ಎಡನಾಡು ಪರಿಸರದಲ್ಲಿ ಅಧ್ಯಯನ: ಚಿಟ್ಟೆ ಲೋಕದತ್ತ ಮಕ್ಕಳ ಸೈನ್ಯ


Team Udayavani, Jun 26, 2019, 5:48 AM IST

chitte-loka

ಕಾಸರಗೋಡು: ಬಣ್ಣ ಬಣ್ಣದ ಚಿಟ್ಟೆಗಳ ಪರಿಚಯ. ಅವುಗಳು ಆಶ್ರಯಿಸಿಕೊಂಡಿರುವ ಮರಗಿಡಗಳ ಜ್ಞಾನ. ಚಿಟ್ಟೆಗಳ ಇರುವಿಕೆಗೆ ಜೀವ ವೈವಿಧ್ಯತೆಯ ಅಗತ್ಯ ಇವೇ ಮುಂತಾದ ಹತ್ತು ಹಲವು ಮಾಹಿತಿಗಳನ್ನು ಕಲೆಹಾಕಲು ವಾರದ ರಜಾ ದಿನವನ್ನು ಸದುಪಯೋಗಪಡಿಸಿದ ಮಕ್ಕಳ ಸೈನ್ಯವೊಂದು ಚಿಟ್ಟೆ ಜಗತ್ತಿನ ಅಧ್ಯಯನಕ್ಕಿಳಿಯಿತು.

ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಸ್ಕೌಟ್ಸ್‌ ತಂಡದ ಸದಸ್ಯರು ಭಾಗವಹಿಸಿದ ಅಧ್ಯಯನ ಶಿಬಿರದಲ್ಲಿ ಮೂವತ್ತೆರಡು ಚಿಟ್ಟೆಗಳನ್ನು ಗುರುತಿಸಲಾಯಿತು. ಕಾಡು- ತೋಡು, ತೋಟ, ಪಳ್ಳ ಗದ್ದೆಗಳೊಂದಿಗೆ ಜೈವಿಕ‌ ವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿರುವ ಪುತ್ತಿಗೆ ಗ್ರಾಮ ಪಂಚಾಯತ್‌ನ ಎಡನಾಡು ಗ್ರಾಮದ ಪೊಯೆÂ ಪ್ರದೇಶದಲ್ಲಿನ ವೈವಿಧ್ಯಮಯ ಚಿಟ್ಟೆ ಪ್ರಪಂಚವನ್ನು ಮಕ್ಕಳು ಆಸ್ವಾದಿಸಿದರು.

ಪರಾಗಸ್ಪರ್ಶಕ್ಕೆ ತಮ್ಮದೇ ಕಾಣಿಕೆ ನೀಡುವ ಪಾತರಗಿತ್ತಿಗಳದ್ದು ಬಹು ಅಲ್ಪ ಕಾಲಾವಧಿಯ ಬದುಕು. ಆದರೆ ತಮ್ಮ ಚಿತ್ರ-ವಿಚಿತ್ರ ಬಣ್ಣದಿಂದ ಹಸಿರು ಪರಿಸರದ ಸೌಂದರ್ಯ ಹೆಚ್ಚಿಸುವಂತೆ ಮಾಡುವ ಚಿಟ್ಟೆ ಗಳ ಬಗ್ಗೆ ವಿಶ್ವದಲ್ಲಿ ಇದೀಗಲೂ ಹಲವಾರು ಸಂಶೋಧನೆಗಳು ನಡೆಯುತ್ತಿವೆ. ಅವುಗಳ ಜೀವನ ಕ್ರಮಗಳನ್ನು ತಿಳಿಯಬೇಕಾದರೆ ನಿರಂತರ ಅಧ್ಯಯನದ ಅಗತ್ಯವೂ ಇದೆ ಎಂಬುದನ್ನು ಮಕ್ಕಳು ಮನಗಂಡರು.

ಚಿಟ್ಟೆಗಳ ಜೀವನ ಚಕ್ರ ಹಾಗೂ ವಿಸ್ಮಯಕಾರಿ ವಿಚಾರಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಮುರಳಿ ಮಾಧವ ಪೆಲ್ತಾಜೆ ಹಾಗೂ ಮ್ಯಾಕ್ಸಿಂ ಕೊಲ್ಲಂಗಾನ ಮಕ್ಕಳೊಂದಿಗೆ ಮಾಹಿತಿ ವಿನಿಮಯ ನಡೆಸಿದರು. ಚಿಟ್ಟೆ ನಿರೀಕ್ಷಣೆಯ ನಂತರ ಪೊಯೆÂ ತೋಡಿನಲ್ಲಿ ನೀರಾಟವಾಡಿದರು. ಅಧ್ಯಾಪಕ ರಾಜು ಕಿದೂರು ಹಾಗೂ ಪೂರ್ವ ಸ್ಕೌಟ್‌ ವಿದ್ಯಾರ್ಥಿ ಸನ್ನಿ ಸನ್ವಿಲ್‌ ಸಹಕರಿಸಿದರು.

ಪಾತರಗಿತ್ತಿ ಲೋಕ
ಹೆಚ್ಚು ಮಳೆ ಸಿಗುವ ಕಾಡಿನ ಬದಿಗಳಲ್ಲಿ ಕಂಡು ಬರುವ ರುಸ್ಟಿಕ್‌ ಚಿಟ್ಟೆಯನ್ನು ಪೊಯೆÂ ತೋಡಿನ ಹತ್ತಿರದಿಂದ ನಿರೀಕ್ಷಣೆ ಮಾಡಲಾಯಿತು. ನೀರಿಲ್ಲದ ಪ್ರದೇಶಗಳಲ್ಲಿ ಮಾತ್ರ ಕಾಣಲ್ಪಡುವ ಯಾಮ್ಲಿà ಎಂಬ ಚಿಟ್ಟೆಯನ್ನು ರಸ್ತೆ ಬದಿಯಿಂದ ಮಕ್ಕಳು ನೋಡಿದರು. ತನ್ನನ್ನು ಬೇಟೆಯಾಡಲು ಬರುವ ಜೀವಿಗಳನ್ನು ಎದುರಿಸುವ ಸಾಮರ್ಥ್ಯವುಳ್ಳ ಟೋನಿ ಕ್ಯಾಸ್ಟರ್‌ ಎಂಬ ಚಿಟ್ಟೆಯನ್ನು ಇದೇ ಸಂದ‌ರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳ ಸಹಾಯದೊಂದಿಗೆ ಮಕ್ಕಳು ಗುರುತಿಸಿದರು. ಇವುಗಳನ್ನಲ್ಲದೆ ಕಾಮನ್‌ ಬುಶ್‌ ಬ್ರೌನ್‌, ಕಾಮನ್‌ ಫೋರ್‌ ರಿಂಗ್‌, ಗ್ರಾಸ್‌ ಯೆಲ್ಲೊ, ರೋಸ್‌, ಸೈಲರ್‌, ಡೆನೈಡ್‌ ಎಗ್‌ ಫ್ಲಾಯ್‌, ಲೆಮನ್‌ ಫ್ಯಾನ್ಸಿ, ಮಂಕೀ ಫಜಲ್‌, ಸೈಕೀ, ಫ್ಲೆ$çನ್‌ ಕ್ಯುಪಿಡ್‌ ಮೊದಲಾದ‌ ಪಾತರಗಿತ್ತಿಗಳನ್ನು ಮಕ್ಕಳು ವೀಕ್ಷಣೆ ಮಾಡಿದರು.

 ಪಾತರಗಿತ್ತಿಗಳಿಂದ ಪಾಠ
ನಮ್ಮ ಮನೆಯ ಹಿಂದೆ ಮುಂದೆ ಅತ್ತಿಂದಿತ್ತ ಹಾರಾಡುತ್ತಿರುವ ಚಿಟ್ಟೆ ಲೋಕದ ಅಧ್ಯಯನಕ್ಕೆ ಮಕ್ಕಳು ಆಸಕ್ತಿ ತೋರಿಸುತ್ತಾರೆ. ಆದರೆ ಅದಕ್ಕಾಗಿ ವಿಶೇಷ ತರಗತಿಗಳು, ತರಬೇತಿ ಶಿಬಿರಗಳು ಅವರಿಗೆ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಇಂತಹ ಪರಿಸರ ಶಿಬಿರಗಳಿಂದ ಮಕ್ಕಳಲ್ಲಿ ವೈಜ್ಞಾನಿಕ ನಿರೀಕ್ಷಣೆಯ ಮನೋಭಾವಗಳನ್ನು ಹೆಚ್ಚಿಸಬಹುದು. ಹಲವು ಸಂಶೋಧನೆಗಳತ್ತವೂ ಮಕ್ಕಳನ್ನು ಕೊಂಡೊಯ್ಯಲು ಇದು ಸಹಕರಿಸುವುದು.
– ಮುರಳಿ ಮಾಧವ ಪೆಲ್ತಾಜೆ, ಚಿಟ್ಟೆ ಸಂಶೋಧಕರು, ಪೆರ್ಲ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.