ಪಂಬಾ ಮರುನಿರ್ಮಾಣಕ್ಕೆ ಹರಸಾಹಸ


Team Udayavani, Jan 12, 2019, 4:17 AM IST

pamba-5.jpg

ಶಬರಿಮಲೆ: ಪಂದಲ ರಾಜನಿಗೆ ಅಯ್ಯಪ್ಪ ಸ್ವಾಮಿ ಮಗುವಿನ ರೂಪದಲ್ಲಿ ಸಿಕ್ಕಿದ ಸ್ಥಳ ಪಂಬಾ ನದಿಯ ತೀರ. ಆದ್ದರಿಂದ ಧಾರ್ಮಿಕ ಮಹತ್ವ ಪಡೆದಿರುವ ಪಂಬಾ ನದಿಯ ಶುಚಿ ಕಾರ್ಯವನ್ನು ಪ್ರಕೃತಿಯೇ ಮಾಡಿಯಾಗಿದೆ. ಆದರೆ ಇದರಿಂದ ಸರ್ವವನ್ನೂ ಕಳೆದು ಕೊಂಡು ನಿಂತಿರುವ ಪಂಬಾ ಪ್ರದೇಶ ಈಗ ಮೂಲಸೌಕರ್ಯದ ಕೊರತೆ ಎದುರಿಸುತ್ತಿದೆ.

ವರ್ಷಗಳ ಹಿಂದೆ ಇದ್ದಂತೆ ಪಂಬಾ ಈಗಿಲ್ಲ. “ಮಲೆ ಚೌಟಿ’ ಬರುವ ಭಕ್ತರ ವಿಶ್ರಾಂತಿಗಾಗಿ ನಿರ್ಮಿಸಿದ್ದ ಬೃಹತ್‌ ಸಭಾಂಗಣ ಸಂಪೂರ್ಣ ಕೊಚ್ಚಿ ಹೊಗಿದೆ. ಉಪಾಹಾರ ಒದಗಿಸುತ್ತಿದ್ದ ಅಂಗಡಿಗಳು ನೆಲಸಮಗೊಂಡಿವೆ. ಮರಳು ಹಾಸಲಾಗಿದೆ. ಪಂಬಾ ಮರು ನಿರ್ಮಾಣ ವೇಗ ಪಡೆಯಬೇಕಿದೆ. 

ಥರಗುಟ್ಟುವ ಚಳಿಯಲ್ಲಿ ಪಂಬಾದ ತಣ್ಣಗಿನ ನೀರಿನಲ್ಲಿ ಮಿಂದು ಬರುವ ಭಕ್ತರಿಗಾಗಿ ಸಣ್ಣ ತಾತ್ಕಾಲಿಕ ಶೆಡ್‌ ನಿರ್ಮಿಸಲಾಗಿದೆ. ಮೇಲೆ ಶೀಟ್‌ ಹಾಕಿದ್ದು ಬಿಟ್ಟರೆ, ಬೇರಾವ ಸೌಕರ್ಯವೂ ಇಲ್ಲಿಲ್ಲ. 48 ಕಿ.ಮೀ. ಕಾಡಿನ ಹಾದಿಯಾಗಿ ಬರುವ ಭಕ್ತರು ಮರಳಿನ ಮೇಲೆ, ಮೂಲ ಸೌಕರ್ಯವೇ ಇಲ್ಲದ ಶೆಡ್‌ನ‌ಡಿ ಮಲಗಿಕೊಳ್ಳುವ ದೃಶ್ಯ ಪಂಬಾದಲ್ಲಿ ಕಾಣಸಿಗುತ್ತದೆ. ನಡುವಲ್ಲಿ ಇರುಮುಡಿಗಳನ್ನು ರಾಶಿ ಇರಿಸಿ, ಸುತ್ತಮುತ್ತ ಭಕ್ತರು ರಾಶಿ ಬಿದ್ದಂತೆ ಮಲಗಿರುತ್ತಾರೆ.

ಬೀರಿಗಳು
ಮಹಾಮಳೆಗೆ ಮೊದಲು ಅಂಗಡಿ ಗಳಿದ್ದ ಜಾಗದಲ್ಲಿ ಈಗ ಬೀರಿಗಳನ್ನು ನಿರ್ಮಿಸಲಾಗಿದೆ. ಭಕ್ತರು ಬಾಡಿಗೆ ತೆತ್ತು ಇಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಇದು ತಕ್ಕಮಟ್ಟಿಗೆ ಉತ್ತಮವಾಗಿದೆ. ಸಣ್ಣ ಮಟ್ಟಿಗೆ ಉಪಾಹಾರದ ವ್ಯವಸ್ಥೆಯೂ ಇಲ್ಲಿ ಲಭ್ಯ.

ಪಂಬಾ ನದಿ
ಒಂದೊಮ್ಮೆ ಪಂಬಾ ಮಲಿನ ಗೊಂಡಿತ್ತು. ಧಾರ್ಮಿಕ ಹಿನ್ನೆಲೆ ವಿನಾ ಸ್ನಾನ ಕಷ್ಟ ಎಂಬಂತಿತ್ತು. ಈಗ ಪಂಬಾ ನದಿ ಶುಚಿಯಾಗಿದೆ. ಅಲ್ಲಲ್ಲಿ ಪೊಲೀಸರು ಕುಳಿತಿದ್ದು, ನದಿಯ ಪಾವಿತ್ರ್ಯಕ್ಕೆ ಒತ್ತು ನೀಡು ತ್ತಿ¨ªರೆ. ನದಿ ನೀರಿನಲ್ಲಿ ಸ್ನಾನದ ವೇಳೆ ಸಾಬೂನು ಬಳಕೆ ನಿಷೇಧ. ಒಂದು ವೇಳೆ ಪತ್ತೆಯಾದರೆ ತತ್‌ಕ್ಷಣ ಪೊಲೀಸರು ಆಗಮಿಸಿ, ಸಾಬೂನು ಕಿತ್ತುಕೊಳ್ಳುತ್ತಾರೆ. ವ್ರತಧಾರಿಗಳು ಉಡುವ ಕಪ್ಪು ವಸ್ತ್ರ ವನ್ನು ಎಸೆಯಬಾರದು ಎಂಬ ನಿರ್ಬಂಧವೂ ಇದೆ. ಆದರೂ ಕಪ್ಪು ವಸ್ತ್ರಗಳು ತೇಲಿ ಹೋಗುತ್ತಿರುವುದು ಕಂಡುಬರುತ್ತದೆ. ಪವಿತ್ರ ಪಂಬಾ ನದಿಯಂತೆ ಅಲುದಾ, ಭಸ್ಮಕೊಳಗಳು ಶುದ್ಧ ಗೊಂಡಿರುವುದನ್ನು ಕಾಣಬಹುದು. ಈ ಎಲ್ಲ ನೀರಿನ ಮೂಲಗಳ ಶುಚಿತ್ವಕ್ಕಾಗಿಯೇ ಮಳೆ ಪ್ರವಾಹದ ರೂಪ ಪಡೆದುಕೊಂಡಿತೋ ಎಂಬ ಮಾತುಗಳು ಕೇಳಿಬರುತ್ತಿವೆ.

ಪಂಬಾ ನದಿ ತೀರದಲ್ಲಿ ಪಾವಿತ್ರ್ಯ ಉಳಿಸಿಕೊಳ್ಳಲು ಕೇರಳ ಸರಕಾರ ಅಥವಾ ದೇವಸ್ವಂ ಬೋರ್ಡ್‌ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ಸಮರ್ಪಕ ಶೌಚಾಲಯಗಳ ನಿರ್ಮಾಣ, ಭಕ್ತರ ವಿಶ್ರಾಂತಿಗಾಗಿ ಹಾಗೂ ಚಳಿಯಿಂದ ರಕ್ಷಣೆ ಪಡೆಯಲು ಸಭಾಗೃಹ ನಿರ್ಮಾಣ, ಉಪಾಹಾರಕ್ಕಾಗಿ ಅಂಗಡಿಗಳ ನಿರ್ಮಾಣಕ್ಕೆ ಉತ್ತೇಜನ ಇತ್ಯಾದಿ ಕೆಲಸಗಳು ಶೀಘ್ರ ನಡೆಯಬೇಕಾಗಿದೆ.

ಪಂಬಾ ನದಿಗೆ ತಡೆಗೋಡೆಯಾಗಿ ಮರಳಿನ ಗೋಣಿ ಚೀಲಗಳನ್ನು ಪೇರಿಸಿ ಇಡಲಾಗಿದೆ. ಭಾರೀ ಎತ್ತರಕ್ಕೆ ಈ ಮರಳಿನ ಚೀಲಗಳನ್ನು ಇರಿಸಿದ್ದು, ಇದಕ್ಕೆ ಶಾಶ್ವತ ವ್ಯವಸ್ಥೆಯ ಅಗತ್ಯವೂ ಇದೆ. ಇದು ಪ್ರವಾಹ ಸಂದರ್ಭ ಬಂದ ಮರಳು. ಮುಂದಿನ ಮಳೆಗಾಲದ ಹೊತ್ತಿಗೆ ಮರಳಿನ ರಾಶಿಗಳು ಕುಸಿದು ಬೀಳುವ ಅಪಾಯವೂ ಇದೆ.

 ಗಣೇಶ್‌ ಎನ್‌.ಕಲ್ಲರ್ಪೆ

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.