ಮಂಗಳೂರು ದಕ್ಕೆಯಲ್ಲಿ ಅವಘಡ ; ಬೋಟುಗಳು ಅಗ್ನಿಗಾಹುತಿ
Team Udayavani, Aug 2, 2019, 10:02 AM IST
ಮಂಗಳೂರು: ರಜೆ ಬಳಿಕ ಸಮುದ್ರಕ್ಕೆ ಇಳಿಯಲು ಸಿದ್ಧತೆ ನಡೆಸುತ್ತಿದ್ದ ಮಂಗಳೂರಿನ 3 ಹೊಸ ಬೋಟುಗಳಿಗೆ ಗುರುವಾರ ಬೆಂಕಿ ತಗುಲಿ ಸುಮಾರು 1 ಕೋ.ರೂ. ನಷ್ಟ ಸಂಭವಿಸಿದೆ.
ಮೀನುಗಾರಿಕಾ ಋತು ಆರಂಭಗೊಂಡಿದ್ದು, ದಕ್ಕೆಯಿಂದ ಬೋಟು ಗಳು ಸಮುದ್ರಕ್ಕೆ ಇಳಿಯ ಲಾರಂಭಿಸಿವೆ. ಇದೇ ವೇಳೆ ದಕ್ಕೆಯ ಮೆಟ್ರೋ ಬಳಿಯ ಎಂಜಿನಿಯರ್ ಯಾರ್ಡ್ ನಲ್ಲಿ ಕೆಲವು ಹೊಸ ಬೋಟುಗಳು ಸಮುದ್ರಕ್ಕೆ ತೆರಳಲು ಸಿದ್ಧವಾಗುತ್ತಿವೆ. ಹೊಸ ಬೋಟುಗಳ ಫೈಬರ್ ಕೆಲಸ ಸೇರಿದಂತೆ ಕೊನೆಯ ಹಂತದ ಸಿದ್ಧತೆ ನಡೆಯುತ್ತಿತ್ತು. ಗುರುವಾರ ಸಂಜೆ ಕಾಮಗಾರಿ ನಡೆಸುತ್ತಿದ್ದ ವೇಳೆ ಒಂದು ಬೋಟ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ತತ್ಕ್ಷಣವೇ ಬೆಂಕಿ ಇನ್ನೆರಡು ಹೊಸ ಬೋಟುಗಳಿಗೂ ವ್ಯಾಪಿಸಿತು.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಬೆಂಕಿಯಿಂದ 1 ಕೋ.ರೂ. ನಷ್ಟ ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ