ನೆರವಿನ ನಿರೀಕ್ಷೆಯಲ್ಲಿ ಬಡ ಕುಟುಂಬ
Team Udayavani, May 13, 2019, 6:10 AM IST
ಎಣ್ಮಕಜೆ : ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ ಎಣ್ಮಕಜೆ ಗ್ರಾಮದ ಸಾಯ ಬಾವಲಿಮೂಲೆಯ ಐತ ಮಾಯಿಲ ಅವರ ಪುತ್ರ ಆನಂದ (24) ಅವರು ತೀವ್ರವಾದ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಕಳೆದ 2 ವರ್ಷಗಳಿಂದ ಸೊಂಟದಿಂದ ಕೆಳಗಿನ ಸಂಪೂರ್ಣ ಬಲವನ್ನು ಕಳೆದುಕೊಂಡಿರುವ ಆನಂದ ಅವರು ಹಾಸಿಗೆ ಹಿಡಿದಿದ್ದಾರೆ. ಇವರ ತಂದೆ ಮತ್ತು ತಾಯಿ ಕಮಲಾ ಇಬ್ಬರೂ ಕ್ಷಯರೋಗಿಗಳಾಗಿದ್ದು, ತಂಗಿ ಅನುಪಮಾ ಮಧುಮೇಹದಿಂದ ಬಳಲುತ್ತಿ¨ªಾರೆ. ಕುಟುಂಬವನ್ನು ನಡೆಸುವವರು ಎಲ್ಲರೂ ಅನಾರೋಗ್ಯ ಪೀಡಿತರಾಗಿರುವ ಕಾರಣ ಕುಟುಂಬ ಸಂಕಷ್ಟದಲ್ಲಿದೆ.
ದುಡಿಯುವ ಸಾಮರ್ಥ್ಯ ಇಲ್ಲದ ಈ ಕುಟುಂಬ ತಮ್ಮ 4 ಜನರ ವೈದ್ಯಕೀಯ ವೆಚ್ಚ ಭರಿಸಲಾಗದೇ ಕಷ್ಟಪಡುತ್ತಿವೆೆ. ಇವರು ವಾಸಿಸುತ್ತಿರುವ ಮನೆಯೂ ದುರ್ಬಲವಾಗಿದ್ದು, ಅತ್ತ ಮನೆಯನ್ನು ಸರಿಪಡಿಸಿಕೊಳ್ಳಲು ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ. ಮನೆಯ ಸದಸ್ಯರೆಲ್ಲರೂ ಅನಾರೋಗ್ಯ ಪೀಡಿತವಾಗಿರುವ ಕಾರಣ ಇದೀಗ ತಮ್ಮ ಚಿಕಿತ್ಸೆಗಾಗಿ ಕುಟುಂಬ ಸಹೃದಯ ದಾನಿಗಳ ಸಹಾಯದ ನಿರೀಕ್ಷೆಯಲ್ಲಿದೆ. ಸಹಾಯ ಮಾಡಲು ಇಚ್ಛಿಸುವವರು ಆನಂದ ಎಂಬವರ ತಂದೆ ಐತ ಮಾಯಿಲಾ ಅವರ ಬ್ಯಾಂಕ್ ಖಾತೆಗೆ ಹಣ ನೀಡಬಹುದು. ವಿಜಯ ಬ್ಯಾಂಕ್ ಕಾಟುಕುಕ್ಕೆ ಶಾಖೆ, ಬ್ಯಾಂಕ್ ಖಾತೆ ಸಂಖ್ಯೆ 205201231000328, IFSC Code: VIJB0002052 ಖಾತೆಗೆ ಮಾಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು