ಜ್ಯೋತಿ ಅವರ ಕೃತಿ ಮೈಸೂರಿನಲ್ಲಿ ಸಿಎಂ ಬಿಡುಗಡೆ

ಯಕ್ಷಗಾನ ಪ್ರಸಂಗವಾಯಿತು ಪ್ರಧಾನಿ ಜೀವನಗಾಥೆ!

Team Udayavani, Nov 29, 2019, 5:26 AM IST

28KSDE2

ಕಾಸರಗೋಡು: ಅತಿಮಾನುಷ ಸಾಧನೆಗೈದ ವೀರ ಸಾಹಸಿಗರ ಜೀವನಗಾಥೆಯನ್ನು ಆಧರಿಸಿದ ಪ್ರಸಂಗಗಳು ಯಕ್ಷಗಾನಕ್ಕೆ ಹೊಸತಲ್ಲ. ಆದರೆ ದೇಶದ ಪ್ರಧಾನಮಂತ್ರಿಯೊಬ್ಬರ ಬದುಕಿನ ಯಶೋಗಾಥೆ, ರಾಜಕೀಯ ಏಳಿಗೆಯ ಕಥೆ, ದೇಶದ ಅಭ್ಯುದಯದ ಹೆಜ್ಜೆಯ ಕಥೆ ಯಕ್ಷಗಾನಕ್ಕೆ ಇದೇ ಮೊದಲು. ಅದುವೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನುದ್ದೇಶಿಸಿದ “ನರೇಂದ್ರ ವಿಜಯ’. ಹೀಗೊಂದು ಪ್ರಸಂಗ ಹೆಣೆಯುವ ಕಥನ ಕೈಂಕರ್ಯ ಮುಗಿದು, ನೂತನ ಚರಿತ್ರೆಯ ಕೃತಿಯನ್ನು ಮೈಸೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಿಡುಗಡೆಗೊಳಿಸಿದರು.

ಉದಯೋನ್ಮುಖ ಮಹಿಳಾ ಯಕ್ಷಗಾನ ಕಲಾವಿದೆ ಜ್ಯೋತಿ ಶಾಸ್ತ್ರಿ ಅವರು ಹೆಣೆದಿರುವ ಪ್ರಧಾನಿ ನರೇಂದ್ರಮೋದಿಯವರ ಯಕ್ಷಗಾನೀಯ ಜೀವನಗಾಥೆಗೆ ಪ್ರಸಿದ್ಧ ಕಲಾವಿದ, ಪ್ರಸಂಗಕತೃ ಎಂ.ಕೆ.ರಮೇಶ ಆಚಾರ್ಯ ಪದ್ಯಗಳನ್ನು ಬರೆದಿದ್ದಾರೆ.

ಜಾಗತಿಕ ನೆಲೆಯಲ್ಲಿ ಭಾರತವನ್ನು ವಿಶ್ವರಾಷ್ಟ್ರಗಳ ಮುಂದೆ ಮುಂಪಕ್ತಿಯಲ್ಲಿ ನಿಲ್ಲುವಂತೆ ಮತ್ತು ಗೌರವಿಸುವಂತೆ ಮಾಡಿದ ಪ್ರಧಾನಿ ಮೋದಿಯವರ ಜೀವನದ ಸಂಕ್ಷಿಪ್ತ ಪೂರ್ವ ವೃತ್ತಾಂತ ಮತ್ತು ಗುಜರಾತಿನ ಮುಖ್ಯಮಂತ್ರಿಯಾಗಿ ಅಭಿವೃದ್ಧಿ ಪರ್ವವನ್ನು ದೇಶಕ್ಕೆ ಪರಿಚಯಿಸಿದ ಮೋದಿಯವರ ಯಶೋಗಾಥೆಯಲ್ಲಿ ಬಲಗೈಯ್ಯಂತೆ ನಿಂತ ಅಮಿತ್‌ ಶಾರ ಕುರಿತಾಗಿಯೂ ಪ್ರಸಂಗದಲ್ಲಿ ವಿಶೇಷ ಪಾತ್ರಚಿತ್ರಣಗಳಿವೆ.

ಒಟ್ಟಂದದಲ್ಲಿ ಮೋದಿ ವೈಭವೀಕರಣಕ್ಕಿಂತ ಮಿಗಿಲಾಗಿ ಯಕ್ಷಗಾನೀಯ ಆಶಯದಲ್ಲಿ ಎಲ್ಲಾ ರಸಗಳ ಆಧಾರದಲ್ಲಿ ವೈವಿಧ್ಯ ಪಾತ್ರಗಳು ಮತ್ತು ಮೋದಿ ಆಡಳಿತ ಬಂದ ಮೇಲೆ ದೇಶದಲ್ಲಿ ನಡೆದ ಪಲ್ಲಟಗಳು, ಕರೆನ್ಸಿ ಬದಲಾವಣೆ ಹಾಗೂ ಪರಿಣಾಮ, ಉಗ್ರರನ್ನು ಹೆಡೆಮುರಿಕಟ್ಟಿದ ದಿಟ್ಟತೆ ಸೇರಿದಂತೆ ವೈವಿಧ್ಯ ರಸಘಟ್ಟಗಳು ಬರುವಂತೆ ಕಥನ ಶೈಲಿಯಲ್ಲಿ ಹೆಣೆದ ಯಕ್ಷಗಾನ ಪ್ರಸಂಗವನ್ನು ಹಿಂದಿ ಭಾಷೆಗೂ ತರ್ಜುಮೆ ಮಾಡಲಾಗುತ್ತಿದೆ.

ಮುಂಬರುವ ದಿನಗಳಲ್ಲಿ ದೆಹಲಿಯಲ್ಲೂ ಪ್ರದರ್ಶನ ಏರ್ಪಡಿಸುವಂತೆ ಸಂಕಲ್ಪ ತೊಡಲಾಗಿದೆ.ಕರಾವಳಿಯಲ್ಲಿ ಜನರ ಮೇಲೆ ಯಕ್ಷಗಾನದಷ್ಟು ಪ್ರಭಾವ ಬೀರುವ ಕಲೆ ಮತ್ತೂಂದಿಲ್ಲ.

ಈ ದಿಶೆಯಲ್ಲಿ ಯಕ್ಷಗಾನದ ಮೂಲಕ ಭಾರತದ ಭವ್ಯ ನವೋತ್ಥಾನಕ್ಕೆ ಮುನ್ನುಡಿ ಬರೆದ ರಾಷ್ಟ್ರನಾಯಕರ ಕತೆಯನ್ನು ಹೇಳುತ್ತಾ, ದೇಶಭಕ್ತಿಯ ಸ್ಫೂರ್ತಿಗಾಥೆಗಳನ್ನು ತಿಳಿಸುತ್ತಾ ಹೊಸ ಪೀಳಿಗೆಯಲ್ಲಿ ಭಾರತದ ನವನಿರ್ಮಾಣದ ಪ್ರೇರಣೆ ಮೂಡಿಸುವುದಷ್ಟೇ ಈ ಪ್ರಸಂಗದ ಆಶಯ.

ಇದು ಎಲ್ಲಾ ಮೇಳಗಳಲ್ಲೂ, ಎಲ್ಲಾ ಹವ್ಯಾಸಿ ಸಂಘಸಂಸ್ಥೆಗಳಲ್ಲೂ ಪ್ರದರ್ಶನಗೊಳ್ಳಬೇಕು. ಕೇವಲ 11 ಕಥಾಪಾತ್ರಗಳಿರುವ, ಎರಡೂವರೆ ತಾಸಿನ ಕಥಾಹಂದರ ಇದಾಗಿದ್ದು, ಮೊದಲ ಪ್ರದರ್ಶನಕ್ಕೆ ಸ್ಥಳ ನಿರ್ಣಯವಾಗಿಲ್ಲ.
ಪ್ರಾಯೋಜಕತ್ವ ಒದಗಿಸಿದ್ದಲ್ಲಿ ಯಕ್ಷಗಾನೀಯ ವಾತಾವರಣ ಇದ್ದಡೆ ಪ್ರದರ್ಶನ ನೀಡಲು ತಂಡ ಸಜ್ಜಾಗಿದೆಯೆಂದು ಪ್ರಸಂಗಕರ್ತೆ, ಕಲಾವಿದೆ ಜ್ಯೋತಿ ಶಾಸ್ತ್ರಿ ತಿಳಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲಿನಲ್ಲಿ ನ.26ರಂದು ನಡೆದ ಕೃತಿ ಬಿಡುಗಡೆ ಸಮಾರಂಭದ‌ಲ್ಲಿ ಮುಖ್ಯಮಂತ್ರಿಯವರ ಜೊತೆ ಹುಣಸೂರು ಬಿಜೆಪಿ ಅಭ್ಯರ್ಥಿ ಅಡಗೂರು ವಿಶ್ವನಾಥ, ಶಾಸಕ ನಾಗೇಂದ್ರ, ಉದ್ಯಮಿ ಇವಾಂಕಾ ಗ್ರೂಪ್‌ ಆಫ್‌ ಡೆವಲಪರ್ ಎಂ.ಡಿ. ಗೋಪಾಲಕೃಷ್ಣ, ಪ್ರಸಂಗಕರ್ತೆ, ಕಲವಿದೆ ಜ್ಯೋತಿಶಾಸ್ತ್ರಿ ತೀರ್ಥಹಳ್ಳಿ ಉಪಸ್ಥಿತರಿದ್ದರು

ಟಾಪ್ ನ್ಯೂಸ್

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.