ಮಾಯವಾಗುತ್ತಿವೆ‌ ಕುಡಿಯುವ ನೀರಿನ ಬಾವಿಗಳು !


Team Udayavani, Apr 13, 2018, 9:25 AM IST

Baavi-12-4.jpg

ಕುಂಬಳೆ : ಹಿಂದಿನ ಕಾಲದಲ್ಲಿ ಕುಡಿಯುವ ನೀರಿಗಾಗಿ ಮನೆಗೊಂದು ಬಾವಿ ಅನಿವಾರ್ಯವಾಗಿತ್ತು.ಕೃಷಿಗೆ ತೋಟಗಳಲ್ಲಿ ಕೊಳಗಳಿದ್ದುವು. ಇದರಲ್ಲಿ ಧಾರಾಳ ನೀರಾಶ್ರಯವಿತ್ತು. ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಕೆಲವರಿಗೆ ಪ್ರಕೃತಿದತ್ತವಾಗಿ ಹರಿದು ಬರುವ ಸುರಂಗವಿತ್ತು. ಇದರಿಂದ ಶುದ್ಧ ಜಲಧಾರೆಯಾಗುತ್ತಿತ್ತು. ಕಾಲ ಕ್ರಮೇಣ ಮಳೆ ವಿರಳವಾಗಿ ಹವಾಮಾನದ ವೈಪರೀತ್ಯದಿಂದ ನೀರಿನ ಕೊರತೆ ಆರಂಭವಾಯಿತು.

ಜನಸಂಖ್ಯೆ ಏರಿಕೆಯಿಂದ ನೀರಿನ ಬಳಕೆ ಅಧಿಕವಾಗಿ ಜಲಮೂಲಗಳಲ್ಲಿ ನೀರಿನ ಕೊರತೆ ತಲೆದೋರಲು ಪ್ರಾರಂಭವಾಯಿತು. ಬಾವಿಗಳಲ್ಲಿ ನೀರು ತಳಸೇರಿ ಬಾವಿ ಬತ್ತಲು ತೊಡಗಿತು. ಬಾವಿಗೆ ಪರ್ಯಾಯವಾಗಿ ಕೊಳವೆ ಬಾವಿ ತೋಡಲು ಆರಂಭಗೊಂಡಿತು. ಇದೀಗ ಎಲ್ಲೆಡೆ ಬೋರ್‌ವೆಲ್‌ಗ‌ಳ ಕೊರೆತದ ಭೋರ್ಗರೆಯುವ ಶಬ್ದವನ್ನು ರಾತ್ರಿ ಹಗಲೆನ್ನದೆ ಎಲ್ಲೆಲ್ಲೂ ಕೇಳಬಹುದು.ರಾತ್ರಿ ಬೆಳಗಾಗುವುದರೊಳಗೆ ಅದೆಷೋr ಕೊಳವೆ ಬಾವಿಗಳು ನಿರ್ಮಾಣಗೊಳ್ಳುತ್ತಿವೆ. ಇದರಿಂದಾಗಿ ನೀರಿನ ಮಟ್ಟ ವರ್ಷದಿಂದ ವರ್ಷಕ್ಕೆ ಆಳಕ್ಕೆ ಇಳಿಯುತ್ತಿದೆ. ನೀರಿಲ್ಲದೆ ಹೆಚ್ಚಿನ ಬರಿದಾದ ಬಾವಿಗಳೆಲ್ಲವೂ ಅನಾಥ ವಾಗಿವೆ. ಇದರಲ್ಲಿ ಕೆಲವು ಬಾವಿಗಳು ಮನೆ, ಕಟ್ಟಡ ಕಟ್ಟುವಾಗ ಮಣ್ಣು ತುಂಬಿಸಿ ಮುಚ್ಚಿದರೆ, ಇನ್ನು ಕೆಲವು ಬಾವಿಗಳನ್ನು ಮನೆಯ ಶೌಚಾಲಯದ ಗುಂಡಿಗಳನ್ನಾಗಿಸ‌ಲಾಗಿದೆ. ಇನ್ನು ಕೆಲವನ್ನು ಶಾಶ್ವತವಾಗಿ ಮುಚ್ಚಲಾಗಿದೆ. ಸಾರ್ವಜನಿಕರ ಬಳಕೆಗಾಗಿ ಸರಕಾರದಿಂದ ತೋಡಿದ ಬಾವಿಗಳು ಮಾಲಿನ್ಯ ತುಂಬುವ ಹೊಂಡಗಳಾಗಿವೆ. ಪೇಟೆ ಪಟ್ಟಣ ಮತ್ತು ರಸ್ತೆ ಪಕ್ಕಲ್ಲಿರುವ ಬಾವಿಗಳು ಹತ್ತಿರದ ಅಂಗಡಿ ಮುಂಗಟ್ಟುಗಳಿಗೆ ಮತ್ತು ಮನೆಯವರಿಗೆ ತ್ಯಾಜ್ಯ ಸುರಿಯುವ ಗುಂಡಿಗಳಾಗಿವೆ. ಅಲ್ಲಲ್ಲಿ ಕೊಳವೆ ಬಾವಿ ನಿರ್ಮಾಣವಾಗುತ್ತಿದ್ದು ನೀರಿನ ಮಟ್ಟ ಪಾತಾಳಕ್ಕೆ ಇಳಿಯುವುದರಿಂದ ಬಾವಿಗಳ ನೀರು ಬತ್ತಿಹೋಗಿ ಹೆಚ್ಚಿನ ಬಾವಿಗಳ ಬಳಕೆ ಇಲ್ಲವಾಗಿದೆ. 

ಬಾವಿಗಳು ದುರ್ಬಳಕೆಯಾಗುತ್ತಿವೆೆ.

ಪಾಳು ಬಾವಿಗಳಿಗೆ ಮಳೆ ನೀರು ಬೀಳುವುದರಿಂದ ಬಾವಿಯಲ್ಲಿ ನೀರು ಶೇಖರಣೆಯಾಗುವುದು.ಮತ್ತು ಮಳೆಗಾಲದ ಹರಿಯುವ ನೀರನ್ನು ಬಾವಿಗೆ ಹರಿಯ ಬಿಡುವುದರಿಂದ ನೀರನ್ನು ಭೂಮಿಗೆ ಇಂಗಿಸ ಬಹುದಾಗಿದೆ. ಆದರೆ ಇದರತ್ತ ಸಾರ್ವಜನಿಕರು ಮತ್ತು ಸರಕಾರ ಹೆಚ್ಚಿನ ಗಮನ ಹರಿಸಿಲ್ಲವೆಂಬ ಆರೋಪ ಕೇಳಿ ಬರುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ನೀರಿನ ಸಮಸ್ಯೆ ಜಟಿಲವಾಗಿ ಮುಂದಿನ ದಿನಗಳಲ್ಲಿ ಬಾವಿಗಳೇ ಇಲ್ಲವಾಗುವುದರಲ್ಲಿ ಸಂಶಯವಿಲ್ಲ. ಸಂಬಂಧಪಟ್ಟವರು ಇದರತ್ತ ಗಮನ ಹರಿಸಿ ಇದ್ದ ಬಾವಿಗಳನ್ನು ಉಳಿಸಬೇಕಾಗಿದೆ. ಬಾವಿಗಳ ರಕ್ಷಣೆಗೆ ಗಂಭೀರ ಚಿಂತನೆ ನಡೆಯಬೇಕಿದೆ. ನೀರಿಂಗಿಸಲು ಇಂಗು ಗುಂಡಿಗಳ ನಿರ್ಮಾಣಕ್ಕೆ ಸರಕಾರದಿಂದ ಆರ್ಥಿಕ ನೆರವು ನೀಡಲಾಗುವುದು. ಆದರೆ ನಿರುಪಯುಕ್ತ, ಪಾಳುಬಿದ್ದಿರುವ ಬಾವಿಗಳ ಉಳಿವಿಗೆ ಯೋಜನೆ ಇಲ್ಲವಾಗಿದೆ. ಬಾವಿಗಳನ್ನು ಮುಚ್ಚುವವರ ವಿರುದ್ಧ ಯಾವುದೇ ಕಾನೂನಿನ ಬಿಗಿ ಕ್ರಮ ಇಲ್ಲದ ಕಾರಣ ಬಾವಿಗಳು ಮಾಯವಾಗುತ್ತಿವೆ.

— ಅಚ್ಯುತ ಚೇವಾರ್‌

ಟಾಪ್ ನ್ಯೂಸ್

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

10-sulya

ಚಾರಿತ್ರಿಕ ಪರಂಪರೆಗಳ ಸಂರಕ್ಷಣೆಗಾಗಿ ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ (ರಿ.) ಕಾರ್ಯಾರಂಭ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

Manjeshwar ವಿದ್ಯುತ್‌ ಆಘಾತ: ಯುವಕ ಸಾವು

Manjeshwar ವಿದ್ಯುತ್‌ ಆಘಾತ: ಯುವಕ ಸಾವು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.