ವಿದ್ಯುನ್ಮಂಡಳಿಯಿಂದ ಸೌರಶಕ್ತಿ ಯೋಜನೆಗೆ ನಾಂದಿ


Team Udayavani, Jan 19, 2019, 12:30 AM IST

solor.jpg

ಕಾಸರಗೋಡು: “ನಾಡಿಗೆ ಬೆಳಕು-ಮನೆಗೆ ಲಾಭ’ ಎಂಬ ಗುರಿಯೊಂದಿಗೆ ಮನೆಯ ಮೇಲ್ಛಾವಣಿ ಯಲ್ಲಿ ಸೌರಶಕ್ತಿ ಯೋಜನೆಗೆ ವಿದ್ಯುತ್‌ ಖಾತೆ ನಾಂದಿಹಾಡುತ್ತಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಕೆ.ಎಸ್‌.ಇ.ಬಿ. ನೇತೃತ್ವದಲ್ಲಿ ರಾಜ್ಯದಲ್ಲಿ ಒಂದು ಸಾವಿರ ಮೆಗಾವ್ಯಾಟ್‌ ವಿದ್ಯುತನ್ನು ಸೌರಶಕ್ತಿ ಯೋಜನೆ ಮೂಲಕ ಉತ್ಪಾದಿಸುವುದು ಈ ಯೋಜನೆಯ ಉದ್ದೇಶ. 

ಇದರಲ್ಲಿ 30 ಮೆಗಾವ್ಯಾಟ್‌ (3 ಸಾವಿರ ಕಿಲೋವ್ಯಾಟ್‌) ಕಾಸರಗೋಡು ಜಿಲ್ಲೆಯಿಂದ ಉತ್ಪಾದನೆಗೊಳಿಸುವ ಗುರಿಯಿದೆ.
ಮನೆ, ಕೃಷಿ ಬಳಕೆದಾರರಿಗೆ 150 ಮೆಗಾವ್ಯಾಟ್‌, ಸರಕಾರದ ಕಟ್ಟಡಗಳಿಗೆ 100, ಮನೆಯೇತರ, ಸರಕಾರೇತರ ಸಂಸ್ಥೆಗಳಿಗೆ 250 ಮೆಗಾವ್ಯಾಟ್‌ ಎಂದು ವಿಂಗಡಿಸಿ ರಾಜ್ಯದಲ್ಲಿ ಒದಗಿಸಲಾಗುವುದು. ಪ್ರತಿ ಗ್ರಾಹಕನಿಗಾಗಿ ವಿವಿಧ ಯೋಜನೆಗಳೂ ಇವೆ.

ಮೊದಲ ಯೋಜನೆ 
ಫಲಾನುಭವಿಯ ಕಟ್ಟಡದ ಮೇಲ್ಛಾವಣಿಯಲ್ಲಿ ವಿದ್ಯುತ್‌ ಮಂಡಳಿಯ ವೆಚ್ಚದಲ್ಲಿ (ಉಚಿತವಾಗಿ)ಸೌರಶಕ್ತಿ ಪ್ಯಾನೆಲ್‌ ನಿಲಯವನ್ನು ಸ್ಥಾಪಿಸುವುದು ಮೊದಲ ಯೋಜನೆಯಾಗಿದೆ. ಈ ಮೂಲಕ ಉತ್ಪಾದಿಸುವ ವಿದ್ಯುತ್‌ನ ಶೇ.10 ಕಟ್ಟಡದ ಮಾಲಕನಿಗೆ ಪೂರೈಕೆಯಾಗಲಿದೆ. ಜತೆಗೆ ಉತ್ಪಾದಿಸುವ ವಿದ್ಯುತ್‌ ದೀರ್ಘಾವ ಧಿಗೆ ಬಳಸುವ ನಿಟ್ಟಿನಲ್ಲಿ ನಿಗದಿತ ಶುಲ್ಕದಲ್ಲಿ ಕಟ್ಟಡದ   ಮಾಲಕನಿಗೆ ಒದಗಿಸಲಾಗುವುದು. ಇಲ್ಲಿನ ಸೌರ ನಿಲಯದ ಪರಿಪಾಲನೆಯ ಹೊಣೆಯನ್ನು 25 ವರ್ಷಗಳ ವರೆಗೆ ಕೆ.ಎಸ್‌.ಇ.ಬಿ.ವಹಿಸಿಕೊಳ್ಳಲಿದೆ.

ಎರಡನೇ ಯೋಜನೆ 
ಎರಡನೇ ಯೋಜನೆಯ ರೂಪದಲ್ಲಿ ಕಟ್ಟಡದ ಮೇಲ್ಛಾವಣಿಯಲ್ಲಿ ಗ್ರಾಹಕನ ವೆಚ್ಚದಲ್ಲಿ ಸೌರಶಕ್ತಿ ನಿಲಯ ಸ್ಥಾಪಿಸಿ ಕೊಡಲಾಗುವುದು. ಇಲ್ಲಿ ಉತ್ಪಾದಿಸಲಾಗುವ ವಿದ್ಯುತ್ತನ್ನು ಭಾಗಶ: ಅಥವಾ ಪೂರ್ಣರೂಪದಲ್ಲಿ ವಿದ್ಯುತ್‌ ಮಂಡಳಿ ನಿಗದಿತ ರೂಪದಲ್ಲಿ ಖರೀದಿ ಮಾಡಲಿದೆ. ಗ್ರಾಹಕ ಅಗತ್ಯವಿದ್ದರೆ ಈ ವಿದ್ಯುತ್ತನ್ನು ಬಳಸಲೂಬಹುದು.

ಮಾಡಿನಲ್ಲಿ ಯಾ ಜಾಗದಲ್ಲಿ 
ಗ್ರಾಹಕನ ಮನೆ ಮಾಡಿನಲ್ಲಿ ಯಾ ಜಾಗದಲ್ಲಿ ಸೌರಶಕ್ತಿ ನಿಲಯವನ್ನು ಸ್ಥಾಪಿಸಿ ನೀಡಲಾಗುವುದು. ಇದಕ್ಕೆ ಕನಿಷ್ಠ 200 ಚದರ ಅಡಿ ಜಾಗದ ಅಗತ್ಯವಿದೆ.ಇಲ್ಲಿ 2 ಕಿಲೋವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಧ್ಯ. 200 ಚದರ ಅಡಿ ಸೋಲಾರ್‌ ಪ್ಯಾನೆಲ್‌ ಸ್ಥಾಪನೆಗೆ ಕೇವಲ 1.30 ಲಕ್ಷ ರೂ. ವನ್ನು ಕೆ.ಎಸ್‌.ಇ.ಬಿ. ಪಡೆಯಲಿದೆ. 

ಜನರ ಬಳಿಗೆ ಯೋಜನೆ 
ಜನತೆಯ ಬಳಿಗೆ ಈ ಯೋಜನೆ ತಲಪಿಸುವ ನಿಟ್ಟಿನಲ್ಲಿ ಕೆ.ಎಸ್‌. ಇ.ಬಿ.ಎಲ್‌. ಪ್ರತಿ ಸಬ್‌ ಡಿವಿಜನ್‌ ಮಟ್ಟದಲ್ಲಿ ತಲಾ ಇಬ್ಬರು ಸೋಲಾರ್‌ ಎಕ್ಸಿಕ್ಯೂಟಿವ್‌ಗಳನ್ನು ನೇಮಿಸಿದೆ. ಜಿಲ್ಲೆಯಲ್ಲಿ ಈವರೆಗೆ 2 ಸಾವಿರಕ್ಕೂ ಅ ಧಿಕ ಮಂದಿ ಮನೆಯ ಮೇಲ್ಛಾವಣಿ ಸೌರಶಕ್ತಿ ಯೋಜನೆಯಲ್ಲಿ ನೋಂದಣಿ ನಡೆಸಿದ್ದಾರೆ. ರಾಜ್ಯದಲ್ಲಿ ಅತ್ಯಧಿ ಕ ನೋಂದಣಿ ನಡೆದಿರುವ ಪ್ರದೇಶ ವಯನಾಡ್‌ ಜಿಲ್ಲೆಯ ಕಲ್ಪಟ್ಟ ಆಗಿದೆ. ಹೆಚ್ಚುವರಿ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 0471 2555544,1912

ಮಾಡಬೇಕಾದುದೇನು? 
ಮನೆಯ ಮೇಲ್ಛಾವಣಿಯಲ್ಲಿ ಸೌರಶಕ್ತಿ ಯೋಜನೆ ಜಾರಿಗೊಳಿಸಲು ಆಸಕ್ತರು ಜ.31ರ ಮುಂಚಿತವಾಗಿ ಕೆ.ಎಸ್‌.ಇ.ಬಿ.ಯಲ್ಲಿ ನೋಂದಣಿ ನಡೆಸಬೇಕು. ಸರಳವಾದ 5 ಹಂತಗಳಲ್ಲಿ ನೋಂದಣಿ ನಡೆಸಬಹುದಾಗಿದೆ. ಮನೆಗಳಲ್ಲಿ/ಸಂಸ್ಥೆಗಳಲ್ಲಿ ಎಪ್ರಿಲ್‌ ತಿಂಗಳ ವರೆಗೆ ಇಲಾಖೆಯ ಸಿಬಂದಿ ಈ ಸಂಬಂಧ ಆಗಮಿಸಿ ತಪಾಸಣೆ ನಡೆಸಲಿದ್ದಾರೆ. ನಂತರ 2019ನೇ ಇಸವಿಯ ಮಧ್ಯದಲ್ಲಿ ಸೋಲಾರ್‌ ಪ್ಯಾನೆಲ್‌ಗ‌ಳ ಸ್ಥಾಪನೆ ನಡೆಯಲಿದೆ. 
 

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

10-sulya

ಚಾರಿತ್ರಿಕ ಪರಂಪರೆಗಳ ಸಂರಕ್ಷಣೆಗಾಗಿ ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ (ರಿ.) ಕಾರ್ಯಾರಂಭ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

Manjeshwar ವಿದ್ಯುತ್‌ ಆಘಾತ: ಯುವಕ ಸಾವು

Manjeshwar ವಿದ್ಯುತ್‌ ಆಘಾತ: ಯುವಕ ಸಾವು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.