ಸೌರಶಕ್ತಿ : ಮಾದರಿಯಾದ ಪಿಲಿಕೋಡ್‌ ಗ್ರಾಮ ಪಂಚಾಯತ್‌


Team Udayavani, Jan 18, 2019, 12:35 AM IST

17ksde7.jpg

ಕಾಸರಗೋಡು: ವಿದ್ಯುತ್‌ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪಿಲಿಕೋಡ್‌ ಗ್ರಾಮ ಪಂಚಾಯತ್‌ ನಲ್ಲಿ ಜಾರಿಗೊಳಿಸಲಾದ ಸೌರಶಕ್ತಿ ಯಾನ ಯೋಜನೆ ಯಶಸ್ವಿಯಾಗಿ ಮುಂದುವರಿಯುತ್ತಿದೆ.

ಗರಿಷ್ಠ ಸೌರಶಕ್ತಿ ಬಳಕೆ 
ಈಗಿರುವ ವ್ಯವಸ್ಥೆಯಲ್ಲಿ ವಿದ್ಯುತ್‌ ಬಳಕೆ ಗಮನಾರ್ಹ ರೂಪದಲ್ಲಿ ಕಡಿಮೆಗೊಳಿಸಿ, ಸೌರಶಕ್ತಿಯನ್ನು ಗರಿಷ್ಠ ಮಟ್ಟದಲ್ಲಿ ಬಳಸುವ ಗುರಿಯೊಂದಿಗೆ ಯೋಜನೆ ದಾಪುಗಾಲು ಹಾಕುತ್ತಿದೆ. ಗ್ರಾಮಪಂಚಾಯತ್‌ನ ಜನ ಎರಡೂ ಕೈಗಳಿಂದ ಈ ಯೋಜನೆಯನ್ನು ಸ್ವೀಕರಿಸಿದ್ದಾರೆ. ಜನಸಂಖ್ಯೆ ಹೆಚ್ಚಳ, ವಸತಿ ಸೌಲಭ್ಯಗಳ ಹೆಚ್ಚಳ, ಉಪಕರಣಗಳ ವೈವಿಧಿÂàಕರಣ ಇತ್ಯಾದಿಗಳಿಂದ ಸೌರಶಕ್ತಿಯ ಬಳಕೆಗೆ ಇಲ್ಲಿ ಮಹತ್ವ ಲಭಿಸಿದೆ. ವಿನೂತನ ತಂತ್ರಜ್ಞಾನದಿಂದ ನವೀನ ನಿತ್ಯಬಳಕೆಯ ಸಾಮಗ್ರಿಗಳಿಗೆ ಪೂರಕವಾಗಿದೆ.

ಹಂತ ಹಂತದ ಜಾರಿ 
ಹಂತಹಂತವಾಗಿ ಸೌರಶಕ್ತಿ ಬಳಕೆ ವ್ಯಾಪಕ ಗೊಳಿಸುವ ಜತೆಗೆ ಪ್ರಕೃತಿಗೆ ಪೂರಕವಾದ ಶಕ್ತಿ ಸಂರಕ್ಷಣೆ, ತಾಂತ್ರಿಕತೆ ಕುರಿತಾದ ಮಾಹಿತಿ ಸ್ಥಳೀಯ  ಜನತೆಗೆ ಒದಗಿಸಿ ಅವರನ್ನು ಸೌರಶಕ್ತಿ ಬಳಕೆಗೆ ಸಿದ್ಧ ಗೊಳಿಸುವುದು ಯೋಜನೆಯ ಗುರಿ. ಇದರ ಅಂಗ ವಾಗಿ ಸಾರ್ವಜನಿಕ ಪ್ರದೇಶಗಳ ದಾರಿದೀಪ, ಲೈಟ್‌ ಕಂಬಗಳನ್ನು ಪೂರ್ಣರೂಪದಲ್ಲಿ ಎಲ್‌.ಇ.ಡಿ.ಗೆ ಬದಲಿಸಲಾಗಿದೆ.

ಎಂ.ಇ.ಸಿ. ಸಹಕಾರ 
ಯೋಜನೆಯನ್ನು ಫಲದಾಯಕವಾಗಿ ಜಾರಿಗೊಳಿಸುವ ಉದ್ದೇಶದಿಂದ ಪಂಚಾಯತ್‌ ನಿವಾಸಿ ಕುಟುಂಬಗಳ ವಿದ್ಯುತ್‌ ಬಳಕೆ, ಬಳಸುವ ಉಪಕರಣಗಳ ಸಾಮರ್ಥ್ಯ, ಸೌರಶಕ್ತಿಯನ್ನು ಲಾಭಕರವಾಗಿ ಬಳಸುವ ಸಂಬಂಧ ಮಾಹಿತಿ ಸಂಗ್ರಹಿಸಲಾಗಿತ್ತು. ಹೆಚ್ಚುವರಿ ಮಾಹಿತಿಗಾಗಿ ಸೌರಶಕ್ತಿ ವಲಯದಲ್ಲಿ ಚಟುವಟಿಕೆ ನಡೆಸುತ್ತಿರುವ ಎಂ.ಇ.ಸಿ. ಕೇರಳಂ ಸಂಸ್ಥೆಯನ್ನು ಸಂಪರ್ಕಿಸಲಾಯಿತು. ಪಂಚಾಯತ್‌ನ ಮನವಿಯನ್ನು ಸ್ವೀಕರಿಸಿದ ಎಂ.ಇ.ಸಿ. ಸಂಸ್ಥೆ ಪ್ರಾಥಮಿಕ ಹಂತದ ತರಬೇತಿ ಸಾಮಾಜಿಕ ಕಾರ್ಯಕರ್ತರಿಗೆ ಮತ್ತು ವಿದ್ಯುತ್‌ ಇಲಾಖೆ ಸಿಬಂದಿ ಸಹಿತ 50 ಮಂದಿಗೆ ತಿರುವನಂತಪುರದಲ್ಲಿ 2ದಿನಗಳ ತರಬೇತಿ ಒದಗಿಸಿತು. ಇದು ಅನಂತರದ ಪ್ರಗತಿಗೆ ತಳಹದಿಯಾಗಿತ್ತು.

ಸಮಿತಿ ರಚಿಸಿ ಕ್ರಮ 
ನಂತರ ವಾರ್ಡ್‌ ಮಟ್ಟದಲ್ಲಿ ಸೌರಶಕ್ತಿಯಾನ ಯೋಜನೆ ಸಂಬಂಧ ಸಮಿತಿಗಳನ್ನು ರಚಿಸ ಲಾಯಿತು. ಈ ಮೂಲಕ ರಾಜಕೀಯ ಪಕ್ಷಗಳ, ಸಾಮಾಜಿಕ ಸಂಘಟನೆಗಳ ಪ್ರತಿನಿ ಧಿಗಳ ಪ್ರತ್ಯೇಕ ಸಭೆಗಳನ್ನು ನಡೆಸಲಾಯಿತು. ತದನಂತರ ನೆರೆಕೂಟ ಮಟ್ಟದಲ್ಲಿ ನಿರಂತರ ತರಗತಿಗಳು, ಪಂಚಾಯತ್‌ ಮಟ್ಟದಲ್ಲಿ ವಾಟ್ಸಾಪ್‌ ಗುಂಪುಗಳ ಒಕ್ಕೂಟ, ಮನೆಮನೆ ಸಂದರ್ಶನ, ಮೀಟರ್‌ ರೀಡಿಂಗ್‌ ಬಗ್ಗೆ  ಕ್ರಿಯಾತ್ಮಕ ತರಬೇತಿ ಇತ್ಯಾದಿ ನಡೆಸಲಾಯಿತು.

ಗಮನಾರ್ಹ ಬದಲಾವಣೆ 
ಪಿಲಿಕೋಡ್‌ ಪಂಚಾಯತ್‌ನ ಜನತೆಯ ವಿದ್ಯುತ್‌ ಬಳಕೆ 2016ರ ಮಾರ್ಚ್‌ನಿಂದ 2017 ಮಾರ್ಚ್‌ಗೆ ತಲಪುವ ಸಂದರ್ಭ 101694 ಯೂನಿಟ್‌ ಆಗಿ ಕಡಿಮೆಗೊಂಡಿತ್ತು. 2018 ಎ.12ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪಿಲಿಕೋಡ್‌ ಗ್ರಾಮ ಪಂಚಾಯತನ್ನು “ದೇಶದ ಮೊದಲ ಫಿಲಮೆಂಟ್‌ ಬಲ್ಬ್ ರಹಿತ ಪಂಚಾಯತ್‌’ ಎಂದು ಘೋಷಿಸಿದರು.

ಎರಡನೇ ಹಂತದ ಜಾರಿ 
ಸೌರಶಕ್ತಿಯಾನ ಯೋಜನೆ ಈಗ ಎರಡನೇ ಹಂತವಾಗಿ ಜಾರಿಯಲ್ಲಿದೆ. ನಿರಂತರ ಸೌರಶಕ್ತಿ ಬಳಕೆಯ ಹಿನ್ನೆಲೆಯಲ್ಲಿ ಸೌರಗ್ರಾಮ ಯೋಜನೆಯನ್ನು ರಚಿಸಲಾಗಿದೆ. ಅನಾರ್ಟ್‌ ಸಂಸ್ಥೆಯ ನೇತೃತ್ವದಲ್ಲಿ ಗ್ರಾ.ಪಂ.ನ ಎಲ್ಲ ಸಂಸ್ಥೆಗಳಲ್ಲಿ ಸೌರಶಕ್ತಿ ಬಳಸುವ ಯತ್ನ ಈಗ ನಡೆದುಬರುತ್ತಿದೆ.

ಸಮಸ್ಯೆಗಳಿಗೆ ಪರಿಹಾರ 
ಪ್ರಕೃತಿಗೆ ಹಾನಿ ಮಾಡಬಲ್ಲ ಹಳೆಯ ಕ್ರಮಗಳಿಂದ ಮುಂದಿನ ಜನಾಂಗಕ್ಕೆ ಸಮಸ್ಯೆಯಾಗಬಲ್ಲ ಅನೇಕ ವಿಚಾರಗಳೂ ಇದ್ದುವು. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಜನ ಒಂದು ಕಡೆ ಸೇರಿ ನಡೆಸಿದ ಯತ್ನದ ಫಲವಾಗಿ ಸೌರಶಕ್ತಿ ಬಳಕೆಯ ಸೌರಶಕ್ತಿಯಾನ ಯೋಜನೆ ಜಾರಿಗೆ ಬಂದಿದೆ.

ಟಾಪ್ ನ್ಯೂಸ್

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

10-sulya

ಚಾರಿತ್ರಿಕ ಪರಂಪರೆಗಳ ಸಂರಕ್ಷಣೆಗಾಗಿ ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ (ರಿ.) ಕಾರ್ಯಾರಂಭ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

Manjeshwar ವಿದ್ಯುತ್‌ ಆಘಾತ: ಯುವಕ ಸಾವು

Manjeshwar ವಿದ್ಯುತ್‌ ಆಘಾತ: ಯುವಕ ಸಾವು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.