ಜನರ ಜೀವಕ್ಕೆ ಬೆಲೆಕೊಡದ ಪಿಣರಾಯಿ ಸರಕಾರ ಕಿತ್ತೆಸೆಯೋಣ: ರೇಣು ಸುರೇಶ್


Team Udayavani, Aug 5, 2017, 6:40 AM IST

KAS.jpg

ಪೈವಳಿಕೆ: ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರಕಾರವು ಕೇರಳದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಈ ಸಣ್ಣ ಅವಧಿಯಲ್ಲಿ  ರಾಜ್ಯದಲ್ಲಿ  ಸಂಘಪರಿವಾರದ 15ಕ್ಕೂ ಹೆಚ್ಚು  ಮಂದಿ ಕಾರ್ಯಕರ್ತರನ್ನು  ಅಮಾನುಷವಾಗಿ ಕಡಿದು ಕೊಲೆ ಮಾಡಲಾಗಿದೆ. ಈ ಮೂಲಕ ಕೇರಳದಲ್ಲಿ  ಅರಾಜಕತೆ ಸೃಷ್ಟಿಯಾಗಿದೆ. ಇದಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ  ಸರಕಾರವನ್ನು  ಕೂಡಲೇ ಅರಬೀ ಸಮುದ್ರಕ್ಕೆ ಕಿತ್ತೆಸೆಯೋಣ ಎಂದು ಭಾರತೀಯ ಜನತಾ ಮಹಿಳಾ ಮೋರ್ಚಾದ ಕೇರಳ ರಾಜ್ಯಾಧ್ಯಕ್ಷೆ ರೇಣು ಸುರೇಶ್‌ ಹೇಳಿದ್ದಾರೆ.

ಭಾರತೀಯ ಜನತಾ ಮಹಿಳಾ ಮೋರ್ಚಾದ ಪೈವಳಿಕೆ  ಪಂ. ಸಮಿತಿಯ ನೇತೃತ್ವದಲ್ಲಿ ಪೈವಳಿಕೆ ಕುಟುಂಬಶ್ರೀ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ  ಮಹಿಳಾ ಸಂಗಮ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು.ಕೇರಳೀಯರಾದ ನಾವು ಎಂದೆಂದಿಗೂ ಧೈರ್ಯ ದಿಂದ ಬದುಕೋಣ. ಗೂಂಡಾಗಳಿಗೆ, ಮಾಫಿಯಾ ಗಳಿಗೆ, ಕೊಲೆಪಾತಕರಿಗೆ, ರಕ್ತದಾಹಿಗಳಿಗೆ ನಾವು ಎಂದಿಗೂ ಹೆದರಿ ಹಿಂಜರಿಯಬಾರದು. ಸತ್ಯ, ಧರ್ಮ, ಆಚಾರ, ಸಂಸ್ಕಾರ, ಸಂಸ್ಕೃತಿಯುಕ್ತವಾಗಿ ಜೀವಿಸುವವರು ಗೊಡ್ಡು  ಬೆದರಿಕೆಗಳಿಗೆ ಅಂಜ ಬಾರದು. ಆರ್‌ಎಸ್‌ಎಸ್‌ ಕಾರ್ಯವಾಹರಾಗಿದ್ದ  ತಿರುವನಂತಪುರದ ರಾಜೇಶ್‌ ಹತ್ಯೆಯಿಂದ ಓರ್ವ ಉತ್ತಮ ಭಾರತೀಯನನ್ನು ಹಾಗೂ ಒಂದು ಮನೆಯ ಮಗನನ್ನು  ಅಲ್ಲದೆ ಹಿಂದೂ ಸಮಾಜದ ಆಸ್ತಿಯೊಂದನ್ನು  ಕಳೆದುಕೊಂಡಿದ್ದೇವೆ. ಈ ಮೂಲಕ ಪಿಣರಾಯಿ ವಿಜಯನ್‌ ಸರಕಾರದ ಪಾಪದ ಕೊಡ ತುಂಬುತ್ತಾ  ಬಂದಿದೆ. ಮಕ್ಕಳನ್ನು, ಗಂಡನನ್ನು, ತಂದೆಯನ್ನು  ಕಳಕೊಂಡು ರೋದಿಸು ತ್ತಿರುವ ಅದೆಷ್ಟೋ ಮನೆಯವರ ಶಾಪ ಸಿಪಿಎಂ ಸರಕಾರಕ್ಕೆ ತಟ್ಟದಿರದು ಎಂದು ಅವರು ರೋಷದಿಂದ ನುಡಿದರು.

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ – ಎನ್‌ಡಿಎ ಸರಕಾರದ ಸಮಾಜ ಮುಖೀ ಚಿಂತನೆಗಳು ಇಡೀ ವಿಶ್ವಕ್ಕೇ ಮಾದರಿ ಯಾಗಿವೆ. ಮೋದಿ ಸರಕಾರದ ಜನಪರ ಮತ್ತು  ಅಭಿವೃದ್ಧಿಪರ ಯೋಜನೆಗಳ ಕುರಿತು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಹಿಳಾ ಮೋರ್ಚಾದ ಕಾರ್ಯ ಕರ್ತೆ ಯರಿಂದ ಆಗಬೇಕು. ಇದಕ್ಕಾಗಿ ನಾವೆಲ್ಲರೂ ಮನೆ ಮನೆ ಸಂಪರ್ಕ ಮಾಡಿ ಕೇಂದ್ರ ಸರಕಾರದ ಯೋಜನೆಗಳನ್ನು  ಅರ್ಹ ಫಲಾನುಭವಿಗಳಿಗೆ ದೊರಕಿಸಲು ಯೋಜನಾ ಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ರೇಣು ಸುರೇಶ್‌ ಅವರು ನೆರೆದ ಜನಸಮೂಹಕ್ಕೆ ಮನವಿ ಮಾಡಿದರು.

ಬಿಜೆಪಿ ರಾಜ್ಯ ಕೌನ್ಸಿಲ್‌ ಸದಸ್ಯೆ ಸರೋಜಾ ಆರ್‌.ಬಲ್ಲಾಳ್‌, ಮಹಿಳಾ ಮೋರ್ಚಾದ ಕಾಸರಗೋಡು ಜಿಲ್ಲಾ  ಪ್ರಧಾನ ಕಾರ್ಯದರ್ಶಿ ಪುಷ್ಪಾಲಕ್ಷಿ$¾ ಎನ್‌.ಕನಿಯಾಲ, ಮಹಿಳಾ ಮೋರ್ಚಾದ ಮಂಜೇಶ್ವರ ಮಂಡಲ ಉಪಾಧ್ಯಕ್ಷೆ  ಗಿರಿಜಾ ಶೆಟ್ಟಿ  ಕುಳಾÂರು, ಒಬಿಸಿ ಮೋರ್ಚಾದ ಮಂಡಲ ಕಾರ್ಯದರ್ಶಿ ರೇಣುಕಾ ಕಯ್ನಾರು, ಬಿಜೆಪಿ ಪೈವಳಿಕೆ ಪಂಚಾಯತ್‌ ಸಮಿತಿಯ ಅಧ್ಯಕ್ಷ ಸದಾಶಿವ ಚೇರಾಲು, ಪಂಚಾ ಯತ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್‌ ಆಟಿಕುಕ್ಕೆ ಮೊದಲಾದವರು ಶುಭಹಾರೈಸಿದರು.

ಮಹಿಳಾ ಮೋರ್ಚಾದ ಪಂಚಾಯತ್‌ ಸಮಿತಿಯ ಅಧ್ಯಕ್ಷೆ ದಿವ್ಯಾ ಬಿ. ನೆತ್ತರಗುಳಿ ಸಮಾರಂಭದ ಅಧ್ಯಕ್ಷತೆ  ವಹಿಸಿದ್ದರು. ಮಹಿಳಾಮೋರ್ಚಾದ ಪಂಚಾಯತ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಷ್ಪಾ  ಕೊಮ್ಮಂಗಳ ಸ್ವಾಗತಿಸಿದರು. ಪಂಚಾಯತ್‌ ಸಮಿತಿಯ ಕಾರ್ಯದರ್ಶಿ ಅಕ್ಷತಾ ಕನಿಯಾಲತ್ತಡ್ಕ ವಂದಿಸಿದರು. ವಿಜಯಾ ಡಿ. ರೈ ಪೈವಳಿಕೆ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾ ನಿಲಯದ ಬಿಎಸ್‌ಡಬ್ಲೂ$Â ಪದವಿ ಪರೀಕ್ಷೆಯಲ್ಲಿ  ದ್ವಿತೀಯ ರ್‍ಯಾಂಕ್‌ ಪಡೆದ ವಿದ್ಯಾರ್ಥಿನಿ ಸರಿತಾ ತಲೆಂಗಳ ಅವರನ್ನು  ಮಹಿಳಾ ಮೋರ್ಚಾದ ಪೈವಳಿಕೆ ಪಂಚಾಯತ್‌ ಸಮಿತಿಯ ವತಿಯಿಂದ ಸಮ್ಮಾನಿಸಲಾಯಿತು.

ಮಹಿಳೆಯರಿಗೆ ನೆಮ್ಮದಿಯ ಬದುಕು
ಭಾರತೀಯ ಜನತಾ ಮಹಿಳಾ ಮೋರ್ಚಾವು ಸ್ತ್ರೀಯರ ಮೇಲಿನ ದೌರ್ಜನ್ಯದ ವಿರುದ್ಧ  ಹಾಗೂ ಬಲಿಷ್ಠ  ಸಂಘಟನೆಯ ಗುರಿಯೊಂದಿಗೆ ಪ್ರಬುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟಿದೆ. ಸಮಾಜದಲ್ಲಿ ಸ್ತ್ರೀಯರಿಗಾಗುತ್ತಿರುವ ಸಂಕಷ್ಟಮಯ ಸನ್ನಿವೇಶಗಳನ್ನು  ಮಹಿಳಾ ಮೋರ್ಚಾ ನೇತೃತ್ವದಲ್ಲಿ ಸಮೀಕ್ಷೆ  ನಡೆಸಿ ಅದಕ್ಕಿರುವ ಪರಿಹಾರ ಕ್ರಮಗಳನ್ನು  ಚಿಂತಿಸುತ್ತಿದೆ. ಈ ಮುಖೇನ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಬಾಳಿಗೆ ಶಾಂತಿ, ನೆಮ್ಮದಿ ದೊರಕಿಸುವ ನಿಟ್ಟಿನಲ್ಲಿ  ಮಹಿಳಾ ಮೋರ್ಚಾವು ವಿಶೇಷ ಕಾರ್ಯಕ್ರಮಗಳನ್ನು ಸಂಘಟಿಸಲಿದೆ.
ರೇಣು ಸುರೇಶ್‌,ಅಧ್ಯಕ್ಷೆ, ಮಹಿಳಾ ಮೋರ್ಚಾ, ಕೇರಳ ರಾಜ್ಯ ಸಮಿತಿ.
 

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.