ಹೊಸಮನೆಯಲ್ಲಿ ಸೋದರಿಗಾಗಿ ಕಾದಿರುವ ಶರ್ಮಿಳಾ
Team Udayavani, Feb 24, 2020, 5:46 AM IST
ಕಾಸರಗೋಡು: ಕಾದಿರುವರು ಹೊಸಮನೆಯಲ್ಲಿ ಶರ್ಮಿಳಾ ಸಹೋದರಿಯ ಬರೋಣಕ್ಕಾಗಿ… ರಾಜ್ಯ ಸರಕಾರದ ಜನಪರ ಯೋಜನೆಗಳಲ್ಲಿ ಒಂದಾಗಿರುವ ಲೈಫ್ ಮಿಷನ್ ಮೂಲಕ ನೂತನ ನಿವಾಸ ನಿರ್ಮಿಸಿಕೊಂಡಿರುವ ಶರ್ಮಿಳಾ ಅವರು ನೂತನ ಮನೆಗೆ ತಮ್ಮ ಸಹೋದರಿಯ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ. ಕಲ್ಲಿಕೋಟೆಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯಲ್ಲಿರುವ ಸೋದರಿ ಶೀಘ್ರದಲ್ಲಿ ನೂತನ ಮನೆಗೆ ಬರುವ ನಿರೀಕ್ಷೆಯಲ್ಲಿ ಶರ್ಮಿಳಾ ಇದ್ದಾರೆ. ಕಾರಡ್ಕ ನೀರೋಳಿಪ್ಪಾರೆ ಪರಿಶಿಷ್ಟ ಪಂಗಡ ಕಾಲನಿಯಲ್ಲಿ ಇವರಿಗೆ ನೂತನ ಮನೆ ನಿರ್ಮಾಣವಾಗಿದೆ.
ಕೆಲವು ವರ್ಷಗಳ ಹಿಂದೆಯೇ ಹೆತ್ತವರನ್ನು ಕಳೆದುಕೊಂಡಿದ್ದ ಇವರು ತಮ್ಮ ಸೋದರಿ ಶೋಭಾ ಅವರೊಂದಿಗೆ ಹಳೆಯ ಶಿಥಿಲ ಮನೆಯಲ್ಲಿ ವಾಸವಾಗಿದ್ದರು. ಮನೆಯ ದುಸ್ಥಿತಿಯ ಹಿನ್ನೆಲೆಯಲ್ಲಿ ಅವರನ್ನು ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಥಳೀಯ ಟಿ.ವಿ. ಶೆಡ್ಗೆ ಸ್ಥಳಾಂತರಿಸಿದ್ದರು. ಮಾನಸಿಕ ಅಸ್ವಸ್ಥತೆ ಹೊಂದಿದ್ದ ಸೋದರಿ ಶೋಭಾ ಅವರು ಶರ್ಮಿಳಾ ಅವರಿಗೆ ದೈಹಿಕ ಹಿಂಸೆಯನ್ನು ನೀಡುತ್ತಿದ್ದ ಹಿನ್ನೆಲೆಯಲ್ಲಿ, ಅವರನ್ನು ಕಲ್ಲಿಕೋಟೆಯ ಮಾನಸಿಕ ಆರೋಗ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಒಡಹುಟ್ಟಿದವಳು ಆಸ್ಪತ್ರೆಗೆ ದಾಖಲಾದ ಮೇಲೆ ಶರ್ಮಿಳಾ ಏಕಾಂಗಿ ಬದುಕನ್ನು ಸವೆಸಬೇಕಾಗಿ ಬಂದಿತ್ತು.
ಹಲವು ಸಮಸ್ಯೆಗಳ ನಡುವೆಯೂ ಲೈಫ್ ಮಿಷನ್ ಮೂಲಕ ನೂತನ ಸುರಕ್ಷಿತ ನಿವಾಸವೊಂದು ಲಭಿಸಿರುವುದು ಶರ್ಮಿಳಾರ ಬದುಕಿಗೆ ಹೊಸ ಆಶಾಕಿರಣವಾಗಿದೆ. ಲೈಫ್ ಮಿಷನ್ ಯೋಜನೆ ಮೂಲಕ 4 ಲಕ್ಷ ರೂ., ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯಿಂದ 2 ಲಕ್ಷ ರೂ. ಲಭಿಸಿದ ಹಿನ್ನೆಲೆಯಲ್ಲಿ ಒಟ್ಟು 6 ಲಕ್ಷ ರೂ.ನಲ್ಲಿ ಸುಭದ್ರ ನಿವಾಸ ನಿರ್ಮಾಣವಾಗಿದೆ. ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕತನ ನಡೆಸುವ ಮೂಲಕ ಇವರು ಜೀವನ ನಡೆಸುತ್ತಿದ್ದಾರೆ.
ಸೋದರಿಯೂ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಮರಳಿದರೆ ಈ ಮನೆಯಲ್ಲಿ ನೆಮ್ಮದಿಯಿಂದ ಬಾಳಬಹುದು ಎಂಬ ನಿರೀಕ್ಷೆಯಲ್ಲಿ ಶರ್ಮಿಳಾ ಅವರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ