ಶೇಷವನ: ಸಂಭ್ರಮದ ಮಹಾದೀಪೋತ್ಸವ
Team Udayavani, Nov 15, 2019, 5:12 AM IST
ಶೇಷವನ: ದೀಪ ಬೆಳಗಿಸುವುದರ ಮೂಲಕ ಕತ್ತಲು ದೂರವಾಗಿ ಬೆಳಕು ಬರುತ್ತದೆ, ಮಾನವನ ಅಜ್ಞಾನ ತೊಲಗಿ ಜ್ಞಾನದತ್ತ ಮರಳುತ್ತಾನೆ. ಅದಕ್ಕಾಗಿ ಬೆಳಕು ಜ್ಞಾನದ ಸಂಕೇತ ಎಂಬುದಾಗಿ ಹೇಳಿದ್ದಾರೆ. ಇಂತಹ ದೀಪ ಬೆಳಗಿಸುವುಕ್ಕೆ ಸೂಕ್ತವಾದ ಮಾಸ ಕಾರ್ತಿಕಮಾಸ. ಕಾರ್ತಿಕ ಮಾಸದ ಕೃತ್ತಿಕಾ ನಕ್ಷತ್ರ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಜನ್ಮ ನಕ್ಷತ್ರ ದಿನ ಕೂಡ್ಲಿನ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮಹಾದೀಪೋತ್ಸವ ಆಚರಿಸಲಾಯಿತು.
ಸೂರ್ಯೋದಯದಿಂದ ಸೂರ್ಯಾಸ್ತ ಮಾನದವರೆಗೆ ಶೇಷವನ ಮಹಿಳಾ ಭಕ್ತ ವೃಂದ, ಚಿನ್ಮಯ ಮಹಿಳಾ ಭಕ್ತ ವೃಂದ, ಲಕ್ಷ¾ಣಾನಂದ ಸರಸ್ವತಿ ಮಹಿಳಾ ಭಜನಾ ಮಂಡಳಿ ಅಣಂಗೂರು, ಮಹಾಗಣಪತಿ ಮಹಿಳಾ ಭಜನಾ ಸಂಘ ಮಧೂರು, ಮಹಾದೇವಿ ಮಹಿಳಾ ಭಜನಾ ಮಂಡಳಿ ಕಳತ್ತೂರು, ಕೊರತಿ ಬಂಟ್ಸ್ ಮಹಿಳಾ ಭಜನಾ ಸಂಘ ಬದಿಯಡ್ಕ, ರಾಜರಾಜೇಶ್ವರಿ ಮಾತೃ ಮಂಡಳಿ ಪೆರುವಾಯಿ, ಸಪ್ತಗಿರಿ ಮಹಿಳಾ ಭಜನಾ ಸಂಘ ಕಾಸರಗೋಡು, ವಿಷ್ಣುವಿನಾಯಕ ಭಜಕವೃಂದ ಕಾವುಗೋಳಿ, ಚಾಮುಂಡೇಶ್ವರಿ ಮಹಿಳಾ ಭಜನಾ ಸಂಘ ಕೂಡ್ಲು ಇವರಿಂದ ವಿಶೇಷ ಸಂಕೀರ್ತನಾರ್ಚನೆ ನಡೆಯಿತು.
ಸಂಜೆ ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ಟ ಮತ್ತು ಶಿಷ್ಯ ವೃಂದ, ಹವ್ಯಕ ಪರಿಷತ್ತು ಮುಳ್ಳೇರಿಯ ಮಂಡಲ ಇವರಿಂದ ವೇದ ಪಾರಾಯಣ ಜರಗಿತು. ರಾತ್ರಿ ವಿಶೇಷ ಅಲಂಕಾರ ಸಹಿತ ದೀಪೋತ್ಸವದೊಂದಿಗೆ ಕಾರ್ತಿಕ ಪೂಜೆ ನಡೆಯಿತು. ನವೆಂಬರ್ 26 ರಂದು ಕಾರ್ತಿಕಮಾಸ ದೀಪೋತ್ಸವ ಸಂಪನ್ನ ಗೊಳ್ಳಲಿದೆ. ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಉತ್ಸವ ಸಮಿತಿ ಯುವಕ ಸಂಘ, ಮಹಿಳಾ ಸಂಘ ಕಾರ್ಯಕ್ರಮದ ನೇತೃತ್ವ ವಹಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ