ಋಷಿ ಪರಂಪರೆ ಭಾರತದ ಜೀವನಾಡಿ: ವೇ|ಮೂ| ವಿಷ್ಣು ಆಸ್ರ
Team Udayavani, Apr 13, 2018, 9:00 AM IST
ಬದಿಯಡ್ಕ: ಋಷಿ ಪರಂಪರೆ ಭಾರತದ ಜೀವನಾಡಿಯಾಗಿ ಪರಂಪರೆಯನ್ನು ಅರ್ಥವತ್ತಾಗಿ ನಡೆಸಿಕೊಂಡು ಬಂದಿದೆ. ಸನಾತನ ಸಂಸ್ಕೃತಿಯಲ್ಲಿ ಆಗಿ ಹೋದ ಎಲ್ಲ ಬೆಳವಣಿಗೆಗೆ ಕಾರಣ ಮುನಿಗಳಾಗಿದ್ದಾರೆ. ಎಷ್ಟೋ ಜ್ಞಾnನಪುರುಷರು, ಯುಗಪುರುಷರು,ದೇವತಾತ್ಮ ಸ್ವರೂಪಿಗಳು, ಎಲ್ಲರೂ ಕೂಡ ಮುನಿಗಳ ಅನುಗ್ರಹದಿಂದ ಬೆಳೆದವರು. ಮುನಿಗಳು ಎಂದರೆ ಜ್ಞಾನಿಗಳು ಅಂತಹ ಮುನಿಯೂರಿನಲ್ಲಿ ನೆಲೆಸಿದ ಭಗವಂತನ ಅನುಗ್ರಹಕ್ಕೆ ನಾವು ಪ್ರಾಪ್ತರಾಗೋಣ ಎಂದು ತಂತ್ರಿವರ್ಯ ಬ್ರಹಶ್ರೀ ವೇ|ಮೂ| ವಿಷ್ಣು ಆಸ್ರ ಉಳಿಯ ಹೇಳಿದರು.
ಅವರು ಮುನಿಯೂರು ಬೊಳ್ಳೂರು ಶ್ರೀ ಸದಾಶಿವ ಕ್ಷೇತ್ರದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಭಗವಂತನ ಸೇವೆಯನ್ನು ಮಾಡಿ ಪಡೆದಂತಹ ಭಗವದನುಗ್ರಹವನ್ನು ಸಮಾಜಕ್ಕೆ ವಿನಿಯೋಗಿಸಿದವರು ಮುನಿಗಳು ಅವರ ಬದುಕಿಗೆ ಪೂರಕವಾದಂತಹ ಇಂತಹ ಪ್ರದೇಶಕ್ಕೆ ಅದ್ಭುತ ಶಕ್ತಿಯಿದೆ. ಪವಿತ್ರವಾದ ಪ್ರಕೃತಿ ರಮಣೀಯವಾದ ಸ್ಥಳವಿದಾಗಿದೆ. ಮನುಷ್ಯನಿಗೆ ನೆಮ್ಮದಿ ದೊರಕಬೇಕಾದರೆ ಪ್ರಕೃತಿ ಒಲಿಯಬೇಕು. ದೇವರು ಏನನ್ನೂ ಬಯಸುವುದಿಲ್ಲ. ಎಲ್ಲವನ್ನು ನಮಗೆ ಕೊಡುತ್ತಾನೆ.ಲೋಕವೇ ಉದ್ಧರಿಸಲ್ಪಡಲಿ ಎಂದು ಬಯಸಿದ ಸಂಸ್ಕೃತಿ ಭಾರತೀಯರದ್ದಾಗಿದೆ ಎಂದು ಅವರು ತಿಳಿಸಿದರು.
ಮಲ್ಲ ದುರ್ಗಾಪರಮೇಶ್ವರೀ ಕ್ಷೇತ್ರ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ದೇವಸ್ಥಾನಗಳು ಗತವೈಭವವನ್ನು ಮರಳಿ ಪಡೆಯುವುದರಿಂದ ಭಾರತೀಯ ಸಂಸ್ಕೃತಿ ಪ್ರಜ್ವಲಿಸುತ್ತದೆ. ದೇವಸ್ಥಾನದ ಜೀಣೋದ್ಧಾರಗಳಿಂದ ಊರಿನಲ್ಲಿ ಶಾಂತಿ ನೆಮ್ಮದಿ ಲಭಿಸುತ್ತದೆ ಎಂದು ಹೇಳಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಎಂ. ಗೋಪಾಲ ಕೃಷ್ಣ ನಡ್ವಂತಿಲ್ಲಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಎಂ. ಶ್ರೀನಿವಾಸ ನಡ್ವಂತಿಲ್ಲಾಯ ಸ್ವಾಗತಿಸಿ, ರಕ್ಷಾಧಿಕಾರಿ ಬಾಲಕೃಷ್ಣ ಶೆಟ್ಟಿ ವಂದಿಸಿ, ಪ್ರಚಾರ ಸಮಿತಿ ಸಂಚಾಲಕ ರಾಜೇಶ್ ಮಾಸ್ತರ್ ಅಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್