ತಲಪಾಡಿ ಕಾಸರಗೋಡು ಹೆದ್ದಾರಿ: ಮತ್ತೆ ಹೊಂಡ


Team Udayavani, Nov 3, 2019, 3:47 AM IST

NN-21

ಕುಂಬಳೆ: ತಲಪಾಡಿ ಕಾಸರಗೋಡು ಹೆದ್ದಾರಿ ಮತ್ತೆ ಹೊಂಡಗುಂಡಿಗಳಿಂದ ತುಂಬಿದೆ. ಪ್ರತಿವರ್ಷದಂತೆ ಮುಂಗಾರಿನಿಂದ ಹಿಂಗಾರು ಮಳೆಯ ತನಕ ರಸ್ತೆಪೂರ್ತಿ ಹೊಂಡ ಸೃಷ್ಟಿಯಾಗಿ ರಸ್ತೆಯಲ್ಲಿ ವಾಹನಗಳು ಜೋಕಾಲಿಯಂತೆ ಸಂಚರಿಸಬೇಕಾಯಿತು.

ಬಳಿಕ ಮಳೆ ಅಲ್ಪ ವಿರಳವಾದ ರಸ್ತೆಗೆ ಒಂದಿಷ್ಟು ಪ್ಯಾಚ್‌ ವರ್ಕ್‌ ಮೂಲಕ ತೇಪೆ ಹಚ್ಚಲಾಯಿತು.ದೊಡ್ಡ ಹೊಂಡಗಳಿಗೆ ಅಲ್ಪ ಡಾಮರು ಸುರಿದು ಇದರ ಮೇಲೆ ಜಲ್ಲಿ ಹಾಕಿ ರೋಲರ್‌ ಚಲಿಸಿ ಹೊಂಡ ಮುಚ್ಚಲಾಯಿತು. ಇದು ಮತ್ತೆ ಮಳೆ ಸುರಿದಾಗ ಎದ್ದು ಹಿಂದಿನಂತೆ ಹೊಂಡವಾಗಿ ಪರಿಣಮಿಸಿದೆ. ಲಕ್ಷಗಟ್ಟಲೆ ವ್ಯಯಿಸಿದ ರಸ್ತೆ ದುರಸ್ತಿ ಕಾಮಗಾರಿ ವ್ಯರ್ಥವಾಗಿದೆ. ಹೊಂಡಗಳ ಪ್ಯಾಚ್‌ ವರ್ಕಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಯಿಂದ ಸುಮಾರು 14 ಲಕ್ಷ ವೆಚ್ಚವಾಗಿದೆಯಂತೆ. ಆದರೆ ಇಷ್ಟೊಂದು ಮೊತ್ತದ ಕಾಮಗಾರಿ ನಡೆದಿಲ್ಲವೆಂಬ ಆರೋಪ ಸಾರ್ವಜನಿಕರದು.ಇದೀಗ ಕಾಸರಗೋಡಿನಿಂದ ಕುಂಬಳೆ ತನಕ ಬಳಿಕ ಕುಂಬಳೆ ಆರಿಕ್ಕಾಡಿ ಮೊಗ್ರಾಲ್‌,ಉಪ್ಪಳದಿಂದ ಮಂಜೇಶ್ವರ ತಲಪ್ಪಾಡಿ ತನಕ ರಸ್ತೆಯಲ್ಲಿ ಭಾರೀ ಹೊಂಡಗಳು ಸೃಷ್ಟಿಯಾಗಿದೆ.ಕೊಪ್ಪರ ಬಜಾರ್‌ ಎಂಬಲ್ಲಿ ದೊಡ್ಡ ಹೊಂಡದಿಂದ ರಸ್ತೆ ಅಪಘಾತವಾಗದಂತೆ ವಾಹನಗಳಿಗೆ ಎಚ್ಚರಿಕೆಗಾಗಿ ಸ್ಥಳೀಯರು ಬಾಳೆ ಇನ್ನಿತರ ಸಸಿಗಳನ್ನು ನೆಟ್ಟಿರುವರು.

ರಸ್ತೆ ಹೊಂಡಗಳಿಂದ ವಾಹನಗಳಿಗೆ ರಸ್ತೆಯಲ್ಲಿ ಸುಗಮವಾಗಿ ಸಂಚರಿಸಲು ತೊಡಕಾಗಿದೆ.ಇದರಿಂದ ರಸ್ತೆಯಲ್ಲಿ ಗಂಟೆಗಟ್ಟಲೆ ವಾಹನಗಳ ಸಾಲು ಉದ್ದಕ್ಕೆ ಬೆಳೆಯುವುದು.ಖಾಸಗೀ ಬಸ್‌ಗಳಿಗೆ ಸಮಯ ಪಾಲಿಸಲಾಗದೆ ಅರ್ಧದಿಂದ ಸಂಚಾರ ಮೊಟಕುಗೊಳಿಸಬೇಕಾಗಿದೆ. ಪ್ರಯಾಣಿಕರಿಂದ ಬೈಗಳನ್ನು ಕೇಳಬೇಕಾಗಿದೆ.ಇಂದನ ಹೆಚ್ಚು ವ್ಯಯವಾಗುವುದಲ್ಲದೆ ವಾಹನಗಳ ಬಿಡಿಭಾಗ ಕೆಟ್ಟು ಹೋಗುವುದು.

ಹೆದ್ದಾರಿ ರಿಪೇರಿಗೆ 204 ಕೋಟಿ ನಿಧಿ : ಹೆದ್ದಾರಿ ದುರಸ್ತಿಗೆ ಕೇಂದ್ರ ಸರಕಾರ 204 ಕೋಟಿ ನಿಧಿ ಮಂಜೂರುಗೊಂಡಿರುವು ದಾಗಿ ಕೇರಳ ರಾಜ್ಯ ಸರಕಾರದ ಲೋಕೋ ಪಯೋಗಿ ಇಲಾಖೆಯ ಸಚಿವ ಜಿ. ಸುಧಾಕರನ್‌ ಹೇಳಿದ್ದಾರೆ.ಕಾಮಗಾರಿಗೆ ಮಳೆ ಅಡ್ಡಿಯಾಗಿದ್ದು ಮಳೆ ದೂರವಾದ ಬಳಿಕ ಕಾಮಗಾರಿ ನಡೆಸುವುದಾಗಿ ಸಚಿವರು ತಿಳಿಸಿದ್ದಾರೆ. ಆದರೆ ಇಷ್ಟೊಂದು ನಿಧಿಯಲ್ಲಿ ರಸ್ತೆಗೆ ಎಷ್ಟು ನಿಧಿ ವಿನಿಯೋಗವಾಗಲಿದೆ? ಯಾರ್ಯಾರ ಜೇಬಿಗೆ ಎಷ್ಟು ಸೇರಲಿದೆ ಎಂಬುದಾಗಿ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

ಚತುಷ್ಪಥ ರಸ್ತೆ ವಿಳಂಬ
ಕರ್ನಾಟಕ ಗಡಿಭಾಗವಾದ ತಲಪ್ಪಾಡಿ ತನಕ ಚತುಷ್ಪಥ ರಸ್ತೆ 60 ಮೀಟರ್‌ ಅಗಲದಲ್ಲಿ ಪೂರ್ಣಗೊಂಡಿದೆ.ಆದರೆ ಬಳಿಕ ಕೇರಳದಲ್ಲಿ 40 ಮೀಟರ್‌ ಅಗಲದ ಚತುಷ್ಪಥ ರಸ್ತೆಗೆ ಇನ್ನೂ ಕಾಲಕೂಡಿ ಬಂದಿಲ್ಲ. ರಾಜ್ಯವನ್ನಾಳುವ ಎಡಬಲ ಉಭಯ ರಂಗಗಳ ಆಡಳಿತೆಯ ಸರಕಾರದ ನಿಧಾನವೇ ಪ್ರಧಾನ ನಿಲುವು ಯೋಜನೆಗೆ ತಡೆಯಾಗಿದೆ.ರಾಜ್ಯ ಸರಕಾರ ಸ್ಥಳ ಸ್ವಾಧೀನ ಪಡಿಸಿ ಕೊಡದ ಕಾರಣ ಪ್ರಥಮ ಹಂತದ ಟೆಂಡರ್‌ ರದ್ದಾಗಿದೆ.ಸಂತ್ರಸ್ತರಿಗೆ ಸ್ಥಳಕ್ಕೆ ನಿಗದಿ ಪಡಿಸಿದ ದುಪ್ಪಟ್ಟು ,ತ್ರಿಪ್ಪಟ್ಟು ಪರಿಹಾರ ಧನ ಮಂಜೂರುಗೊಳಿಸಿದರೂ ಆಮೆ ನಡಿಗೆಯಲ್ಲಿ ಸ್ಥಳ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.ಆದುದರಿಂದ ಹೆದ್ದಾರಿ ಚತುಷ್ಪಥ ಕಾಮಗಾರಿ ಇನ್ನಷ್ಟು ವಿಳಂಬವಾಗಲಿದೆ.

ಎಂದೋ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದಲ್ಲಿ ರಸ್ತೆ ಹೊಂಡದ ಸಮಸ್ಯೆಗೆ ಪರಿಹಾರವಾಗುತ್ತಿತ್ತು.ಆದರೆ ರಾಜ್ಯ ಸರಕಾರ ಈ ಯೋಜನೆ ನಿರ್ವಹಣೆಗೆ ಕೇಂದ್ರ ಸರಕಾರದತ್ತ ಆರೋಪ ಹೊರಿಸುತ್ತಿದೆ.ಆದುದರಿಂದ ಯೋಜನೆ ಇನ್ನಷ್ಟು ವಿಳಂಬವಾಗಲಿದೆ.

ಕ್ರಮ ಕೈಗೊಳ್ಳಲಾಗುವುದು
ಹೆದ್ದಾರಿ ಹೊಂಡಗಳನ್ನು ತಕ್ಷಣ ಮುಚ್ಚಲು ರಾಜ್ಯ ಸರಕಾರದ ಲೊಕೋಪಯೋಗಿ ಇಲಾಖೆಯ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಇಲ್ಲದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಎ.ಎಂ. ಸಿದ್ಧಿಖ್‌ ರಹ್ಮಾನ್‌, ಅಧ್ಯಕ್ಷರು ಮೊಗ್ರಾಲ್‌  ದೇಶೀಯವೇದಿ ಸಂಘಟನೆ

ತಕ್ಷಣ ದುರಸ್ತಿ
ಹೆದ್ದಾರಿ ಕಾಮಗಾರಿ ದುರವಸ್ಥೆ ಕುರಿತು ಕೇರಳದ ರಾಜ್ಯಪಾಲರಿಗೆ ತಾನು ದೂರು ನೀಡಿದುದಕ್ಕೆ ರಾಜ್ಯಪಾಲರು ಹೆದ್ದಾರಿ ದುರಸ್ತಿ ಕಾಮಗಾರಿ ತಕ್ಷಣ ನಡೆಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗೆ ಆದೇಶ ನೀಡಿರುವ ಲಿಖೀತ ಉತ್ತರವನ್ನು ತನಗೆ ಕಳುಹಿಸಿರುವರು.
– ಶ್ರೀನಂದ ಕುಮಾರ್‌, ಸಾಮಾಜಿಕ ಕಾರ್ಯಕರ್ತ ಹೊಸಂಗಡಿ

-  ಅಚ್ಯುತ ಚೇವಾರ್‌

ಟಾಪ್ ನ್ಯೂಸ್

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.