ಬಿಸಿಲಲ್ಲೂ ನರ್ತಿಸುವ ಹಳದಿ ಚೆಲುವೆ

ಕೇರಳದ ರಾಜ್ಯ ಪುಷ್ಪ ಈ ಸ್ವರ್ಣ ಹೂ

Team Udayavani, Apr 17, 2019, 6:30 AM IST

vishu-flower

ಬದಿಯಡ್ಕ : ಬಿಸಿಲಿನ ಝಳ ಜನರನ್ನು ಕಂಗೆಡಿಸಿ ಗಿಡ ಮರ ಬಳ್ಳಿಗಳು ಮುದುಡುವಂತೆ ಮಾಡಿದರೂ ಇದು ಯಾವುದರ ಪರಿವೇ ಇಲ್ಲದೇ ಬೀಸುವ ಗಾಳಿಯಲಿ ತೇಲಾಡುವ ಹಳದಿ ಹೂಗಳ ಗೊಂಚಲು. ಕಣ್ಣಿಗೂ ಮನಸಿಗೂ ತಂಪು ನೀಡುತ್ತದೆ. ವಿಷು ಹಬ್ಬವನ್ನು ಸಂಭ್ರಮದಿಂದ ಸ್ವಾಗತಿಸಲು ಸಿದ್ಧರಾಗಿ ಮರದ ತುಂಬಾ ಗೊಂಚಲು ಗೊಂಚಲಾಗಿ ಅರಳಿರುವ ಕೊನ್ನೆ ಹೂಗಳ ಅಕರ್ಷಣೆಗೆ ಸಾಟಿಯಿಲ್ಲ.

ಹೀಗೊಂದು ಕತೆ
ಐಶ್ವರ್ಯ ದೇವತೆಯಾಗಿ ಭೂಮಿಗಾಗಮಿಸಿದ ಲಕ್ಷ್ಮೀ ದೇವಿಯು ಬಿಸಿಲಿನ ಬೇಗೆ ತಡೆಯಲಾಗದೆ ವಿಶ್ರಾಂತಿಗಾಗಿ ಪಕ್ಕದಲ್ಲಿರುವ ಮರವನ್ನು ಆಶ್ರಯಿಸಿ ದಳಂತೆ. ತನಗೆ ನೆರಳಿತ್ತ ವೃಕ್ಷವನ್ನು ಪ್ರೀತಿಯಿಂದ ದೇವಿ ಸ್ಪರ್ಶಿಸಲು ತತ್‌ಕ್ಷಣ ಮರದ ತುಂಬಾ ಚಿನ್ನದ ಬಣ್ಣದ ಹೂಗಳು ಅರಳಿದುವಂತೆ. ಆದುದ ರಿಂದಲೇ ಬಿಸಿಲಲ್ಲೂ ಈ ಹೂವು ಸುಂದರವಾಗಿ ಶೋಭಿಸುವುದು ಮಾತ್ರವಲ್ಲದೆ ಐಶ್ವರ್ಯದ ದ್ಯೋತಕವೂ ಆಗಿರುವುದು ಎಂದು ಬಲ್ಲವರು ಹೇಳುತ್ತಾರೆ.

ರಾಷ್ಟ್ರ-ರಾಜ್ಯ ಪುಷ್ಪ.
ಕಕ್ಕೆ ಹೂವು, ಸ್ವರ್ಣ ಪುಷ್ಪ ಎಂದೆಲ್ಲ ಕರೆಯಲ್ಪಡುವ ಕೊನ್ನೆ ಹೂವು ಥೆ„ಲಾಂಡ್‌ ದೇಶದ ರಾಷ್ಟ್ರೀಯ ಪುಷ್ಪ ಹಾಗೂ ಕೇರಳದ ರಾಜ್ಯ ಪುಷ್ಪವಾಗಿದೆ. ವರ್ಷದ ಒಂದೆರಡು ತಿಂಗಳು ಮಾತ್ರ ಅರಳಿ ನಗುವ ಕೊನ್ನೆ ಶಿವನಿಗೆ ಪ್ರಿಯ.
ಚಿಗುರಿನೊಂದಿಗೆ ಜೋತಾಡುವ ಉದ್ದನೆಯ ಹಳದಿ ಬಣ್ಣದ ಹೂ ಗೊಂಚಲುಗಳು, ಸುಮಾರು ಎರಡು ಮೀಟರ್‌ ಉದ್ದದ ಕಂದುಬಣ್ಣದ ಕಾಯಿಗಳು ಈ ಮರದ ತುಂಬಾ ಜೋತಾಡುತ್ತಿರುತ್ತವೆೆ.

ವಿಷು ಕಣಿಯಲ್ಲಿ ಪ್ರಧಾನ ಆಕರ್ಷಣೆಯಾಗಿರುವ ಕೊನ್ನೆ ಹೂಗಳನ್ನು ವಿಷು ಹತ್ತಿರವಾಂತೆ ಮಾರುಕಟ್ಟೆಗಳಲ್ಲಿ ಮಾರಾಟಕ್ಕಿಡುತ್ತಾರೆ. ಪೇಟೆಯಲ್ಲಿ ವಾಸಿಸುವ ಜನರಿಗೆ ಈ ಹೂವು ಸುಲಭವಾಗಿ ಲಭ್ಯವಾಗದೇ ಇರುವುದರಿ ಂದ ಮಾರುಕಟ್ಟೆಯಲ್ಲಿ ಒಂದು ಗೊಂಚಲಿಗೆ 50-100 ರೂಗೆ ಮಾರಾಟವಾಗುತ್ತದೆ.
ಮೀನ ಮಾಸ ಅರ್ಧದಲ್ಲಿ ಸುವರ್ಣ ನಕ್ಷತ್ರಗಳಂತೆ ಮರದ ರೆಂಬೆಗಳನ್ನು ಅಲಂಕರಿಸುವ ಈ ಹೂಗಳು ಪ್ರತಿವರ್ಷ ಬೆಸಗೆಯಲ್ಲಿ ಅರಳುತ್ತವೆ.

ಕಾಲ ಬದಲಾದರೂ ಆಚರಣೆಗಳು ಮಹತ್ವ ಕಳೆದುಕೊಂಡರೂ, ವಿಷುವಿನ ಸಮƒದ್ಧಿಯ ಹಿರಿಮೆ ಗತಕಾಲ ಸೇರುವ ದಿನ ದೂರವಿಲ್ಲ ಎನ್ನುವಾಗಲೂ ಪ್ರಕೃತಿ ಮಾತ್ರ ಎಲ್ಲವನ್ನೂ ಒಡಲಲ್ಲಿ ಮುಚ್ಚಿಟ್ಟು ಕಾಲ ಕಾಲಕ್ಕೆ ತೆರೆದಿಡುವ, ಹಬ್ಬ ಹರಿದಿನಗಳನ್ನು ನೆನಪಿಸುವ ಕಾರ್ಯ ಮಾಡುತ್ತಲೇ ಇದೆ.

ನಮ್ಮ ವಿಶಿಷ್ಟವಾದ ಸಂಪದ್ಭರಿತವಾದ ಆಚರಣೆಯಲ್ಲಿ ಕೊನ್ನೆ ಹೂವಿಗೆ ಪ್ರತ್ಯೇಕ ಸ್ಥಾನವಿದೆ.

ಹೊಸ ವರ್ಷದ ಆದಿಯಲಿ ಪ್ರಕೃತಿಯ ಮಡಿಲಲ್ಲಿ ಶೋಭಿಸುವ ಲಕ್ಷ್ಮಿಯ ಕರ ಸ್ಪರ್ಶದಿಂದ ಅರಳಿದ ಹೂಗಳಿಗೆ ಪವಿತ್ರ, ಪೂಜನೀಯ ಸ್ಥಾನವನ್ನೂ ನೀಡಲಾಗಿದೆ.

ಸಮೃದ್ಧಿಯ ಸಂಕೇತವಾದ ಸ್ವರ್ಣ ಪುಷ್ಪ ಅಥವಾ ಕೊನ್ನೆ ಹೂವನ್ನು ನೀಡಿ ವಿವಿಧ ಪಕ್ಷಗಳ ಅಭ್ಯರ್ಥಿಗಳನ್ನು ಸ್ವಾಗತಿಸುವ ಮೂಲಕ ಜನರ ಪ್ರೀತಿ, ಗೌರವ ಹಾಗೂ ಮುಂದಿನ ಚುನಾವಣೆಯಲ್ಲಿ ವಿಜಯ ಮಾಲೆ ಧರಿಸಲು ಇದೊಂದು ಮುನ್ನುಡಿಯಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ.

ಔಷಧೀಯ ಸಸ್ಯ
ಕೊನ್ನೆ ಮರದ ಹೂ ಮತ್ತು ಕಾಯಿ ಎರಡೂ ಔಷಧೀಯ ಗುಣ ಹೊಂದಿದ್ದು ವಾತ ಸಂಬಂಧಿ ರೋಗಗಳಿಗೆ ಹೆಚ್ಚಾಗಿ ಬಳಕೆಯಾಗುತ್ತದೆ. ಮರದ ತೊಗಟೆಯನ್ನು ಚರ್ಮ ಹದಮಾಡಲು ಉಪಯೋಗಿಸಲಾಗುತ್ತದೆ.

  • ಅಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.