ಹಕ್ಕಿಗಳಿಗೊಂದು ಬೆಚ್ಚನೆಯ ಕೃತಕ ಗೂಡು: ಮನೆಮ ನೆಗೆ ವಿತರಣೆ
ಮಂಗಳೂರು ಯುವಕನ ಪಕ್ಷಿ ಪ್ರೇಮ
Team Udayavani, Jun 27, 2019, 5:07 AM IST
ಮಹಾನಗರ: ಗುಬ್ಬಚ್ಚಿ ಸೇರಿದಂತೆ ಅಳಿವಿನಂಚಿನಲ್ಲಿರುವ ಪಕ್ಷಿಗಳನ್ನು ಉಳಿಸಬೇಕು ಎಂಬ ಉದ್ದೇಶದಿಂದ ನಗರದ ಪ್ರಾಣಿ ಸಂರಕ್ಷಕ ತೌಸಿಫ್ ಅಹ್ಮದ್ ಅವರು ಈಗ ಸುತ್ತಮುತ್ತಲಿನ ಪರಿಸರದಲ್ಲಿ ಪಕ್ಷಿಗಳಿಗೆ ಗೂಡುಗಳನ್ನು ಇಡುವ ಚಿಂತನೆ ಮಾಡಿದ್ದಾರೆ.
ಮಂಗಳೂರು ದಿನದಿಂದ ದಿನಕ್ಕೆ ಬೆಳೆ ಯುತ್ತಿದ್ದು, ಅಭಿವೃದ್ಧಿಯ ದೃಷ್ಟಿಯಿಂದ ಮರಗಳು ನಾಶವಾಗುತ್ತಿವೆ. ಇದರಿಂದ ಪಕ್ಷಿಗಳಿಗೆ ಗೂಡುಕಟ್ಟಲು ಸಮಸ್ಯೆ ಯಾಗುತ್ತಿವೆೆ. ಇದೇ ಕಾರಣಕ್ಕೆ ಪಕ್ಷಿಗಳ ಸಂತತಿ ಉಳಿಸಲು ಪಿವಿಸಿ ಪೈಪ್ ತುಂಡು ಮಾಡಿ ಅದರಲ್ಲಿ ತೂತು ಮಾಡುವ ಮುಖೇನ ಪಕ್ಷಿಗಳಿಗೆ ಗೂಡು ತಯಾರು ಮಾಡಲು ಮುಂದಾಗಿದ್ದಾರೆ. ಈ ಕೆಲಸ ಈಗಾಗಲೇ ನಡೆಯುತ್ತಿದ್ದು, ಮಳೆಗಾಲ ಪೂರ್ಣಗೊಂಡ ಬಳಿಕ ನಗರದ ವಿವಿಧ ಮನೆಗಳಿಗೆ ತೆರಳಿ ಹಕ್ಕಿಗಳು ವಾಸಿಸಲು ಗೂಡು ವಿತರಿಸುವ ಕಾರ್ಯಕ್ಕೆ ತೌಸಿಫ್ ಅವರು ಮುಂದಾಗಲಿದ್ದಾರೆ.
ಈ ಗೂಡು ನಿರ್ಮಾಣಕ್ಕೆ ಹೆಚ್ಚು ಖರ್ಚಾಗುತ್ತಿಲ್ಲ. ಸುಮಾರು 5 ಇಂಚು ಅಗಲದ, 8 ಫೀಟ್ನಂತೆ ಪೈಪ್ ತುಂಡು ಮಾಡಿ, ಪೈಪ್ಗೆ ತೂತುಗಳನ್ನು ಮಾಡ ಲಾಗುತ್ತದೆ. ಇವುಗಳನ್ನು ಮನೆಯ ಹೊರಗಡೆ, ಕಾರು ಪಾರ್ಕಿಂಗ್, ಬಾಲ್ಕನಿ, ಮರಗಳಿರುವ ಪ್ರದೇಶದಲ್ಲಿ ಅಲ್ಲದೆ, ಮರಗಳ ಮೇಲೆಯೂ ಇಡಬಹುದಾಗಿದೆ. ಈ ಪೈಪ್ನೊಳಗೆ ದಿನ ಕಳೆದಂತೆ ಗುಬ್ಬಚ್ಚಿ ಸೇರಿದಂತೆ ಇತರ ಪಕ್ಷಿಗಳು ಗೂಡು ಕಟ್ಟಲು ಪ್ರಾರಂಭಿಸುತ್ತವೆ.
ತೌಸಿಫ್ ಹೇಳುವ ಪ್ರಕಾರ ‘ಈ ಕಲ್ಪನೆಯನ್ನು ನನ್ನ ಸ್ನೇಹಿತನ ಮನೆಯಲ್ಲಿ ಗಮನಿಸಿದ್ದು, ಅಲ್ಲಿ ಕೂಡ ಇದೇ ಮಾದರಿ ಯನ್ನು ಅಳವಡಿಸಿದ್ದಾರೆ.
ಈಗ ಗುಬ್ಬಚ್ಚಿ ಸೇರಿದಂತೆ ಬುಲ್ ಬುಲ್ ಪಕ್ಷಿಗಳು ಕೂಡ ಈ ಗೂಡಿನಲ್ಲಿ ಬಂದು ಕುಳಿತುಕೊಳ್ಳುತ್ತವೆ. ಈ ಕಲ್ಪನೆಯಲ್ಲಿ ಮನೆಯಲ್ಲಿಯೇ ಧ್ವನಿವರ್ಧಕ ಪೆಟ್ಟಿಗೆ, ದೊಡ್ಡದಾದ ಬಾಕ್ಸ್ಗಳಲ್ಲಿಯೂ ಗೂಡು ಮಾಡಬಹುದು ಪಕ್ಷಿಗಳು ಬಂದು ಗೂಡು ಕಟ್ಟುತ್ತದೆ’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ
Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!
ಅಧಿಕಾರಕ್ಕಾಗಿ ಪಿಎಫ್ಐಯ ರಾಜಕೀಯ ಮುಖವಾದ ಎಸ್ಡಿಪಿಐ ಜತೆ ಕಾಂಗ್ರೆಸ್ ಹೊಂದಾಣಿಕೆ: ನಳಿನ್
Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ
Captain Brijesh Chowta ಚುನಾವಣ ವೆಚ್ಚಕ್ಕೆ ಪಿಂಚಣಿ ದುಡ್ಡು ದೇಣಿಗೆ
MUST WATCH
ಹೊಸ ಸೇರ್ಪಡೆ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!