ಪುತ್ತಿಗೆ,ಶಿರಿಯ ಹೊಳೆಗಳಿಂದ ಮರಳು ಲೂಟಿ ವ್ಯಾಪಕ

ನೀರಿನ ಪ್ರಮಾಣ ಕುಸಿಯುತ್ತಿದ್ದಂತೆ ತಂಡಗಳು ಸಕ್ರಿಯ

Team Udayavani, Mar 29, 2019, 6:10 AM IST

KAS-SAND

ಹೊಳೆಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದ್ದಂತೆ ತೋರಿಬರುವ ಮರಳು.

ಕಾಸರಗೋಡು: ಬಿರುಬಿಸಿಲ ಬೇಗೆ ತೀವ್ರಗೊಳ್ಳುತ್ತಿರುವಂತೆ ಹೊಳೆಗಳಲ್ಲಿ ದಿನೇ ದಿನೆ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವಂತೆಯೇ ಮರಳು ಲೂಟಿಯೂ ವ್ಯಾಪಕಗೊಳ್ಳಲಾರಂಭಿಸಿದೆ. ಪುತ್ತಿಗೆ, ಶಿರಿಯ ಹೊಳೆಗಳಿಂದ ವ್ಯಾಪಕವಾಗಿ ಮರಳು ಲೂಟಿ ನಡೆಯುತ್ತಿದೆ.

ಮರಳು ದಂಧೆಯ ತಂಡಗಳು ರಾತ್ರಿ ಹಗಲೆನ್ನದೆ ಬತ್ತುತ್ತಿರುವ ಹೊಳೆಗಳಿಂದ ಕಾನೂನು ನಿಬಂಧನೆಗಳನ್ನೆಲ್ಲ ಗಾಳಿಗೆ ತೂರಿ ಮರಳು ಲೂಟಿ ನಡೆಸುತ್ತಿರುವುದಾಗಿ ಪರಿಸರ ನಿವಾಸಿಗಳು ಹೇಳುತ್ತಿದ್ದಾರೆ.

ಬದಿಯಡ್ಕ, ಆದೂರು, ಮಂಜೇಶ್ವರ, ಕುಂಬಳೆ ಠಾಣೆ ವ್ಯಾಪ್ತಿಯ ಪತ್ವಾಡಿ, ಪುತ್ತಿಗೆ, ಶಿರಿಯ, ಅಡ್ಕಸ್ಥಳ, ಪಳ್ಳತ್ತಡ್ಕ ಹೊಳೆಯ ಕುಡುಪಂಗುಯಿ, ಏತಡ್ಕ, ನೇರಪ್ಪಾಡಿ, ಏಳಾRನ, ಪಯಸ್ವಿನಿ, ಅತ್ತನಾಡಿ, ಅಡೂರು, ಆಲೂರು ಮತ್ತಿತರ ಹೊಳೆಗಳ ವಿವಿಧ ಸ್ಥಳಗಳಲ್ಲಿ ಮರಳು ಲೂಟಿ ತಂಡ ಸಕ್ರಿಯವಾಗಿದೆ. ಪೊಲೀಸರು ಹಾಗೂ ಸಂಬಂಧಪಟ್ಟ ಅ ಧಿಕಾರಿಗಳು ಮುಂಬರುವ ಲೋಕಸಭಾ ಚುನಾವಣೆಯ ಪ್ರಕ್ರಿಯೆಯಲ್ಲಿ ವ್ಯಸ್ಥರಾಗಿರುವುದರಿಂದ ಮರಳು ಲೂಟಿ ತಂಡಕ್ಕೆ ವರದಾನವಾಗಿ ಮಾರ್ಪಟ್ಟಿದೆ.

ಕನಿಷ್ಠ ವೇತನ ನೀಡಿ ಹೊಳೆಗಳಿಂದ ತೆಗೆಯುವ ಮರಳಿಗೆ 150 ಅಡಿಗೆ 15,000 ರೂ. ನಿಂದ 18,000 ರೂ.ವರೆಗೆ ಸಾಗಾಟ ತಂಡ ದರ ವಸೂಲಿ ಮಾಡುತ್ತಿದೆ. ಮುಂಜಾನೆಯಾಗುವಾಗ ಹತ್ತು ಲೋಡ್‌ನ‌ಷ್ಟು ಮರಳನ್ನು ಒಂದು ತಂಡ ಉದ್ದೇಶಿತ ಸ್ಥಳಗಳಿಗೆ ತಲುಪಿಸುತ್ತದೆ.

ಪೊಲೀಸರು ಹಾಗೂ ಇತರ ಅಧಿಕಾರಿಗಳ ನಡೆಗಳನ್ನು ತಿಳಿದುಕೊಂಡು ಮರಳು ಸಾಗಾಟ ತಂಡಕ್ಕೆ ಮಾಹಿತಿ ನೀಡುವುದಕ್ಕಾಗಿ ಒಳದಾರಿಗಳಲ್ಲಿ ವಾಹನ ನಿಲ್ಲಿಸಿ ಮೇಲುಸ್ತುವಾರಿ (ಸೂಪರ್‌ವಿಶನ್‌) ನಡೆಸುವ ತಂಡವೇ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿರುತ್ತದೆ. ಇವರಿಗೆ ಮರಳು ಸಾಗಾಟ ತಂಡ ವೇತನ ನೀಡುತ್ತದೆ. ಇಂತಹ ವ್ಯೂಹ ರಚಿಸಿಕೊಳ್ಳುವ ಮರಳು ದಂಧೆ ಅ ಧಿಕಾರಿಗಳ ಕಣ್ತಪ್ಪಿಸಿ ನಿರಂತರವಾಗಿ ನಡೆಯುತ್ತಿದ್ದು,ಸಾಗಾಟ ತಂಡ ಉದ್ದೇಶಿತ ಸ್ಥಳಕ್ಕೆ ಮರಳು ತಲುಪಿಸುತ್ತದೆ.

ಲಕ್ಷಾಂತರ ರೂ. ಆದಾಯದ ಮೂಲ
ಈ ಹಿಂದೆ ಪೊಲೀಸ್‌, ಭೂಗರ್ಭ ವಿಭಾಗ ಹಾಗೂ ಕಂದಾಯ ಇಲಾಖೆ ಅಧಿ ಕಾರಿಗಳು ಮರಳು ಸಾಗಾಟ ತಂಡಗಳ ವಿರುದ್ಧ ಕ್ರಮ ಕೈಗೊಂಡು, ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿತ್ತು. ಸರಕಾರದ ಖಜಾನೆಗೆ ಲಕ್ಷಾಂತರ ರೂ. ಆದಾಯ ಈ ಸಂದರ್ಭ ದಕ್ಕಿತ್ತು.

ಪುತ್ತಿಗೆ ಪಂಚಾಯತ್‌ ವ್ಯಾಪ್ತಿಯ ಅಂಗಡಿಮೊಗರಿ ನಿಂದ ಪಾಂಬಾಟಿಯವರೆಗಿನ ಪ್ರದೇಶಗಳಲ್ಲಿ ಹೊರ ರಾಜ್ಯದ ಕಾರ್ಮಿಕರಾದ ಬಂಗಾಳಿಗಳ ಮೂಲಕ ಮರಳು ಲೂಟಿ ನಡೆಸುತ್ತಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ. ಅಂಗಡಿಮೊಗರಿನ ಮಟ್ಟಂಪಾಡಿಯಿಂದ ಪಾಂಬಾಟಿಯವರೆಗೆ ಮರಳುಗಾರಿಕೆ ನಡೆಯುತ್ತಿದೆ.

ಶಿರಿಯ ಹೊಳೆ ಭಾಗಗಳಾದ ಇವು ಪಾಂಬಾಟಿಯಲ್ಲಿ ಪುತ್ತಿಗೆ ಹೊಳೆಗೆ ಸೇರಿಕೊಳ್ಳುತ್ತವೆ. ಇದಲ್ಲದೆ ಪುತ್ತಿಗೆ ಸೇತುವೆಯ ಸಮೀಪದಲ್ಲೂ ಮರಳುಗಾರಿಕೆ ಭಾರಿ ವೇಗದಲ್ಲಿ ನಡೆಯುತ್ತಿದೆ. ಮಳೆಗಾಲ ನಿಂತ ಕೂಡಲೇ ಇಲ್ಲಿ ಮರಳುಗಾರಿಕೆ ಬಲಗೊಳ್ಳುತ್ತದೆ ಎಂದು ನಾಗರಿಕರು ಹೇಳುತ್ತಿದ್ದಾರೆ. ಅಕ್ಟೋಬರ್‌ನಿಂದ ಜೂನ್‌ ಮೊದಲ ವಾರದವರೆಗೆ ಇಲ್ಲಿ ಮರಳುಗಾರಿಕೆ ಸರ್ವೇಸಾಮಾನ್ಯವಾಗಿದೆ. ಹಲವು ಬಾರಿ ಕುಂಬಳೆ ಪೊಲೀಸ್‌ ಠಾಣೆ, ಮಂಜೇಶ್ವರ ತಾಲೂಕು ಕಚೇರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ. ಇದಕ್ಕೆ ಉನ್ನತ ಅ ಧಿಕಾರಿಗಳ ಸಹಾಯ ಇದೆ ಎಂಬ ಸಂಶಯ ನಾಗರಿಕರಲ್ಲಿ ಬಲವಾಗಿದೆ.

ಪ್ರತಿ ವರ್ಷವೂ ಪುತ್ತಿಗೆ, ಅಂಗಡಿಮೊಗರು ಭಾಗಗಳಲ್ಲಿ ಮರಳು ಗಾರಿಕೆ ನಡೆಯುತ್ತದೆ. ಟನ್‌ಗಟ್ಟಲೆ ಮರಳು ಲೂಟಿಯಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಳೆ ನಿಂತೊಡನೆ ಈ ಹೊಳೆಗಳಿಗೆ ವಾಹನಗಳು ಇಳಿಯುತ್ತವೆ. ಹೊಳೆಗಳಲ್ಲಿ ವಾಹನಗಳ ಚಕ್ರಗಳ ಗುರುತು ಕಾಣಿಸಿಕೊಳ್ಳುತ್ತಿದ್ದು, ರಸ್ತೆಗಳೇ ರೂಪುಗೊಂಡಂತಿದೆ.

ವಿದ್ಯಾರ್ಥಿಗಳ ಬಳಕೆ
ಹೊಳೆಯಿಂದ ತೆಗೆಯುವ ಮರ ಳನ್ನು ಪ್ಲಾಸ್ಟಿಕ್‌ ಗೋಣಿ ಚೀಲಗಳಲ್ಲಿ ತುಂಬಿಸಿಡ ಲಾಗುತ್ತದೆ. ಬಳಿಕ ಟಿಪ್ಪರ್‌ ಲಾರಿ ಮತ್ತಿತರ ವಾಹನಗಳಲ್ಲಿ ಸಾಗಿಸುತ್ತಿರುವುದಾಗಿ ದೂರು ಕೇಳಿ ಬರುತ್ತಿದೆ. ಮರಳುಗಾರಿಕೆ ನಡೆಸಲು ಶಾಲಾ ವಿದ್ಯಾರ್ಥಿಗಳನ್ನು ಕೂಡ ಬಳಸು ತ್ತಿರುವ ಆರೋಪವಿದೆ. ಈ ರೀತಿ ಮರಳು ಗಾರಿಕೆ ಸಂದರ್ಭ ವರ್ಷಗಳ ಹಿಂದೆ ಮಂಜೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯ ಹೊಳೆ ಯೊಂದರ ನೀರಿನಲ್ಲಿ ಬಾಲಕನೋರ್ವ ಮುಳುಗಿ ಸಾವಿಗೀಡಾದ ಘಟನೆಯೂ ನಡೆದಿತ್ತು. ಈ ಮಧ್ಯೆ ಅಂಗಡಿಮೊಗರು, ಏಳಾನ ಮೊದಲಾದ ಕಡೆಗಳ ಹೊಳೆಗಳಿಂದ ಶಾಲಾ ವಿದ್ಯಾರ್ಥಿ ಗಳನ್ನು ಬಳಸಿಕೊಂಡು ಮರಳುಗಾರಿಕೆ ನಡೆಸುತ್ತಿರುವುದನ್ನು ಸ್ಥಳೀಯರು ತಡೆದಿದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.