ಏತಡ್ಕ ಬಸ್ಗಳ ಸಂಚಾರ ಅರ್ಧದಲ್ಲೇ ಮೊಟಕು
Team Udayavani, Sep 18, 2019, 5:40 AM IST
ಬದಿಯಡ್ಕ: ರಸ್ತೆಯಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ಬದಿಯಡ್ಕದಿಂದ ಏತಡ್ಕಕ್ಕಿರುವ ಬಸ್ಗಳು ಅರ್ಧದಲ್ಲೇ ಸಂಚಾರ ಮೊಟಕುಗೊಳಿಸುತ್ತಿವೆ.
ಕಿನ್ನಿಂಗಾರ್ನಿಂದ ಒಂದೂವರೆ ಕಿಲೋ ಮೀ. ದೂರವಿರುವ ನೇರಪ್ಪಾಡಿಯವರೆಗೆ ಮಾತ್ರವೇ ಸಂಚಾರ ನಡೆಸುತ್ತಿವೆ. ನೇರಪ್ಪಾಡಿ ಹಾಗೂ ಕಿನ್ನಿಂಗಾರ್ ಮಧ್ಯೆ ಬೃಹತ್ ಹೊಂಡಗಳು ಸೃಷ್ಟಿಯಾಗಿರುವುದರಿಂದ ಬಸ್ ಚಲಾಯಿಸಲು ಸಾಧ್ಯವಿಲ್ಲವೆಂದು ನೌಕರರು ಹೇಳುತ್ತಿದ್ದಾರೆ.
ಈ ಹೊಂಡಗಳನ್ನು ತಾತ್ಕಾಲಿಕವಾಗಿಯಾದರೂ ಮುಚ್ಚಿದರೆ ಸರ್ವಿಸ್ ಮುಂದುವರಿಸಲು ಸಾಧ್ಯವಿತ್ತೆಂದು ಅವರು ಅಭಿಪ್ರಾಯ ಪಡುತ್ತಾರೆ. ಆದರೆ ಅಧಿಕಾರಿಗಳು ಇದುವರೆಗೂ ಇದಕ್ಕೆ ಸ್ಪಂದಿಸಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಬದಿಯಡ್ಕ-ಕಿನ್ನಿಂಗಾರು ರಸ್ತೆ ನವೀಕರಣಕ್ಕೆ 51 ಕೋ. ರೂ. ಎಸ್ಟಿಮೇಟ್ ಸಿದ್ಧವಾಗಿದ್ದರೂ ಟೆಂಡರ್ ಕ್ರಮಗಳು ಇದುವರೆಗೆ ಪೂರ್ತಿ ಯಾಗಿಲ್ಲ. ಕಿನ್ನಿಂಗಾರಿಗಿರುವ ಬಸ್ ಸಂಚಾರ ಅರ್ಧದಲ್ಲೇ ಮೊಟಕುಗೊಳ್ಳುತ್ತಿರುವುದು ಪ್ರಯಾಣಿಕರನ್ನು ಸಂಕಷ್ಟಕ್ಕೀಡು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ