ಉಕ್ಕಿ ಹರಿದ ಶಾಂಭವಿ ನದಿ: 12 ಕುಟುಂಬಗಳ ಸ್ಥಳಾಂತರ
Team Udayavani, Aug 10, 2019, 4:44 PM IST
ಸುರತ್ಕಲ್: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಶಾಂಭವಿ ನದಿ ಉಕ್ಕಿ ಹರಿಯುತ್ತಿದ್ದು, ಸಂಕಷ್ಟದಲ್ಲಿದ್ದ ಕುಟುಂಬಗಳನ್ನು ರಕ್ಷಿಸಲಾಗಿದೆ.
ಇಲ್ಲಿನ ಸೂರಿಂಜೆಯಲ್ಲಿ ಶಾಂಭವಿ ನದಿಯ ಪ್ರವಾಹದಿಂದ 12 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಇವರನ್ನು ದೋಣಿಯ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಪಂಜಿಮೊಗರುವಿನಲ್ಲಿಯೂ ನೆರೆಗೆ ಸಿಲುಕಿ ಹಾಕಿಕೊಂಡಿದ್ದ ಜನರನ್ನು ದೋಣಿ ಮೂಲಕ ರಕ್ಷಣೆ ಮಾಡಲಾಯಿತು.