ಓಣಂ ಮುನ್ನ ಎರಡು ಲಕ್ಷ  ಆದ್ಯತಾ ಪಡಿತರ ಚೀಟಿ ವಿತರಣೆ


Team Udayavani, Jul 11, 2018, 6:00 AM IST

c-26.jpg

ಕಾಸರಗೋಡು: ಸಾರ್ವಜನಿಕ ವಿತರಣಾ ಇಲಾಖೆಯು ಓಣಂ ಹಬ್ಬಕ್ಕಿಂತ ಮೊದಲು ಕೇರಳದಲ್ಲಿ ಎರಡು ಲಕ್ಷದಷ್ಟು ಆದ್ಯತಾ ರೇಶನ್‌ ಕಾರ್ಡ್‌ಗಳನ್ನು ವಿತರಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಯೋಜನೆಯ ಪ್ರಥಮ ಹಂತವಾಗಿ ಪ್ರತಿ ಯೊಂದು ತಾಲೂಕು ವ್ಯಾಪ್ತಿಯ 2,500ರಷ್ಟು ಅನರ್ಹವಾದ ಆದ್ಯತಾ, ಎಎವೈ ಪಡಿತರ ಕಾರ್ಡ್‌ಗಳನ್ನು  ಓಣಂನ ಮೊದಲು ಪತ್ತೆ ಹಚ್ಚಿ  ಇವುಗಳನ್ನು  ಆದ್ಯತೇತರ ವಿಭಾಗಕ್ಕೊಳಪಡಿಸಲಾಗುವುದು.

ಆ. 15ರೊಳಗೆ ಅಂತಿಮ ಪಟ್ಟಿ
ಈ ನಿಟ್ಟಿನಲ್ಲಿ  ಪಡಿತರ ವ್ಯಾಪಾರಿಗಳ ವಿಶೇಷ ಸಭೆಯನ್ನು ನಡೆಸಿ ಆಗಸ್ಟ್‌  15ರ ಮುಂಚಿತವಾಗಿ ಅಂತಿಮ ವರದಿ ಸಲ್ಲಿಸಲು ಸಿವಿಲ್‌ ಸಪ್ಲೈಸ್‌ ನಿರ್ದೇಶಕರು ನಿರ್ದೇಶಿಸಿ ದ್ದಾರೆ. ಪಡಿತರ ಆದ್ಯತಾ ಪಟ್ಟಿಯಲ್ಲಿ  ಇನ್ನೂ  ಅನರ್ಹರು ಇದ್ದಾರೆ ಎಂದು ಸಾರ್ವಜನಿಕ ವಿತರಣಾ ಇಲಾಖೆಯು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಮತ್ತೆ ಪಟ್ಟಿಯ ಶುದ್ಧೀಕರಣಕ್ಕೆ ಆದೇಶ ಹೊರಡಿಸಲಾಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ನಿಯಮ 2013ರ ಪ್ರಕಾರ ಈಗಾಗಲೇ ಆದ್ಯತಾ ಪಟ್ಟಿಯನ್ನು  ರಚಿಸಿ ಅನರ್ಹರನ್ನು  ತೆಗೆಯ ಲಾಗುವುದು. ಇನ್ನುಳಿದ ಅನರ್ಹರನ್ನು  ಹೊರತುಪಡಿಸಿ ಅರ್ಹರನ್ನು  ಒಳಪಡಿಸಲು ಆದೇಶ ನೀಡಲಾಗಿದೆ. ವಾಹನಗಳು ಇರುವುದಾಗಿ ಮೋಟಾರು ವಾಹನ ಇಲಾಖೆಯಿಂದ ಲಭಿಸಿದ ಮಾಹಿತಿಗಳು ಮತ್ತು  ಸ್ಥಳೀಯಾಡಳಿತ ಇಲಾಖೆ ನೀಡಿದ ಮಾಹಿತಿಗಳನ್ನು  ಇದಕ್ಕಾಗಿ ತಾಲೂಕು ಸಪ್ಲೈ ಅಧಿಕಾರಿಗಳಿಗೆ ನೀಡಲಾಗಿದೆಯಾದರೂ ಇದುವರೆಗೆ ಆ ಕುರಿತು ತಪಾಸಣೆ ನಡೆಸಿ ವರದಿ ಸಲ್ಲಿಸಲು ಸಾಧ್ಯವಾಗಿಲ್ಲ.

2014ರ ಬಳಿಕ ಇಲಾಖೆಯ ಗಮನಕ್ಕೆ ಬಂದ ಮಾಹಿತಿಯಂತೆ ಮೃತಪಟ್ಟವರ ಹೆಸರನ್ನು ಕೂಡ ರೇಶನ್‌ ಕಾರ್ಡ್‌ಗಳಿಂದ ಹೊರತುಪಡಿಸಲಾಗಿಲ್ಲ. ಈ ಕಾರಣಗಳಿಂದ ನೂರಾರು ಮಂದಿ ಅನರ್ಹರು ಪ್ರತಿ ಯೊಂದು ಪ್ರದೇಶದಲ್ಲಿ  ಆದ್ಯತಾ ಪಟ್ಟಿಯಲ್ಲಿ  ಇರುವುದಾಗಿ ಸಾರ್ವಜನಿಕ ವಿತರಣಾ ಇಲಾಖೆಯು ಮಾಹಿತಿ ನೀಡಿದೆ. ರೇಶನ್‌ ಅಂಗಡಿ ಮಾಲಕರು ಮನಸ್ಸು  ಮಾಡಿದರೆ ಈ ಎಲ್ಲ  ಅನರ್ಹರನ್ನು  ಆದ್ಯತಾ ಪಟ್ಟಿಯಿಂದ ಹೊರತುಪಡಿಸಲು ಸಾಧ್ಯವಿದೆ.

ಎಲ್ಲ  ಕಾರ್ಡ್‌ ಮಾಲಕರ ಕುಟುಂಬಗಳ ಸ್ಥಿತಿಗತಿ ಮಾಹಿತಿಯನ್ನು ಒಂದು ಹಂತದವರೆಗಾದರೂ ಆಯಾ ರೇಶನ್‌ ಅಂಗಡಿ ಮಾಲಕರಿಗೆ ನೇರವಾಗಿ ತಿಳಿಯ ಬಹುದಾಗಿರುವುದರಿಂದ ಸಂಪೂರ್ಣ ಅನರ್ಹರನ್ನು  ಹೊರತುಪಡಿಸಲು ಸಾಧ್ಯವಿದೆ ಎಂದು ಅಧಿಕಾರಿಗಳು ಹೇಳುತ್ತಿ ದ್ದಾರೆ. ಆದುದರಿಂದ ಈ ವಿಷಯದಲ್ಲಿ  ರೇಶನ್‌ ಅಂಗಡಿ ಮಾಲಕರ ಸಭೆ ನಡೆಸಲು ಆದೇಶ ಹೊರಡಿಸಲಾಗಿದೆ. ಇನ್ನು  ಪಡಿತರ ಕಾರ್ಡ್‌ ಮಾಲಕರು ಯಾವ ಪಡಿತರ ಅಂಗಡಿಯಿಂದ ಬೇಕಾದರೂ ಪಡಿತರ ವಸ್ತು  ಖರೀದಿಸಬಹುದಾಗಿದೆ.

ಯಾವುದೇ ಪಡಿತರ ಅಂಗಡಿಯಿಂದ ಖರೀದಿಗೆ ಅವಕಾಶ
ರೇಶನ್‌ ಖರೀದಿಸಲು ಪೋರ್ಟಬಿಲಿಟಿ ವ್ಯವಸ್ಥೆ  ಇರುವುದರಿಂದ ಯಾವುದೇ ಪಡಿತರ ಅಂಗಡಿಯಿಂದ ಸಾಮಗ್ರಿ ಖರೀದಿಸಬಹುದು. ಇದಕ್ಕೆ ರಾಜ್ಯ ಸರಕಾರದ ಅಂಗೀಕಾರದೊಂದಿಗೆ ಕಾರ್ಡ್‌ ಮಾಲಕರಿಗೆ ತಿಳಿವಳಿಕೆ ಮೂಡಿಸಲು ಸಾರ್ವಜನಿಕ ವಿತರಣಾ ಇಲಾಖೆಯು ತೀರ್ಮಾನಿಸಿದೆ. ಈ ವ್ಯವಸ್ಥೆ  ಜಾರಿಗೆ ಬಂದರೆ ವಾಸಸ್ಥಳ ಬದಲಾಯಿಸುವುದಕ್ಕೆ ಅನುಸರಿಸಿ ಪಡಿತರ ಕಾರ್ಡ್‌ ಬದಲಾಯಿಸಬೇಕಾಗಿಲ್ಲ. ಒಂದು ಪಡಿತರ ಅಂಗಡಿ ತೆರೆಯದಿದ್ದರೂ ಇತರ ಪಡಿತರ ಅಂಗಡಿಗಳಿಂದ ಸಾಮಗ್ರಿಗಳನ್ನು  ಖರೀದಿಸುವ ವ್ಯವಸ್ಥೆ  ಕೇರಳದಲ್ಲಿ  ಜಾರಿಗೆ ಬಂದಿದೆ.

ಅನರ್ಹರು ಆದ್ಯತಾ ಪಟ್ಟಿಯಿಂದ ಹೊರಗೆ  
ಕಾಸರಗೋಡು ಜಿಲ್ಲೆಯಲ್ಲೂ  ಅನರ್ಹರನ್ನು ರೇಶನ್‌ ಆದ್ಯತಾ ಪಟ್ಟಿಯಿಂದ ಹೊರಹಾಕುವ ಕಾರ್ಯ ನಡೆಯುತ್ತಿದೆ. ಈ ನಿಟ್ಟಿನಲ್ಲಿ  ಪ್ರಾಥಮಿಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದಕ್ಕಾಗಿ ಜಿಲ್ಲೆಯ ನಾಲ್ಕು ತಾಲೂಕು ವ್ಯಾಪ್ತಿಯ ಸಪ್ಲೈ ಆಫೀಸ್‌ಗಳಿಗೆ ನಿರ್ದೇಶನ ಕಳುಹಿಸಲಾಗಿದೆ. ಇದರಿಂದ ಅರ್ಹರು ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದು, ಅನರ್ಹರು ಹೊರತಾಗುವರು. ಅಲ್ಲದೆ ಕೇಂದ್ರ ಸರಕಾರದ ವ್ಯವಸ್ಥೆಯಂತೆ ರಾಜ್ಯದ ಎಲ್ಲ  ಅರ್ಹರಿಗೂ ಕ್ರಮಬದ್ಧವಾಗಿ ಪಡಿತರ ಸಾಮಗ್ರಿಗಳು ಕಾಲ ಕಾಲಕ್ಕೆ ಲಭಿಸಬಹುದು.

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.