ಲಯದ ಕೆಲವು ಗುಡಿಗಳು, ಹಾಗೂ ಗರ್ಭಗುಡಿಯ ಸುತ್ತಲು ಕಟ್ಟಡವನ್ನು ತೆರವುಗೊಳಿಸಿದ್ದು ಮಳೆನೀರಿನಿಂದ ಮತ್ತಷ್ಟು ಒಳಾಂಗಣ ಕೆಸರುಮಯವಾಗುವ ಸಾಧ್ಯತೆ ಇದೆ. ದೇವಸ್ಥಾನದ ಪ್ರವೇಶ ದ್ವಾರದ ಬಳಿಯಿರುವ ಅಂಗಡಿಗಳಿಗೂ ನೀರು ಹತ್ತಿದ್ದು ಸಮೀಪದ ಗದ್ದೆಗಳೂ ತುಂಬಿ ತುಳುಕುತ್ತಿರುವುದು ಕಾಣಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ