ಗಮನ ಸೆಳೆದ ವಿಶ್ವ ದೃಷ್ಟಿ ದಿನಾಚರಣೆ
Team Udayavani, Oct 12, 2019, 5:56 AM IST
ಕಾಸರಗೋಡು: ವಿಶ್ವ ದೃಷ್ಟಿ ದಿನಾಚರಣೆ ಅಂಗವಾಗಿ ಜರಗಿದ ಕಾರ್ಯ ಕ್ರಮಗಳು ಗಮನ ಸೆಳೆಯಿತು.
ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಕೆ.ಕೆ. ಪುರಂ ಮದ್ರಸಾದಲ್ಲಿ ನಡೆದ ಸಮಾರಂಭಗಳು ಆಕರ್ಷಣೆ ಪಡೆದಿವೆ. ಜನಜಾಗೃತಿ, ದೃಷ್ಟಿ, ಸಿಹಿಮೂತ್ರರೋಗ ಇತ್ಯಾದಿಗಳ ತಪಾಸಣೆ ನಡೆದುವು. ಚೆಂಗಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಕ್ಕಳಿಗಾಗಿ ಕಣ್ಣುದಾನ ಸಂಬಂಧ ಘೋಷಣೆ ರಚನೆ ಸ್ಪರ್ಧೆ ಜರಗಿತು.
ಡಾ| ಮೊದೀನ್ ಜಾಸರ್ ಆಲಿ ದಿನಾ ಚರಣೆಯನ್ನು ಉದ್ಘಾಟಿಸಿದರು.
ಹೆಲ್ತ್ ಇನ್ಸ್ ಪೆಕ್ಟರ್ ಬಿ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಆಪ್ಟೋಮೆಟ್ರಿಸ್ಟ್ ಕೆ.ಎಸ್. ಶಶಿಕಲಾ ತರಗತಿ ನಡೆಸಿದರು. ಜ್ಯೂನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ಅಫೀಝ್ ಷಾಫಿ, ಜೆ.ಪಿ.ಎಚ್.ಎನ್. ಗಳಾದ ಪಿ.ಟಿ. ಜಲಜಾ, ಕೆ.ವಿ. ನಿಷಾ, ಎಸ್. ಆಶಾಮೋಹನ್, ಆಶಾ ಕಾರ್ಯಕರ್ತರಾದ ಸಿ.ವಿ. ಶ್ರೀಜಾ ಕುಮಾರಿ, ಕೆ.ಜಯ ಕುಮಾರಿ, ಪಿ. ರೋಹಿಣಿ, ಎಸ್. ಭವಾನಿ, ಕಬೀರ್ ಚೆರ್ಕಳಂ, ಸಿ.ಎಂ. ಅಬ್ದುಲ್ಲ ಕುಂಞಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
90 ದಿನದಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು