ಕಟೀಲು ಮೇಳದಿಂದ ಹೊರಬಿದ್ದರೆ ಪಟ್ಲ ಸತೀಶ್ ಶೆಟ್ಟರು? ಏನಿದು ಪ್ರಸಂಗ
Team Udayavani, Nov 23, 2019, 11:58 AM IST
ಕಟೀಲು: ಕರಾವಳಿಯ ಗಂಡುಕಲೆ ಯಕ್ಷಗಾನದ ಪ್ರಸಿದ್ಧ ಮೇಳವಾದ ಕಟೀಲು ಮೇಳದಿಂದ ಸ್ಟಾರ್ ಭಾಗವತ ಪಟ್ಲ ಸತೀಶ್ ಶೆಟ್ಟರನ್ನು ಕೈಬಿಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಕಟೀಲು ಯಕ್ಷಗಾನ ಮೇಳಗಳ ಈ ಋತುವಿನ ತಿರುಗಾಟದ ಮೊದಲ ಯಕ್ಷಗಾನವನ್ನು ಶುಕ್ರವಾ ಕಟೀಲು ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿತ್ತು. ಯಕ್ಷಗಾನದ ನಡೆಯುತ್ತಿದ್ದ ಸಮಯದಲ್ಲಿ ಭಾಗವತಿಕೆ ನಡೆಸಲು ಬಂದ ಪಟ್ಲ ಸತೀಶ್ ಶೆಟ್ಟಿಯವರನ್ನು ಎಬ್ಬಿಸಲಾಗಿತ್ತು. ನಂತರ ಮತ್ತೊಬ್ಬರು ಅವರ ಜಾಗದಲ್ಲಿ ಭಾಗವತಿಕೆ ಮುಂದುವರಿಸಿದ್ದರು.
ಇದೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿದ್ದು, ಯಕ್ಷಗಾನ ಪ್ರಿಯರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕಟೀಲು ಮೇಳದಲ್ಲಿ ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ಬೆಳವಣಿಗೆಗಳ ಕಾರಣದಿಂದ ಪಟ್ಲ ಸತೀಶ್ ಶೆಟ್ಟಿಯವರನ್ನು ಮೇಳದಿಂದ ತೆಗೆಯಲಾಗಿದೆ ಎನ್ನಲಾಗಿದೆ. ಮೇಳದ ಕಲಾವಿದರ ಬದಲಾವಣೆಯ ವೇಳೆ ನಡೆದ ಕೆಲ ಭಿನ್ನಾಭಿಪ್ರಾಯದಲ್ಲಿ ಪಟ್ಲ ಭಾಗವತರಿಗೆ ಬೆಂಬಲವಾಗಿದ್ದ ಕಲಾವಿದರನ್ನು ಮೇಳದಿಂದ ತೆಗೆಯಲಾಗಿತ್ತು.
ಶನಿವಾರ ಸಂಜೆ ಮಂಗಳೂರಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ತುರ್ತು ಸಭೆ ಕರೆಯಲಾಗಿದ್ದು, ಇದರ ನಂತರ ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ
Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ