ಪೈವಳಿಕೆ ಪಂಚಾಯತ್ ಬಿಜೆಪಿ ವಿಜಯೋತ್ಸವ
Team Udayavani, May 26, 2019, 6:10 AM IST
ಕುಂಬಳೆ: ಲೋಕಸಭೆಗೆ ನಡೆದ ಚುನಾವಣೆಯಲ್ಲಿ ದೇಶದಾದ್ಯಂತ ಬಿ.ಜೆ.ಪಿ.ಅತ್ಯಂತ ಸ್ಪಷ್ಟ ಬಹುಮತದೊಂದಿಗೆ ಗೆದ್ದು ಅಧಿಕಾರಕೇRರಲಿರುವ ನರೇಂದ್ರಮೋದಿ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸುವ ವಿಜಯೋತ್ಸವವು ಪೈವಳಿಕೆ ಪಂಚಾಯತ್ ಬಿ.ಜೆ.ಪಿ.ಸಮಿತಿ ವತಿಯಿಂದ ನಡೆಯಿತು.
ಕಾರ್ಯಕ್ರಮದಂಗವಾಗಿ ಪಕ್ಷದ ನೂರಾರು ಕಾರ್ಯಕರ್ತರು ಚಿಪ್ಪಾರು ಪದವಿನಿಂದ ಬೈಕ್,ಕಾರು ಮೊದಲಾದ ವಾಹನಗಳ ಮೂಲಕ ನಾಸಿಕ್ ಬ್ಯಾಂಡ್ಮೇಳದೊಂದಿಗೆ ಜೋಡುಕಲ್ಲು ತನಕ ಸಾಗಿದರು.ಅಲ್ಲಿ ಸಿಡಿಮದ್ದು ಪ್ರದರ್ಶಿಸಲಾಯಿತು.ಬ್ಯಾಂಡ್ಮೇಳಕ್ಕೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು.ಬಳಿಕ ಜರಗಿದ ಸಭೆಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎಂ.ಹರಿಶ್ಚಂದ್ರ ಮಂಜೇಶ್ವರ ಮಾತನಾಡಿ ವಿರೋಧ ಪಕ್ಷಗಳ ಸುಳ್ಳು ಅಪಪ್ರಚಾರಗಳಿಗೆ ಮತದಾರರು ಮಣಿಯದೆ ಬಿಜೆಪಿಯನ್ನು ಹೆಚ್ಚಿನ ರಾಜ್ಯಗಳಲ್ಲಿ ಗೆಲ್ಲಿಸಿ ಮತ್ತೂಮ್ಮೆ ನರೇಂದ್ರಮೋದಿಯವರಿಗೆ ಅವಕಾಶ ನೀಡಿರುವರು.ಮುಂದಿನ ದಿನಗಳಲ್ಲಿ ಕೇರಳ ಸಹಿತ ಇನ್ನಷ್ಟು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕೇRರಲಿರುವುದಾಗಿ ಹೇಳಿದರು. ನರೇಂದ್ರಮೋದಿ ಸರಕಾರ ದ್ವಿತೀಯ ಬಾರಿಗೆ ಅಧಿಕಾರವೇಲಿರುವ ಮೇ 30 ರಂದು ಎಲ್ಲಾ ಬೂತ್ನಲ್ಲೂ ವಿಜಯೋತ್ಸವ ಆಚರಿಸಸಲು ಕರೆಕೊಟ್ಟರು.ಬಿ.ಜೆ.ಪಿ.ಪಂಚಾಯತ್ ಸಮಿತಿ ಅಧ್ಯಕ್ಷ ಸದಾಶಿವ ಚೇರಾಲ್ ಅಧ್ಯಕ್ಷತೆ ವಹಿಸಿದರು.ಪಕ್ಷದ ನಾಯಕರಾದ ಸದಾನಂದ ರೈ ಕೊಮ್ಮಂಡ,ಎಸ್.ಸುಬ್ರಹ್ಮಣ್ಯ ಭಟ್,ಹರೀಶ್ ಬೊಟ್ಟಾರಿ,ಕಳ್ಳಿಗೆ ಕರುಣಾಕರ ರೈ,ಪ್ರವೀಣ್ಚಂದ್ರ ಬಲ್ಲಾಳ್,ಸುಂದರ ಶೆಟ್ಟಿ ಕಳಾಯಿ,ಅನಂತರಾಜ್ ಭಟ್,ಅನಂತಕೃಷ್ಣ ಭಟ್,ಧನುಶ್ ಬಾಯಾರು,ಶಂಕರ ಭಟ್ ಉಳುವಾನ,ಕೆ.ಕುಂಞ್ಞಣ್ಣ ರೈ,ಸರೋಜಾ ಆರ್.ಬಲ್ಲಾಳ್,ಕೆ.ಜಯಲಕ್ಷ್ಮಿ ಭಟ್,ಭವ್ಯಾ ಬಾಯಾರು,ಪುಷ್ಪಾ ಕೊಮ್ಮಂಗಳ,ಕೆ.ಪಿ,ನಾರಾಯಣ, ಪ್ರಶಾಂತ್ ಪಟ್ಲ ಮುಂತಾದವರು ಮೆರವಣಿಗೆಗೆ ನೇತೃತ್ವ ನೀಡಿದರು.ಘಿಬಿಜೆಪಿ ವಿಜಯೋತ್ಸವಂದಂಗವಾಗಿ ಪೆರ್ಮುದೆ ಶ್ರೀ ದುರ್ಗಾಪರಮೆಶ್ವರೀ ಭಜನಾ ಮಂದಿರದಲ್ಲಿ ವಿಶೇಷ ಭಜನೆ ಜರಗಿತು.