ಏರ್ ಇಂಡಿಯಾಕ್ಕೆ ಆರು ತಾಸು ಕಾದು ವಾಪಸಾದ ಪ್ರಯಾಣಿಕರು!
ಮಂಗಳೂರು-ಮುಂಬಯಿ ವಿಮಾನ ರದ್ದು
Team Udayavani, Apr 3, 2019, 12:28 PM IST
ಮಂಗಳೂರು: ಮಂಗಳೂರಿನಿಂದ ಮುಂಬಯಿಗೆ ಸಂಚರಿಸಬೇಕಾಗಿದ್ದ ಏರ್ ಇಂಡಿಯಾದ ವಿಮಾನವು ತಾಂತ್ರಿಕ ಕಾರಣಕ್ಕೆ ರದ್ದುಗೊಂಡ ಪರಿಣಾಮ, ಪ್ರಯಾಣಿಕರು ಸುಮಾರು ಆರು ತಾಸು ನಿಲ್ದಾಣದಲ್ಲಿಯೇ ಕಾದು ಕುಳಿತು ಅನಂತರ ಪ್ರಯಾಣ ಸಾಧ್ಯವಾಗದೆ ಹೊಟೇಲ್ಗೆಮರಳಿದ ಘಟನೆ ಮಂಗಳವಾರ ನಡೆದಿದೆ.
ಈ ವಿಮಾನವು ಮಂಗಳವಾರ ಮಧ್ಯಾಹ್ನ 12.40ಕ್ಕೆ ಮುಂಬಯಿಗೆ ಪ್ರಯಾಣಿಸಬೇಕಾಗಿತ್ತು. ಆದರೆ ವಿಮಾನ ದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಾರಾಟವನ್ನು ಮುಂದೂಡಲಾಗಿತ್ತು. ಆದರೆ, ವಿಮಾನವು ವಿಳಂಬವಾಗಿರುವ ಬಗ್ಗೆ ಪ್ರಯಾಣಿಕರಿಗೆ ಸರಿಯಾದ ಮಾಹಿತಿ ನೀಡಿರಲಿಲ್ಲ. ಇದರಿಂದ 100ಕ್ಕೂ ಅಧಿಕ ಪ್ರಯಾಣಿಕರು ತೊಂದರೆ ಅನುಭವಿಸಿದರು. ಅವರಲ್ಲಿ ಕೆಲವರು ಮುಂಬಯಿಯಿಂದ ನೇರವಾಗಿ ಬೇರೆ ದೇಶಗಳಿಗೆ ಪ್ರಯಾಣಿಸಬೇಕಾದ ಪ್ರಯಾಣಿಕರು ಕೂಡ ಇದ್ದರು. ಇದೀಗ ವಿಮಾನ ರದ್ದಾದ ಕಾರಣ ಅವರಿಗೆ ನೇರ ಸಂಪರ್ಕದ ವಿಮಾನವೂ ಕೈತಪ್ಪಿ ಹೋಗಿದೆ.
ಈ ನಡುವೆ, ಮಧ್ಯಾಹ್ನದ ವೇಳೆಗೆ ಬದಲಿ ವ್ಯವಸ್ಥೆ ಮಾಡುವುದಾಗಿ ಏರ್ ಇಂಡಿಯಾದವರು ಭರವಸೆ ನೀಡಿದ್ದರು. ಆದರೆ, ಸಂಜೆ 6 ಗಂಟೆ ಆದರೂ ಮುಂಬಯಿಗೆ ಬದಲಿ ವಿಮಾನದ ವ್ಯವಸ್ಥೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಆರು ತಾಸು ತೊಂದರೆ ಅನುಭವಿಸಿದರು ಅಂತಿಮವಾಗಿ ಏರ್ ಇಂಡಿಯಾವು ದಿನದ ಮಟ್ಟಿಗೆ ಪ್ರಯಾಣವನ್ನೇ ರದ್ದುಗೊಳಿಸಿತು. ಹೀಗಾಗಿ ಎಲ್ಲ ಪ್ರಯಾಣಿಕರಿಗೆ ನಗರದ ಖಾಸಗಿ ಹೊಟೇಲ್ನಲ್ಲಿ ರೂಂ ಮಾಡಿ ವಾಸ್ತವ್ಯದ ವ್ಯವಸ್ಥೆಯನ್ನು ಏರ್ ಇಂಡಿಯಾ ಸಂಸ್ಥೆ ಮಾಡಿದೆ.
ಈ ಪ್ರಯಾಣಿಕರಿಗೆ ಬುಧವಾರ ಬೆಳಗ್ಗೆ 6 ಗಂಟೆಗೆ ಮುಂಬಯಿ ಪ್ರಯಾಣಕ್ಕೆ ವಿಮಾನದ ವ್ಯವಸ್ಥೆ ಕಲ್ಪಿಸು ವುದಾಗಿ ಏರ್ ಇಂಡಿಯಾ ಭರವಸೆ ನೀಡಿದೆೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ
Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!
ಅಧಿಕಾರಕ್ಕಾಗಿ ಪಿಎಫ್ಐಯ ರಾಜಕೀಯ ಮುಖವಾದ ಎಸ್ಡಿಪಿಐ ಜತೆ ಕಾಂಗ್ರೆಸ್ ಹೊಂದಾಣಿಕೆ: ನಳಿನ್
Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ
Captain Brijesh Chowta ಚುನಾವಣ ವೆಚ್ಚಕ್ಕೆ ಪಿಂಚಣಿ ದುಡ್ಡು ದೇಣಿಗೆ
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ