ಭೀಕರ ಸಿಡಿಲು ಸಹಿತ ಬೇಸಗೆ ಮಳೆ: ಇಲಾಖೆ ಎಚ್ಚರಿಕೆ
Team Udayavani, Apr 26, 2019, 6:35 AM IST
ಕಾಸರಗೋಡು: ರಾಜ್ಯದಲ್ಲಿ ಬೇಸಗೆ ಮಳೆ ಯಾವುದೇ ದಿನ ಅಪರಾಹ್ನ 2ರಿಂದ ರಾತ್ರಿ 8 ಗಂಟೆಯ ಅವಧಿಯಲ್ಲಿ ಬಿರುಸಿನ ಗುಡುಗು-ಸಿಡಿಲು ಸಹಿತ ಬರುವ ಸಾಧ್ಯತೆಯಿದೆ ಎಂದು ರಾಜ್ಯ ದುರಂತ ನಿವಾರಣೆ ಪ್ರಾಧಿಕಾರ ಎಚ್ಚರಿಕೆ ನೀಡಿದೆ. ಅತೀವ ಜಾಗ್ರತೆ ಪಾಲಿಸುವಂತೆ ಸಲಹೆ ಮಾಡಲಾಗಿದೆ.
ಈ ಅವಧಿಯಲ್ಲಿ ತೆರೆದ ಪ್ರದೇಶಗಳಲ್ಲಿ ಮಕ್ಕಳು ಸ್ನಾನ ಮಾಡುವುದು ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಮಳೆ ನೋಡಲು, ಒಗೆದು ಒಣಗಿಸಲು ಹಾಕಲಾದ ಬಟ್ಟೆ ತೆರವುಗೊಳಿಸುವ ಇತ್ಯಾದಿ ಕಾರಣಕ್ಕೆ ಈ ಅವಧಿಯಲ್ಲಿ ಮನೆ ತಾರಸಿಗೆ ತೆರಳಕೂಡದು. ಮಳೆ ತಾಗುವ ಪ್ರದೇಶದಲ್ಲಿರುವ ಸಾಕು ಪ್ರಾಣಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಬೇಕು.
ಈ ಅವಧಿಯಲ್ಲಿ ಯಾರಾದರೂ ವಾಹನಗಳಲ್ಲಿದ್ದರೆ, ಅಲ್ಲೇ ವಾಹನನಿಲ್ಲಿಸಿ ಲೋಹ ಇತ್ಯಾದಿಗಳು ಸ್ಪರ್ಶವಾಗದಂತೆ ಭದ್ರವಾಗಿ ಕುಳಿತುಕೊಳ್ಳಬೇಕು. ಜಲಾಶಯಗಳಲ್ಲಿ ಇಳಿಯಬಾರದು. ಗಾಳಿಪಟ ಹಾರಿಸಬಾರದು. ಬಾಗಿ ಕುಳಿತುಕೊಳ್ಳಬಾರದು. ತಾರಸಿಯಲ್ಲಿ ವಿದ್ಯುತ್ ನಿಯಂತ್ರಕ ಸ್ಥಾಪಿಸಬೇಕು. ಮನೆಯೊಳಗೆ ವಿದ್ಯುತ್ ಸರ್ಜ್ ಪ್ರೊಟೆಕ್ಟರ್ ಸ್ಥಾಪಿಸಬೇಕು.
ಸಂಭವಿಸಬಹುದಾದ ಆರೋಗ್ಯ ಸಮಸ್ಯೆಗಳು
ಬಿರುಸಿನ ಸಿಡಿಲು ವ್ಯಕ್ತಿಗೆ ಬಡಿದರೆ ಜೀವಹಾನಿ ಯಾ ದೃಷ್ಟಿ ಕಳೆದು ಕೊಳ್ಳಬಹುದು. ಹೃದಯಾಘಾತ ಸಂಭವಿಸಬಹುದು. ಈ ಬಗ್ಗೆ ಎಚ್ಚರಿಕೆ ಬೇಕು. ಸಿಡಿಲ ಆಘಾತ ಸಂಭವಿಸಿದಾಗ ವ್ಯಕ್ತಿಯ ಶರೀರದಲ್ಲಿ ವಿದ್ಯುತ್ ಪ್ರವಾಹ ಇರುವುದಿಲ್ಲ. ಆದಕಾರಣ ಪ್ರಥಮ ಶುಶ್ರೂಷೆ ನಡೆಸುವಲ್ಲಿ ಉಳಿದವರು ಹಿಂದೆ-ಮುಂದೆ ನೋಡಬಾರದು. ಸಿಡಿಲು ಬಡಿತ ಸಂಭವಿಸಿ 30 ಸೆಕೆಂಡ್ ವರೆಗೆ ವ್ಯಕ್ತಿಯನ್ನು ಉಳಿಸಿಕೊಳ್ಳಲು ಉತ್ತಮ ಅವಕಾಶಗಳಿವೆ. ತತ್ಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ