ಸಾಧಕ ವಿದ್ಯಾರ್ಥಿಗಳ ಹುಡುಕಿ ಬಹುಮಾನ ಸಹಿತ ಹಾಸ್ಟೆಲ್ಗೆ ಆಗಮಿಸಿದ ಶಾಸಕ
Team Udayavani, May 30, 2019, 6:10 AM IST
ಕಾಸರಗೋಡು: ಸಾಧಕ ವಿದ್ಯಾರ್ಥಿಗಳಿಗಾಗಿ ಬಹುಮಾನಗಳ ಸಹಿತ ಶಾಸಕ ಎನ್.ಎ. ನೆಲ್ಲಿಕುನ್ನು ಹಾಸ್ಟೆಲ್ಗೆ ಆಗಮಿಸಿದುದು ಅಲ್ಲಿನ ಮಂದಿಗೆ ಏಕಕಾಲಕ್ಕೆ ಅಚ್ಚರಿ ಮತ್ತು ಸಂತಸ ನೀಡಿದೆ.
ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ಸ್ವಾಮ್ಯ ದಲ್ಲಿ ಕಾಸರಗೋಡು ಬ್ಲಾಕ್, ನಗರಸಭೆ ವ್ಯಾಪ್ತಿಯ ಮೂರು ಪ್ರೀಮೆಟ್ರಿಕ್ ಹಾಸ್ಟೆಲ್ಗಳಿಗೆ ಶಾಸಕ ಈ ರೀತಿ ಭೇಟಿ ಕೊಟ್ಟರು. ಇಲ್ಲಿನ ನಿವಾಸಿಗಳಾಗಿರುವ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಮಕ್ಕಳನ್ನು ಅಭಿನಂದಿಸುವ ಉದ್ದೇಶದಿಂದ ಬಹುಮಾನಗಳ ಸಹಿತ ಅವರು ಬಂದಿದ್ದರು.
ಕಾಸರಗೋಡು ಬ್ಲಾಕ್ ವ್ಯಾಪ್ತಿಯ ಬದಿಯಡ್ಕ ಹಾಸ್ಟೆಲ್ನಲ್ಲಿ ಕಲಿತ 4 ಮಂದಿ ವಿದ್ಯಾರ್ಥಿಗಳಿಗೆ, ಕಾಸರಗೋಡು ನಗರಸಭೆ ವ್ಯಾಪ್ತಿಯ ಹುಡುಗರ ಹಾಸ್ಟೆಲ್ನ 18 ವಿದ್ಯಾರ್ಥಿ ಗಳಿಗೆ ಅವರು ಬಹುಮಾನವಿತರಿಸಿ ಅಭಿನಂದಿಸಿದರು.
ಸಮಾಜದಲ್ಲಿ ಹಿಂದುಳಿದಿ ರುವ ಜನಾಂಗದ ಮಕ್ಕಳ ಭವಿತವ್ಯಕ್ಕೆ ಪ್ರೋತ್ಸಾಹ ನೀಡುತ್ತಿರುವ ಈ ಹಾಸ್ಟೆಲ್ಗಳ ಚಟುವಟಿಕೆ ಅಭಿನಂದನಾರ್ಹ ಎಂದವರು ಈ ವೇಳೆ ತಿಳಿಸಿದರು. ಎಸ್.ಸಿ.ಡಿ.ಒ. ಬಶೀರ್ ಪಿ.ಬಿ., ವಾರ್ಡನ್ಗಳಾದ ಟಿ.ಕುಂಞಿರಾಮನ್, ಸುಮ, ಮಧು, ಧನೇಶ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ