ನಗರದ ಮಧ್ಯದಲ್ಲೊಂದು ರೋಗ ಉತ್ಪಾದನಾ ಕೇಂದ್ರ


Team Udayavani, Jul 5, 2019, 5:36 AM IST

roga-utpadana

ವಿದ್ಯಾನಗರ: ಮಳೆಗಾಲ ಪ್ರಾರಂಭವಾದಂತೆ ಎಲ್ಲೆಡೆ ಸ್ವಚ್ಛತಾ ಕಾರ್ಯ, ಮಾಹಿತಿ ಶಿಬಿರಗಳನ್ನು ಆಯೋಜಿಸಿ ಜನತೆಗೆ ಜಾಗೃತಿ ಮೂಡಿಸುವ ಮತ್ತು ಮಳೆಗಾಲದ ರೋಗಗಳು ಬಾರದಂತೆ ತಡೆಯಲು ನೆರವಾಗುವ ಸಲಹೆ-ಸೂಚನೆಗಳನ್ನು ಕೊಡುವತ್ತ ಪಂಚಾಯತ್‌ಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೆಚ್ಚು ಪ್ರಾಮುಖ್ಯವನ್ನು ನೀಡುತ್ತಿದ್ದರೆ ಕಾಸರಗೋಡು ನಗರಸಭೆ ನಗರ ಮಧ್ಯದಲ್ಲೇ ರೋಗ ಉತ್ಪಾದನಾ ಕೇಂದ್ರ ಸೃಷ್ಟಿಯಾಗಿದ್ದರೂ ಮೌನವಾಗಿರುವುದು ಜನರ ಆತಂಕ ಮತ್ತು ಸಿಟ್ಟಿಗೆ ಕಾರಣವಾಗಿದೆ. ನಗರದ ಮೀನು ಮಾರುಕಟ್ಟೆ ಇಂದು ಮೀನಿನೊಂದಿಗೆ ಹತ್ತು ಹಲವು ಕಾಯಿಲೆಗಳನ್ನು ಉಚಿತವಾಗಿ ನೀಡುವ ತಾಣವಾಗಿ ಬದಲಾಗಿದೆ. ಡೆಂಗ್ಯೂ, ಚಿಕೂನ್‌ಗುನ್ಯ ಮುಂತಾದ ಭೀಕರ ರೋಗಗಳು ಮನುಷ್ಯನ ಜೀವಕ್ಕೆ ಸವಾಲಾಗಿರುವ ಸಮಯದಲ್ಲಿ ಸೊಳ್ಳೆಗಳ ಉತ್ಪಾದನಾ ಕೇಂದ್ರವಾದ ಕಾಸರಗೋಡು ಮೀನು ಮಾರುಕಟ್ಟೆ ನೂರಾರು ಸಮಸ್ಯೆಗಳ ತಾಣವಾಗಿದೆ.

ಎಲ್ಲೆಲ್ಲೂ ಮೀನು ತೊಳೆದ‌ ನೀರು

ಮಾರುಕಟ್ಟೆಗೆ ಮೀನು ಹೇರಿ ಬರುವ ಲಾರಿಗಳಿಂದ ಹರಿದುಬರುವ ನೀರು ಮಾರುಕಟ್ಟೆಯಲ್ಲಿ ಹರಿದುಹೋಗುತ್ತದೆ. ಮಾರುಕಟ್ಟೆ ಎತ್ತರದ ಪ್ರದೇಶದಲ್ಲಿದ್ದು ಕೆಳ ಭಾಗದ ರಸ್ತೆಯಲ್ಲಿ ಸಾಗಿ ತಳಭಾಗದಲ್ಲಿ ಸಂಗ್ರಹವಾಗುತ್ತದೆ. ಮಾರಾಟಗಾರರು ಇದರ ನಡುವೆ ಕುಳಿತು ಮೀನು ಮಾರಾಟ ಮಾಡುತ್ತಾರೆ. ಮೀನು ಕೊಳ್ಳಲು ಹೋಗುವವರಿಗೂ ಮೀನಿನ ನೀರು ಉಂಟು ಮಾಡುವ ಸಮಸ್ಯೆ ಅಷ್ಟಿಷ್ಟಲ್ಲ.

ಶೇಖರಣೆಗೊಂಡ ನೀರಿನ ಬಗ್ಗೆ ವ್ಯಾಪಾರಿಗಳು ಮಾತೆತ್ತಿದ್ದರೆ ಎದ್ದು ಹೋಗುವಂತೆ ಹೇಳುವ ದಲ್ಲಾಳಿಗಳ ದರ್ಪದ ಮಾತಿಗೆ ಹೆದರಿ ಅವರೂ ಸುಮ್ಮನಾಗುತ್ತಾರೆ. ಮಾರುಕಟ್ಟೆಯ ಬಳಿ ನೀರು ಹಾದುಹೋಗುವಂತೆ ಚರಂಡಿ ವ್ಯವಸ್ಥೆ ಮಾಡಲಾಗಿದೆ ಯಾದರೂ ಪ್ಲಾಸ್ಟಿಕ್‌ ಮತ್ತಿತರ ತ್ಯಾಜ್ಯಗಳಿಂದ ಈ ಚರಂಡಿಗಳು ಮುಚ್ಚಿ ಹೋಗಿ ಕೊಳಚೆ ನೀರು ಮಾರ್ಗದಲ್ಲಿಯೇ ತುಂಬಿ ತಗ್ಗು ಪ್ರದೇಶಗಳಲ್ಲಿ, ಹಾದಿಬದಿಯಲ್ಲಿ ಸಂಗ್ರಹವಾಗುತ್ತದೆ. ಈ ನೀರಿನ ತುಂಬಾ ಕಿ‌್ರಮಿಕೀಟಗಳ ನರ್ತನ ಸಾಮಾನ್ಯ ಜನರಲ್ಲಿ ಭಯ ಹುಟ್ಟಿಸುತ್ತದೆ.

ಮಾರ್ಗದಲ್ಲೇ ಮೀನು ಮಾರಾಟ

ವ್ಯವಸ್ಥಿತವಾದ ನಗರಸಭಾ ಮಾರುಕಟ್ಟೆ ಇದ್ದರೂ ಗ್ರಾಹಕರು ಮಾರುಕಟ್ಟೆಯೊಳಗೆ ಬರಲು ಹಿಂದೇಟು ಹಾಕುತ್ತಾರೆ. ಮೀನು ಮಾರಾಟವಾಗುವುದಿಲ್ಲ ಎಂಬ ಆರೋಪ ಹೊರಿಸಿ ಮಾರ್ಗದ ಬದಿಯಲ್ಲೇ ಮೀನು ಮಾರಾಟ ಮಾಡಲಾಗುತ್ತದೆ. ಈ ಮಾರಾಟಗಾರರ ಸುತ್ತಮುತ್ತೆಲ್ಲ ಮೀನಿನ ನೀರು ಹಾಗೂ ಪ್ಲಾಸ್ಟಿಕ್‌ ಪೊಟ್ಟಣಗಳು ಕೆಟ್ಟ ವಾಸನೆಗೆ ಕಾರಣವಾಗಿವೆ. ಮಾತ್ರವಲ್ಲದೆ ಪಕ್ಕದಲ್ಲಿರುವ ಶೌಚಾಲಯದ ಸುತ್ತ ಮಾಲಿನ್ಯ ರಾಶಿ ಹಾಕಲಾಗಿರುವುದರಿಂದ ಸೊಳ್ಳೆಗಳು ತುಂಬಿ ಶೌಚಾಲಯವನ್ನು ಉಪಯೋಗಿಸಲಾಗದ ಸ್ಥಿತಿ ಉಂಟಾಗಿದೆ.

ತುಕ್ಕುಹಿಡಿದ ನೀರು ಶುದ್ಧೀಕರಣ ಟ್ಯಾಂಕ್‌
ವರ್ಷಗಳೇ ಕಳೆದರೂ ಲಕ್ಷಾಂತರ ರೂಪಾಯಿ ವ್ಯಯಿಸಿ ಮಾರುಕಟ್ಟೆಯ ಮೀನಿನ ನೀರನ್ನು ಶುದ್ಧೀಕರಿಸಿ ಹೊರಬಿಡುವ ಪದ್ಧತಿಗಾಗಿ ಸ್ಥಾಪಿಸಿದ ಟ್ಯಾಂಕ್‌ಗಳ ಉದ್ಘಾಟನೆ ನಡೆಯದಿರುವುದು ಮಾತ್ರವಲ್ಲ ಟ್ಯಾಂಕ್‌ಗಳು ಹಾಗೂ ಇತರ ಉಪಕರಣಗಳು ತುಕ್ಕು ಹಿಡಿದು ನಶಿಸಿಹೋಗಿವೆ. ಕಳೆದ ನಗರಸಭೆ ಆಡಳಿತ ಸಮಿತಿಯ ಆಡಳಿತಾವಧಿಯಲ್ಲಿ ಅಳವಡಿಸಿದ ಯೋಜನೆ ಇದಾಗಿತ್ತು. ಒಟ್ಟಿನಲ್ಲಿ ವ್ಯವಸ್ಥೆಗಳಿದ್ದರೂ ಉಪಯೋಗಶೂನ್ಯವಾಗಿರುವುದು ನಗರ ಸಭೆಯ ಅನಾಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ನಾಡಲ್ಲಿ ನಗರಸಭೆ ಇದೆಯೇ ಎನ್ನುವುದು ನಮ್ಮ ಸಂಶಯ. ನಮ್ಮ ಕಷ್ಟಗಳನ್ನು ಕೇಳುವವರೇ ಇಲ್ಲ. ಸೂಕ್ತ ಪರಿಹಾರಕ್ಕಾಗಿ ಯಾರ ಮುಂದೆಯೂ ಕೈಚಾಚಿ ಪ್ರಯೋಜನವಿಲ್ಲದಂತಾಗಿದೆ. ಭದ್ರತೆ ಇಲ್ಲದ ಬದುಕು ನಮ್ಮದು.
– ಮೀನು ಮಾರಾಟಗಾರರು

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.