“ಯಕ್ಷಗಾನವನ್ನು ಖುಷಿ ಬಂದಂತೆ ಬದಲಾಯಿಸುವಂತಿಲ್ಲ’


Team Udayavani, Jun 30, 2017, 3:45 AM IST

yakshagana.jpg

ಕಾಸರಗೋಡು: ಯಕ್ಷಗಾನವನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವ ಪರಿಪಾಠ ಇತ್ತೀಚೆಗೆ ಹೆಚ್ಚಾಗಿದೆ. ಕಾಲಕ್ಕೆ ಹೊಂದಿಕೊಂಡು ಅನಿವಾರ್ಯ ಬದಲಾವಣೆಗಳನ್ನು ಮಾಡುವಾಗ ಈ ಕಲೆಯ ಮೂಲಸತ್ವಕ್ಕೆ ಚ್ಯುತಿಯಾಗಬಾರದು ಎಂದು ಹಿರಿಯ ವಿದ್ವಾಂಸ, ಯಕ್ಷಗಾನ ಹಿಮ್ಮೇಳ-ಮುಮ್ಮೇಳಗಳ ಅಧ್ಯಯನ ನಡೆಸಿದ ಸಂಶೋಧಕ ಡಾ|ರಾಘವನ್‌ ನಂಬಿಯಾರ್‌ ಅಭಿಪ್ರಾಯಪಟ್ಟರು.

ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ಒಂದು ತಿಂಗಳ ಯಕ್ಷಗಾನ ತರಬೇತಿ ಶಿಬಿರದ ಅಂಗವಾಗಿ ಆಯೋಜಿಸಿದ ಅಧ್ಯಯನ ಪ್ರವಾಸದ ಮಧ್ಯೆ  ಅವರು ಉಡುಪಿಯ ಯಾತ್ರಿ ನಿವಾಸ ಸಭಾಂಗಣದಲ್ಲಿ ನಡೆದ ವಿಶೇಷೋಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾವುದೇ ಒಂದು ರಂಗದಲ್ಲಿ ಲೋಕಧರ್ಮಿ ಹಾಗೂ ನಾಟ್ಯಧರ್ಮಿ ಎಂಬ ಧರ್ಮಗಳಿವೆ. ಯಕ್ಷಗಾನದಲ್ಲೂ ಇದನ್ನು ಕಾಣಬಹುದು. ಆಹಾರ್ಯ ಬಹಳ ಮುಖ್ಯವಾದುದು. ವೇಷ ವಿಸ್ತಾರವಾದಂತೆ  ನಡಿಗೆಯೂ ವಿಸ್ತಾರಗೊಂಡು ನಿಧಾನಗತಿಯನ್ನು  ಪಡೆಯಬೇಕು. ಆದು ದರಿಂದ ಪುಂಡುವೇಷಗಳ  ವೇಗ ಬಣ್ಣದ ವೇಷದಲ್ಲಿಲ್ಲ. ಬಣ್ಣಗಾರಿಕೆ ಮತ್ತು  ವೇಷಗಳ ಬಣ್ಣದ ಬಳಕೆಯಲ್ಲಿಯೂ  ಕಲಾವಿದ ತಿಳಿದಿರಬೇಕಾದ ಹಲವು ವಿಚಾರಗಳಿವೆ. ತನಗೆ ತೋಚಿದಂತೆ ಬಣ್ಣಗಾರಿಕೆಯನ್ನು  ಮಾಡಬಾರದು. ಬದಲಾವಣೆ ಅಥವಾ ಸ್ವಂತಿಕೆ ಅಳವಡಿಸುವುದಿದ್ದರೆ  ಅದಕ್ಕೆ ನಿರ್ದಿಷ್ಟವಾದ  ಚೌಕಟ್ಟು ಅಥವಾ ಮಾನದಂಡ ಇರಬೇಕು. ರಸನಿಷ್ಪತ್ತಿಯಲ್ಲೂ ಬಣ್ಣಕ್ಕೆ ಮಹತ್ವವಿದೆ. ಅದ್ಭುತ-ಹಳದಿ, ಹಾಸ್ಯ-ಬಿಳಿ, ಶೃಂಗಾರ-ಹಸುರು, ರೌದ್ರ-ಕೆಂಪು, ಭಯಾನಕ-ಕಪ್ಪು, ಕರುಣ-ತೌಡು, ವೀರ-ಬಂಗಾರ, ಬೀಭತ್ಸ-ನೀಲಿ ಈ ರೀತಿಯಲ್ಲಿ ವೇಷಧಾರಿ ಬಣ್ಣಗಳ ಬಳಕೆ ಮಾಡಬೇಕಾಗುತ್ತದೆ. ಬಣ್ಣದ ವೇಷ ಪದದ ನಿಷ್ಪತ್ತಿ ಮಲೆಯಾಳದ ವಣ್ಣಂ (ದಪ್ಪ) ಎಂಬರ್ಥದಲ್ಲಿ ಬಂದಿರಬೇಕು. ಹೊರತು ಅದು ಬಣ್ಣದಿಂದ ಕೂಡಿದ್ದು ಎಂಬರ್ಥವಿಲ್ಲ.

ಆಂಗಿಕವಾಗುವಾಗ ಹಾಡು ಬರಿಯ ಹಾಡಲ್ಲ. ಹಾಡಿನ ರೂಪದಲ್ಲಿ ಕಥೆಯನ್ನು ಹೇಳುವುದೇ ಮಹತ್ವ. ಪಾತ್ರದ ಘನತೆಗೆ ಹೊಂದಿಕೊಂಡು ನಡೆಯಲ್ಲಿ ವೇಗ ಮತ್ತು ನಿಧಾನವನ್ನು ಅನುಸರಿಸಬೇಕಾಗುತ್ತದೆ ಇಂತಹ ಕಡೆ ಕಲಾವಿದನಲ್ಲಿ ಕಲೆಯ ಬಗ್ಗೆ ಗೌರವ ಭಾವನೆ ಮತ್ತು  ಅದರ ಪ್ರತಿಯೊಂದು ಒಳನೋಟಗಳೊಳಗಿನ ಬಗ್ಗೆ ಎಚ್ಚರ ಇರಬೇಕಾಗುತ್ತದೆ ಎಂದು ಡಾ|ರಾಘವನ್‌ ನಂಬಿಯಾರ್‌ ಅಭಿಪ್ರಾಯಪಟ್ಟರು. 

ಶಿಬಿರಾರ್ಥಿಗಳು ಸಂವಾದದಲ್ಲಿ ಭಾಗವಹಿಸಿದ್ದರು. ಶಿಬಿರದ ಸಂಚಾಲಕ ಡಾ.ರತ್ನಾಕರ ಮಲ್ಲಮೂಲೆ ಸ್ವಾಗತಿಸಿದರು. ಶಿಬಿರಾರ್ಥಿ ಶ್ರದ್ಧಾ  ನಾಯರ್ಪಳ್ಳ ವಂದಿಸಿದರು.

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.